Home / ಕಥೆ / ಸಣ್ಣ ಕಥೆ / ಹುಚ್ಚನ ಕರಿಯ

ಹುಚ್ಚನ ಕರಿಯ

ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್ರಶೇಖರಯ್ಯರೆಂಬ ಮೂವರು-ಲಕ್ಷ್ಮೀ ಕಾಂತಯ್ಯನ ಬಲತಾಯಿ ಚನ್ನಾಜಯಮ್ಮಯ್ಯನ ಮಕ್ಕಳು-ಆ ಗ್ರಾಮವನ್ನು ತಾವೇ ಅನುಭವಿಸಬೇಕೆಂದು ದುರಾಲೋಚನೆಮಾಡಿ ಲಕ್ಷ್ಮೀ ಕಾಂತಯ್ಯನನ್ನು ಮೋಸದಿಂದ ಕೊಂದುಬಿಟ್ಟರು. ತರುವಾಯ ಮಲ್ಲರಾಜಯ್ಯನೆಂಬ ೫ ವರ್ಷದ ಹುಡುಗನನ್ನು ಕೊಲ್ಲಲು ಸಿದ್ದರಾದರು; ಆ ಹುಡುಗನು ರಾಜ ಒಡೆಯರ ಅಕ್ಕಂದಿರು ದೇವಾಜಮ್ಮಣ್ಣಿಯ ಮಗನೂ-ಲಕ್ಷ್ಮಿ ಕಾಂತಯ್ಯನ ಸಹೋದರನೂ ಆಗಿದ್ದನು. ಈ ಹುಡುಗನ ಕೊಲೆಗೆ ಈ ಮೂವರು ಸಿದ್ದರಾಗಿದ್ದು ಅವನನ್ನು ಹುಡುಕುತ್ತಲಿದ್ದರು.

ಆ ಕಾಲದಲ್ಲಿ ಆ ಹುಡುಗನು ಕುರುಬಗೇರಿಗೆ ಓಡಿದನು. ಅಲ್ಲಿ ಕುರುಬರ ‘ಹುಚ್ಚನ ಕರಿಯ’ ಎಂಬವನು ಆ ಬಾಲಕನನ್ನು ಗೋಪ್ಯವಾಗಿ ಸಂರಕ್ಷಿಸಿ, ರಾಜರ ಸೋದರಳಿಯನೆಂದು ತಿಳಿದು, ರಾತ್ರಿ ವೇಳೆಯಲ್ಲಿ ಹೊರಟು ಆ ಬಾಲಕನನ್ನು ತಂದು ರಾಜರಿಗೊಪ್ಪಿಸಿದನು. ರಾಜರು ಮಲ್ಲರಾಜಯ್ಯನ ವೃತ್ತಾಂತವನ್ನು ತಿಳಿದು ವ್ಯಸನ ಪಟ್ಟು ಆ ಮೂವರನ್ನು ಶಿಕ್ಷಿಸಲು ಸಂಕಲ್ಪ ಮಾಡಿಕೊಂಡರು.

ಅತ್ತಲಾಗಿ ಲಕ್ಷ್ಮೀಕಾಂತಯ್ಯನು ದುರ್ಮರಣಕ್ಕೆ ಸಿಕ್ಕ ಮೇಲೆ ಆತನ ಹೆಂಡತಿ ಲಿಂಗಾಜಮ್ಮಯ್ಯನೆಂಬುವಳು ಸಹಗಮನಕ್ಕೆ ಸಿದ್ಧಳಾದಳು. ಅಗ್ನಿಕುಂಡದಲ್ಲಿ ಧುಮುಕುವ ಮುನ್ನ ಆಕೆಯು “ನನ್ನ ಗಂಡನನ್ನು ಅನ್ಯಾಯದಿಂದ ವಧಿಸಿದ ಬಲ ಅತ್ತೇ ಮಕ್ಕಳ ಮೂವರ ವಂಶವೂ ನಷ್ಟವಾಗಲಿ; ಕಳಲೇ ಅರಸುಗಳು ಕೂಡ್ಲಾಪುರ ಬತ್ತದ ಅಕ್ಕಿಯನ್ನೇ ವಿಶ್ವಾಸದಿಂದ ಊಟಮಾಡುವದರಿಂದ ಆ ಅನ್ನವು ರಕ್ತದ ಕೂಳಿನಂತೆ ಆಗಲಿ; ನನ್ನ ಬಾಳು ತಪ್ಪಿಸಿದ ನನ್ನ ಗಂಡನ ವಂಶದ ಹೆಣ್ಣು ಮಕ್ಕಳು ಚನ್ನಾಗಿ ಬಾಳದೆ ಇರಲಿ; ಮತ್ತು, ಧರ್ಮಾತ್ಮರಾದ ಮಹೀಶರ ಮನೆತನದಲ್ಲಿ ಹುಟ್ಟಿದ ನನ್ನ ಬಲ ಅತ್ತೆಯಾದ ದೇವಾಜಮ್ಮಣ್ಣಿಯವರಿಗೆ ಪುತ್ರನ ವಂಶವು ನಡೆಯಲಿ” ಎಂದು ನುಡಿದಳು.

ವಯಸ್ಸು ಬಂದಮೇಲೆ ಮಲ್ಲರಾಜಯ್ಯನನ್ನು ರಾಜರು ದಳವಾಯಿತನಕ್ಕೆ ಗೊತ್ತುಮಾಡಿದರು. ಆದರೆ ಮಲ್ಲರಾಜಯ್ಯನು ಆ ಪದವಿಗೆ ಅಯೋಗ್ಯನಾಗಿದ್ದನು. ಕೆಲವು ದಿನಗಳಲ್ಲಿಯೇ ತನ್ನ ಮೊಮ್ಮಗನ ಮೂಲಕ ದಳವಾಯತನದ ಉಂಗುರವನ್ನು ರಾಜರಿಗೆ ಕಳಹಿಸಿಟ್ಟು ತಾವು ಸೋಮಾರಿಯಾಗಿಯೇ ಇದ್ದನು.
*****
[ವಂಶರತ್ನಾಕರ ಪುಟ ೪೬-೪೭ ; ವಂಶಾವಳಿ ಸಂ. ೧, ಪುಟ ೪೬, ೪೭ ಹೊಸ ಗೆಜಟಿಯರ್‌ ಸಂಪುಟ ೫, ಪುಟ ೬೮೭]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...