Home / ಕವನ / ಕವಿತೆ / ರಾಮನೇನು ಗೊತ್ತು

ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ
ತ್ಯಾಗರಾಜರಿಲ್ಲದೆ
ಕೃಷ್ಣನೇನು ಗೊತ್ತು
ಪುರಂದರ ದಾಸರಿಲ್ಲದೆ

ಶಿವನೇನು ಗೊತ್ತು ನಮಗೆ
ಅಲ್ಲಮರಿಲ್ಲದೆ
ದಿವವೇನು ಗೊತ್ತು ನಮಗೆ
ಸೂರ್‍ಯಚಂದ್ರರಿಲ್ಲದೆ

ಭಕ್ತಿಯೇನು ಗೊತ್ತು ಆ-
ನಂದವೇನು ಗೊತ್ತು
ಅನುಭವವೇನು ಗೊತ್ತು ಅನು-
ಭಾವವೇನು ಗೊತ್ತು

ಸಂಗೀತವೇನು ಗೊತ್ತು
ನಾದವೇನು ಗೊತ್ತು
ತಾಳಲಯವೇನು ಗೊತ್ತು
ಸಂಸ್ಕಾರವಿಲ್ಲದೆ

ಬುದ್ಧಿಯೇನು ಗೊತ್ತು
ಗಾದೆಯಿಲ್ಲದೆ
ಕಲ್ಪನೆಯೇನು ಗೊತ್ತು
ಕತೆಯಿಲ್ಲದೆ

ಕನಸೇನು ಗೊತ್ತು
ಜೋಗುಳವಿಲ್ಲದೆ
ಆಟವೇನು ಗೊತ್ತು
ಪುಟ್ಟ ಮಕ್ಕಳಿಲ್ಲದೆ

ಋತುವೇನು ಗೊತ್ತು ಬೇ-
ಸಾಯವಿಲ್ಲದೆ
ದಿನ ತಿಥಿಗಳೇನು ಗೊತ್ತು
ಹಬ್ಬಗಳಿಲ್ಲದೆ

ರಾಮಾಯಣ ಮಹಾಭಾರತಗಳೇನು ಗೊತ್ತು
ಕಬ್ಬಗಳಿಲ್ಲದೆ
ಬಂಧುಗಳೇನು ಗೊತ್ತು ಮದುವೆ
ಮುಂಜಿಗಳಿಲ್ಲದೆ

ಮಮತೆಯೇನು ಗೊತ್ತು
ಮಾತೆಯಿಲ್ಲದೆ
ಪ್ರೀತಿಯೇನು ಗೊತ್ತು
ಸಂಸಾರವಿಲ್ಲದೆ

ಅಂದವೇನು ಗೊತ್ತು
ಹೆಣ್ಣಿಲ್ಲದೆ
ಕಲೆಗಳೇನು ಗೊತ್ತು ಒಳ-
ಗಣ್ಣಿಲ್ಲದೆ

ಯಾವುದೇನು ಗೊತ್ತು ತಾ-
ಯ್ನುಡಿಯಿಲ್ಲದೆ
ಜಗವೇನು ಗೊತ್ತು ಜಗ-
ನ್ಮಾತೆಯಿಲ್ಲದೆ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...