Home / ಲೇಖನ / ವಿಜ್ಞಾನ / ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ ಬದಲು ಮೀಟರ್ ರೀಡಿಂಗ್ ಸಹ ಪುಟ್ಟ ಯಂತ್ರದಲ್ಲಿ ತೋರಿಸಿ ಅಲ್ಲಿಯೇ ಒಂದಿಷ್ಟು ತಪ್ಪಾಗದಂತೆ ಬಿಲ್ಲುತೋರಿಸಿ, ರಸೀದಿ ನೀಡುವ ವ್ಯವಸ್ಥೆ ಗೊಳಿಸಲಾಗಿದೆ.

ನಗರ ಪಟ್ಟಣ ಪ್ರದೇಶಗಳಲ್ಲದೇ ಹಳ್ಳಿಹಳ್ಳಿಗೂ ತಲುಪಿ ಹೊಸ ಹೊಸ ರೀತಿಯ ವಿದ್ಯುತ್‌ಬಿಲ್ ನೀಡುವ ಮೂಲಕ ಗ್ರಾಹಕರಿಗೆ ಕುತೂಹಲ ಕೆರಳಿಸಿದೆ. ಹಿಂದಿನಂತೆ ಪದೇ ಪದೇ ತಲೆ ಎತ್ತಿ ನೋಡುವ ಕ್ರಿಯೆಗೆ ಸೆನ್ಸಾರ್ ಹಾಕಿರುವ ಈ ಯಂತ್ರ ಒಂದು ರೀತಿಯ ಕ್ಯಾಲ್ಯುಕುಲೇಟರ್ನಂತೆಯೇ ಕೆಲಸಮಾಡುತ್ತದೆ. ಮತ್ತು ವಿದ್ಯುತ್ ಮೂಲಕ ಬಿಲ್ಲು ನೀಡುವಾಗ ಒಮ್ಮೆ ಮೀಟರ್‌ನ ನಂಬರ್ ಹಾಗೂ ಮೀಟರ ಓಡಿರುವ ಯುನಿಟ್‌ಗಳನ್ನು ಫೀಡ್ ಮಾಡಿದರೆ ಸಾಕು. ಮಿಕ್ಕೆಲ್ಲ ಕೆಲಸಗಳನ್ನು ತನ್ನಿಂದ ತಾನೇ ಮಾಡಿ ಬಾಕಿ ಹಣ ಉಳಿದಿದ್ದರೆ ಅದನ್ನು ಸುಲಭವಾಗಿ ಈ ಯಂತ್ರ ತೋರಿಸುತ್ತದೆ. ಆರಂಭದಲ್ಲಿ ಕೆಲ ಬಿಲ್ಲುಗಳ ರೀಡರ್‌ಗಳ ತಪ್ಪಿನಿಂದಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಕಂಪ್ಯೂಟರಿಕೃತ ಬಿಲ್‌ರೀಡಿಂಗ್ ಯಂತ್ರವು ಸುವ್ಯವಸ್ಥಿತವಾಗಿ ಗೊಂದಲಗಳನ್ನು ನಿವಾರಿಸಿ ನೂತನ ಯಂತ್ರದ ಸಹಾಯದಿಂದ ಗ್ರಾಹಕರಿಗೆ ತಲುಪಿಸುತ್ತದೆ (ರಸೀದಿ) . ಜತೆಗೆ ಬಿಲ್ ಫೀಡ್ ಮಾಡಿದವರ ಹೆಸರೂ ಸಹ ಇದರಲ್ಲಿ ಅಚ್ಚಾಗಿರುತ್ತದೆ. ಒಟ್ಟಿನಲ್ಲಿ ವಿದ್ಯುತ್ ರೀಡಿಂಗ್ ಬಿಲ್ ಸಹ ಕಂಪ್ಯೂಟರೀಕರಣಗೊಂಡುದದು ಆಧುನಿಕತೆಗೆ ಸಾಕ್ಷಿಯಾಗಿದೆ. ಈ ಬಿಲ್ ರೀಡಿಂಗ್ ನಿಂದ ರಸೀದಿ ಪುಸ್ತಕಗಳನ್ನು ಮಾಡಿಸುವುದು, ಅವುಗಳನ್ನು ಫೈಲ್ ಮಾಡುವುದು ಕೂಡ ತಪ್ಪುತ್ತದೆ. ಇದು ಪ್ರತಿ ತಿಂಗಳೂ ಬರುತ್ತದೆ. ಈ ಯಂತ್ರದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗ್ರಾಹಕರಿಗೆ ಯಾಂತ್ರೀಕೃತ ಬಿಲ್ ನೀಡುವ ಮೂಲಕ ರಸೀದಿಯಲ್ಲಿ ತಿದ್ದುವ ತಪ್ಪು ಲೆಕ್ಕ ಬರೆಯಲು ಆಸ್ಪದ ಆಗದೇ ಇರುವುದರಿಂದ ಇದೊಂದು ವಿಜ್ಞಾನ ಕ್ಷೇತ್ರದ ಕೊಡುಗೆಯಾಗಿದೆ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...