Home / ಕವನ / ಕವಿತೆ / ಹೊನಲ ಹಾಡು

ಹೊನಲ ಹಾಡು

ಸ್ಥವಿರ ಗಿರಿಯ ಚಲನದಾಸೆ,
ಮೂಕ ವನದ ಗೀತದಾಸೆ,
ಸೃಷ್ಟಿ ಹೊರೆಯ ಹೊತ್ತ ತಿರೆಯ
ನಗುವಿನಾಸೆ ನಾ.
ಬಾಳ್ವೆಗೆಲ್ಲ ನಾನೆ ನಚ್ಚು,
ಲೋಕಕೆಲ್ಲ ಅಚ್ಚುಮೆಚ್ಚು,
ನಾನೆ ನಾನೆ ವಿಧಿಯ ಹುಚ್ಚು,
ಹೊನಲ ರಾಣಿ ನಾ.

ಕಿರಣ ನೆಯ್ದ ಸರಿಗೆಯುಡಿಗೆ,
ಇರುಳು ಕೊಟ್ಟ ತಾರೆತೊಡಿಗೆ,
ಇಂದುಕಳೆಯ ಹೂವೆ ಮುಡಿಗೆ –
ದೇವಕನ್ಯ ನಾ.
ಬೆಳ್ಳಿ ನೊರೆಯ ನಗೆ ನಗುತ್ತ,
ತೆರೆಯ ನಿರಿಯ ಚಿಮುಕಿಸುತ್ತ,
ಕಡಲ ವರಿಸೆ ತವಕಿಸುತ್ತ,
ನಡೆವ ವಧುವೆ ನಾ.

ನಲಿತ ಕುಣಿತವೆನ್ನ ಶೀಲ,
ಚಲನವೆನ್ನ ಜೀವಾಳ,
ಲುಪ್ತಮಾಗೆ ದೇಶಕಾಲ
ಎನ್ನ ಗಾಯನಾ.
ದಡದ ಗಿಡಕೆ ಪುಷ್ಪಹಾಸ,
ಸನಿಯದಿಳೆಗೆ ಸಸ್ಯಹಾಸ,
ಹಾಸಕೀರ್ಣ, ಹಾಸಪೂರ್ಣ,
ಎನ್ನ ಜೀವನಾ.

ಹೂವಿನಾಸೆಯನ್ನು ತೋರಿ
ಎಲೆಯ ಕಣ್ಣನೀರ ಕಾರಿ
ರೆಂಬೆಯಡ್ಡಗಟ್ಟಿ, ಹಳುವು
ಆಡೆ ಕರೆವುದು;
ಬೆಟ್ಟ ಮುದ್ದು ಮಾಡಲೆಂದು,
ಮಡುವು ಹಾದಿ ತಂಗಲೆಂದು,
ಕಡಲು ಒಲುಮೆ ಸಾಲದೆಂದು-
ನನ್ನ ತಡೆವುದು.

ನಾನು ನಿಲ್ವುದೊಂದೆ ಚಣಂ
ಸತತ ಕರ್ಮವೆನ್ನ ಗುಣಂ
ಅದಕೆ, ಕಾಣೆ ಗೋಳನಣಂ
ಹರ್ಷಮೆನಗೆ ಚಿರಂತಣಂ.

ಗವಿಗಳಲ್ಲಿ ಹುಳನಡಗಿ
ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲನೆ ಜರುಗಿ
ಕಡಲಿಗೋಡುವೆ;
ಬಿಸಿಲ ಕೋಲ ಹಿಡಿದು ಹತ್ತಿ
ನೀರ ತೇರನೇರಿ ಸುತ್ತಿ
ತಿರುಗಿ ತಿರೆಯ ಮಡಿಲಿನಲ್ಲಿ
ಧುಮುಕಿ ಹರಿಯುವೆ.

ಅಚರ ಜಗದ ಚಲನದಾಸೆ
ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ
ನಗುವಿನಾಸೆ ನಾ.
ವನವಿನೋದ, ಮಲೆಯ ಮೋದ,
ಮುಗಿಲ ಮೇಲ್ಮೆ, ನಾಡ ನಲ್ಮೆ,
ನಾನೆ ನಾನೆ ದಿವದ ಕೂರ್ಮೆ-
ಪೊನಲ ರಾಣಿ ನಾ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...