Home / ಲೇಖನ / ಇತರೆ / ಚಾಲಕ ಗ್ರೇಟ್

ಚಾಲಕ ಗ್ರೇಟ್

ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ.

ದಿನಾಂಕ ೦೩-೦೮-೨೦೧೫ ರಂದು ಸೋಮವಾರ ದಿನದಂದು ಬೆಳಗಿನ ಜಾವ ೪ ಗಂಟೆಯಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆಯು ೩೫ ಜನ ಪ್ರಯಾಣಿಕರನ್ನು ಸುಹಾಸ್ ಸುಖಾಸೀನ ಬಸ್‌ನ್ನು ಸುರಕ್ಷಿತವಾಗಿ ಎಡಗಡೆಗೆ ನಿಲ್ಲಿಸುವಲ್ಲಿ ಬಸ್ ಚಾಲಕ ಅಬ್ದುಲ್ ಕೆ. ಕೊಟ್ನಾಳ್ ವಯಸ್ಸು ೩೯ ಇವರ ಸಮಯ ಪ್ರಜ್ಞೆಯನ್ನು ಎಂಥಾದರೂ ಮೆಚ್ಚಲೇಬೇಕು!

ಹೌದು! ಸಾರಿಗೆ ಸಂಸ್ಥೆಯ ಬಸ್ ಚಾಲಕ ತಾನು ಸಾವಿನ ದವಡೆಯಲ್ಲಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಮೇಲೆ ಮೃತಪಟ್ಟ ಕರುಣಾ ಜನಕವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್ ಕುಷ್ಟಗಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದೆ.

ವಿಜಯಪುರ ಜಿಲ್ಲೆ ಇಂಡಿ ಡಿಪೋದ ವಾಹನವು ಬೆಂಗಳೂರಿನಿಂದ ಇಂಡಿಗೆ ಹೋಗುತ್ತಿತ್ತು. ಚಾಲಕ ಹೃದಯಾಘಾತಕ್ಕೆ ಒಳಗಾದ ನಂತರವೂ ಬಸ್ ಚಲಿಸುತ್ತಿತ್ತು! ವೇಗದೂತ ಬಸ್ ವೇಗವಾಗಿ ಚಲಿಸುತ್ತಿತ್ತು ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಬಸ್ಸಿನಲ್ಲಿದ್ದವರು ಗಾಬರಿಬಿದ್ದು ಎದ್ದು ಕುಳಿತರು. ಚಾಲಕನ ಕ್ಯಾಬಿನ್ ಚಿಲಕವಾಕಿತ್ತು! ಏನೆಂದು ನೋಡುವಷ್ಟರಲ್ಲಿ ಬಸ್ ಜಮೀನಿನಲ್ಲಿ ಹೋಗಿ ನಿಂತಿತು! ಚಾಲಕನ ಉಸಿರು ನಿಂತು ಹೋಗಿತ್ತು!

ಇದನ್ನೆಲ್ಲ ಪ್ರಥಮ ವರ್‍ತಮಾನವಾಗಿ ಕುಷ್ಟಗಿ ಡಿಪೋ ಮ್ಯಾನೇಜರ್‌ ಮಂಜುನಾಥ್ ಸಾರಿಗೆ ನಿಯಂತ್ರಕ ಕಾಸೀಂಸಾಬ್‌ ಕಾಯಿಗಡ್ಡೆ ವರದಿ ಮಾಡಿರುವರಲ್ಲದೆ, ಪ್ರಯಾಣಿಕರನ್ನು ಮುಂದಿನ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಹೆದ್ದಾರಿಯ ಟೋಲ್‌ಗೇಟ್ ಅಂಬುಲೆನ್ಸ್ ಮೂಲಕ ಚಾಲಕನ ಮೃತ ದೇಹವನ್ನು ಕುಷ್ಟಗಿ ಸರ್‍ಕಾರಿ ಆಸ್ಪತ್ರೆಗೆ ಕಳಿಸಿರುವರು.

ಇದನ್ನೆಲ್ಲ ನೋಡಿದಾಗ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಗ್ರೇಟ್ ಅಲ್ಲವೇ? ನಾವು ನೀವು ಚಾಲಕರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...