Home / ಕವನ / ಕವಿತೆ / ಕಿವುಡರ ಹಾಡು

ಕಿವುಡರ ಹಾಡು

ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧||

ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ|
ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨||

ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್ತಿ ನಿನಗಿರಲಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವು ಕಡಿಗಾದ| ಕೋ ||೩||

ಏ ಗಂಡಾ ಏ ಪುರುಷಾ ಹಾದ್ಯಾಗ ನನಗೊಬ್ಬ|
ರೊಟ್ಟಿ ಬೇಡುತಿದ್ದಾ| ಕೋ ||೪||

ಏ ಭಾರ್‍ಗೆ ಏ ಮೂಳಾ ನಾಕು ಮೂಲಿ ಬೆಳಿಯಲಿ|
ಕಿಂವ್ಯಾಗ್ವಾಲಿ ಬುಗುಡಿ ಮಾಡಸೇನಂದಾ| ಕೋ ||೫||

ಏ ಅತ್ತಿ ಏ ಮಾವಾ ಹೊಲದಾಗ ನನ ಗಂಡಾ|
ಮಲಿಯಾರೆ ಮೂಗಾರೆ ಕೊಯ್ದೇನಂದಾ| ಕೋ ||೬||

ಒಳಗೀನಕ್ಕೆಂತಾ ಆದಾಳ್ಹಾದಾಽಳಂದ ನೆರಮನಿ|
ಕುಂಬಾರ್‍ಗ ನನಗ ಹಾದರಿಟ್ಟಾಽಳ| ಕೋ ||೭||

ಅವ್ರಾಣಿ ಅಪ್ರಾಣಿ ದೇವರಾಣಿ ದಿಂಡರಾಣಿ|
ತೊಗರೀಯ ಗುಗ್ಗರಿ ತಿಂದಿಲ್ಲ ಅತ್ತಿ| ಕೋ ||೮||
****
ಕಿವುಡರ ಹಾಡು

ಗೆಂಡ, ಹೆಂಡತಿ, ಅತ್ತೆ, ಎಲ್ಲರೂ ಕಿವುಡರು. ಒಬ್ಬರು ಒಂದು ಕೇಳಿದರೆ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ. ಮೊದಲು ಸೊಸೆಗೆ ದಾರಿಕಾರನೊಬ್ಬನು ಹಾದಿಯನ್ನು ವಿಚಾರಿಸುವನು. ಇಲ್ಲಿಂದ ಮುಂದೆ ಒಬ್ಬೊಬ್ಬರ ಅಸಂಬದ್ಧ ಪ್ರಲಾಪಕ್ಕೆ ಆರಂಭ.

ಛಂದಸ್ಸು: ತ್ರಿಪದಿಯ ಪೂರ್ವಾರ್ಧ.

ಶಬ್ಧ ಪ್ರಯೋಗಗಳು:- ಭಾರಿಗೆ ಮತ್ತು ಮೂಳ=ಬೈಗುಳುಗಳು.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...