Home / ಕವನ / ಕವಿತೆ / ಹೊನಲ ಹಾಡು

ಹೊನಲ ಹಾಡು

ಸ್ಥವಿರ ಗಿರಿಯ ಚಲನದಾಸೆ,
ಮೂಕ ವನದ ಗೀತದಾಸೆ,
ಸೃಷ್ಟಿ ಹೊರೆಯ ಹೊತ್ತ ತಿರೆಯ
ನಗುವಿನಾಸೆ ನಾ.
ಬಾಳ್ವೆಗೆಲ್ಲ ನಾನೆ ನಚ್ಚು,
ಲೋಕಕೆಲ್ಲ ಅಚ್ಚುಮೆಚ್ಚು,
ನಾನೆ ನಾನೆ ವಿಧಿಯ ಹುಚ್ಚು,
ಹೊನಲ ರಾಣಿ ನಾ.

ಕಿರಣ ನೆಯ್ದ ಸರಿಗೆಯುಡಿಗೆ,
ಇರುಳು ಕೊಟ್ಟ ತಾರೆತೊಡಿಗೆ,
ಇಂದುಕಳೆಯ ಹೂವೆ ಮುಡಿಗೆ –
ದೇವಕನ್ಯ ನಾ.
ಬೆಳ್ಳಿ ನೊರೆಯ ನಗೆ ನಗುತ್ತ,
ತೆರೆಯ ನಿರಿಯ ಚಿಮುಕಿಸುತ್ತ,
ಕಡಲ ವರಿಸೆ ತವಕಿಸುತ್ತ,
ನಡೆವ ವಧುವೆ ನಾ.

ನಲಿತ ಕುಣಿತವೆನ್ನ ಶೀಲ,
ಚಲನವೆನ್ನ ಜೀವಾಳ,
ಲುಪ್ತಮಾಗೆ ದೇಶಕಾಲ
ಎನ್ನ ಗಾಯನಾ.
ದಡದ ಗಿಡಕೆ ಪುಷ್ಪಹಾಸ,
ಸನಿಯದಿಳೆಗೆ ಸಸ್ಯಹಾಸ,
ಹಾಸಕೀರ್ಣ, ಹಾಸಪೂರ್ಣ,
ಎನ್ನ ಜೀವನಾ.

ಹೂವಿನಾಸೆಯನ್ನು ತೋರಿ
ಎಲೆಯ ಕಣ್ಣನೀರ ಕಾರಿ
ರೆಂಬೆಯಡ್ಡಗಟ್ಟಿ, ಹಳುವು
ಆಡೆ ಕರೆವುದು;
ಬೆಟ್ಟ ಮುದ್ದು ಮಾಡಲೆಂದು,
ಮಡುವು ಹಾದಿ ತಂಗಲೆಂದು,
ಕಡಲು ಒಲುಮೆ ಸಾಲದೆಂದು-
ನನ್ನ ತಡೆವುದು.

ನಾನು ನಿಲ್ವುದೊಂದೆ ಚಣಂ
ಸತತ ಕರ್ಮವೆನ್ನ ಗುಣಂ
ಅದಕೆ, ಕಾಣೆ ಗೋಳನಣಂ
ಹರ್ಷಮೆನಗೆ ಚಿರಂತಣಂ.

ಗವಿಗಳಲ್ಲಿ ಹುಳನಡಗಿ
ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲನೆ ಜರುಗಿ
ಕಡಲಿಗೋಡುವೆ;
ಬಿಸಿಲ ಕೋಲ ಹಿಡಿದು ಹತ್ತಿ
ನೀರ ತೇರನೇರಿ ಸುತ್ತಿ
ತಿರುಗಿ ತಿರೆಯ ಮಡಿಲಿನಲ್ಲಿ
ಧುಮುಕಿ ಹರಿಯುವೆ.

ಅಚರ ಜಗದ ಚಲನದಾಸೆ
ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ
ನಗುವಿನಾಸೆ ನಾ.
ವನವಿನೋದ, ಮಲೆಯ ಮೋದ,
ಮುಗಿಲ ಮೇಲ್ಮೆ, ನಾಡ ನಲ್ಮೆ,
ನಾನೆ ನಾನೆ ದಿವದ ಕೂರ್ಮೆ-
ಪೊನಲ ರಾಣಿ ನಾ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...