Home / ಲೇಖನ / ಇತರೆ / ಖ್ಯಾತ ನಟರಾಗಿ…

ಖ್ಯಾತ ನಟರಾಗಿ…

ಸಿನಿಮಾ ನಟರೂ ಎಲ್ಲರಂತೆ ಮನುಷ್ಯರು. ನಟನೆಯನ್ನೇ ವೃತ್ತಿ ಪ್ರವೃತ್ತಿಯನ್ನಾಗಿಸಿಕೊಂಡು ತರಬೇತಿ ಪಡೆದುಕೊಂಡು ಕೆಲವರು ಖ್ಯಾತ ನಟರೆನಿಸಿರುವರು. ಅದೂ ಅವರ ವರಮಾನದ ಮೇಲೆ…

ಈಗೀಗ ಭವ್ಯಭಾರತದಲ್ಲಿ ಬಾಲಿವುಡ್ ಚಿತ್ರಗಳ ಬಾಕ್ಸ್‌ಆಫೀಸ್ ಗಳಿಕೆ ನೂರಾರು ಕೋಟಿ ರೂಪಾಯಿ ಮೀರುತ್ತಿವೆಯಾದರೂ ಅವುಗಳ ಸಂಪಾದನೆ ಹಾಲಿವುಡ್ ಚಿತ್ರಗಳನ್ನು ಮೀರಿಸುತ್ತಿಲ್ಲವೆಂಬ ಮಾತು ಅಲ್ಲಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ!

ಬೆಂಕಿಯಿಲ್ಲದೆ ಹೊಗೆ ಏಳದು ಎಂಬಂತೆ ಆಗಸ್ಟ್ ೨೦೧೫ರಲ್ಲಿ ಫೋರ್‍ಬ್ಸ್ ಪ್ರಕಟಿಸಿರುವ ವಿಶ್ವದ ಸಿರಿವಂತರ ಮಹಾಪಟ್ಟಿಯಲ್ಲಿ ಮುಂಬಯಿಯ ಐವರು ನಟರು ಇದ್ದಾರೆ!

ಈ ಹಿಂದೆ- ಶಾರುಖ್ ಖಾನ್ ಅವರು ಇದೇ ಫೋರ್‍ಬ್ಸ್ ಪಟ್ಟಿಯಲ್ಲಿದ್ದಿದು ತಮಗೆಲ್ಲ ತಿಳಿದಿರಬಹುದು ಎಂದುಕೊಂಡಿದ್ದೇನೆ! ಆದರೆ… ಈ ಸಾರಿ ಅವರನ್ನು ಓವರ್ ಟೇಕ್ ಮಾಡಿ ಮತ್ತಷ್ಟು ನಟರು ಈಗಾಗಲೇ ಮುನ್ನುಗ್ಗಿವರು….

ಸೂಪರ್‌ಸ್ಟಾರ್‌ ಬಿಗ್‌ಬಿ ಅಮಿತಾಭ್ ಬಚ್ಚನ್- ಬ್ಯಾಡ್‌ಬಾಯ್ ಸಲ್ಮಾನ್ – ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್, ಶಾರುಖ್ ಖಾನ್, ರಣಬೀರ್ ಕಪೂರ್‌- ಈ ಬಿಗ್ ಪಟ್ಟಿಯಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ತೀರಾ ಯಶಸ್ವಿಯಾಗಿರುವರು.

ಬಹಳ ವಿಸ್ಮಯದ ಸಂಗತಿಯೆಂದರೆ… ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಬ್ಯಾಡ್ ಬಾಯ್ ಸಲ್ಮಾನ್‌ಖಾನ್ ಸರಿಸಮಾನವಾಗಿ ಏಳನೆಯ ಅದ್ಭುತ ಸ್ಥಾನಮಾನವನ್ನು ಹಂಚಿಕೊಂಡಿರುವರು!

ಅದೇ ಒಂಭತ್ತನೆಯ ರ್‍ಯಾಂಕ್‌ನಲ್ಲಿ ನಮ್ಮ ಆಕ್ಷನ್‌ಕಿಂಗ್ ಅಕ್ಷಯ್‌ ಕುಮಾರ್‌ ಪಡೆಯುವಲ್ಲಿ ಸಫಲರಾಗಿರುವರು.

ಅಮಿತಾಭ್ ಮತ್ತು ಸಲ್ಮಾನ್‌ಖಾನ್ ವಾರ್ಷಿಕವಾಗಿ ಇವರೀರ್ವರು ೨೧೩ ಕೋಟಿ ರೂಪಾಯಿ ಗಳಿಕೆ ಹೊಂದಿರುವರು. ಅದೇ ಅಕ್ಷಯ್‌ ವಾರ್ಷಿಕವಾಗಿ ೨೦೭ ಕೋಟಿ ವರಮಾನ ಹೊಂದಿರುವರು. ಶಾರುಖ್ ಖಾನ್ ೧೬೫ ಕೋಟಿ ರೂಪಾಯಿ ಗಳಿಕೆ ಹೊಂದಿದ್ದು ೧೮ನೆಯ ಸ್ಥಾನದಲ್ಲಿ ಉಳಿದಿದ್ದಾರೆ. ಇನ್ನು ೩೦ನೆಯ ಬ್ಯಾಂಕಿನಲ್ಲಿ ರಣಬೀರ್ ಕಪೂರ್ ಇದ್ದು ೯೫ ಕೋಟಿ ರೂಪಾಯಿಗೆ ತೃಪ್ತಿಪಟ್ಟು ಕೊಂಡಿರುವರು.

ಅಬ್ಬಾ! ಬಾಲಿವುಡ್‌ನ ಇಷ್ಟೂ ನಟರ ಗಳಿಕೆಯು ವಾರ್ಷಿಕವಾಗಿ ೮೯೫ ಕೋಟಿ ರೂಪಾಯಿ ಮುಟ್ಟಿದೆ.

ಆದ್ದರಿಂದ ಮಕ್ಕಳೆ ನೀವೆಲ್ಲ ಇನ್ನು ಮುಂದೆ ಸಿನಿಮಾ ನಟರಾಗುವ ಗುರಿ ಹೊಂದಿರಿ. ಅದಕ್ಕಾಗಿ ನಟನೆ, ಮಾತು, ಹಾಸ್ಯ, ಮೈಕಟ್ಟು ಹೊಂದಿ. ಬರೀ ಡಾಕ್ಟರ್ ಇಂಜಿನಿಯರ್ ಐ‌ಎ‌ಎಸ್, ಐಪಿ‌ಎಸ್ ಎಂದು ಹತ್ತರಲ್ಲಿ ಹನ್ನೊಂದನೆಯವರಾಗಿ ಕೊರಗದಿರಿ, ಪುಸ್ತಕದ ಹುಳುವಾಗದಿರಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...