Home / ಕವನ / ಕವಿತೆ / ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು
ತಾಯೆ ಎಂದರಚಲುಂ ಮಿಸುಕದಿರೆ ರಸನೆ,
ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು
ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪

ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು
ತನ್ನ ತಾನರಿತೆದ್ದು ನಿಡುನಿಲ್ಲಲಹುದೇ?
ರವಿ ಚಿತ್ರಿಪಂತೆ ಚಿತ್ರಿಪನೆ ಪುಷ್ಪಮನಿಂದು?
ನೀನೀನ ಜೀವ ದಾಯಿಯಿನೆಮಗೆ ಬಹುದೇ? ೮

ತಾಯೆ ನಿನ್ನಯ ಪುಣ್ಯಪೀಯೂಷಸ್ತನ್ಯಂ
ಸೂಸುತಿದೆ, ರಾಷ್ಟ್ರೀಯ ಶಿಕ್ಷಣಮನನ್ಯಂ ?
ನವಜೀವನದ ಬುಗ್ಗೆಯಿದನೊಂದನೆಮ್ಮ
ಹೃದಯದ ನಿದಾಘದಿಂ ಬತ್ತಿಸದಿರಮ್ಮ! ೧೨

ಕತ್ತಲೆ ಕವಿದ ನಮ್ಮ ಕಂಗಳಿಗೆ ಪರೆ ನೆರೆಯೆ,
ನಮ್ಮ ನಾವ್ಮರೆತು ನಮ್ಮವರ ಮರೆವನ್ನಂ,
ಚೆದರಿ ನಮ್ಮೊಳಗೆ ಜಗಳಾಡಲೇನಚ್ಚರಿಯೆ?
ಸಾಕಿನಿತು! ರಾಷ್ಟ್ರೀಯ ಶಿಕ್ಷಣಮೆ ನಿನ್ನ ೧೬

ದೀಧಿತಿಯಿನೆಮ್ಮಯ ಮನೋನಯನಮಂ ತೆರೆದು,
ಭೇದಗಳ ಬಿರುವರೆಯ ಹೆರೆಯಿಸುವುದಲ್ಲಿ!
ನಾನೆ ನಾ ನೀನೆ ನೀನಿದನೆಮ್ಮೆದೆಯಿನರೆದು
ನಾವು ನಾವೆಂಬ ಭಾಷೆಯ ಕೆತ್ತಿಸಲ್ಲಿ! ೨೦

ಕ್ರೈಸ್ತ ಪಾರಸಿ ಜೈನ ಮುಸಲಮಾನ್‌ ಹಿಂದು
ವೆಮಗೆಲ್ಲರಿಗೆ ನಮ್ಮ ಭಾರತಮಿದೊಂದು
ತವರು ಗಡ! ರಾಷ್ಟ್ರೀಯ ಶಿಕ್ಷಣಮೆ ಬಂದು
ಒಟ್ಟಿನ ತವರ್‍ತನವನೆಸಗಿನ್ನು ಮುಂದು! ೨೪

ಎದ್ದೇಳಿರೈ ಬಂಧುಗಳಿರ! ಕೆಲವರಿಯುತಿದೆ
ರಾಷ್ಟ್ರೀಯ ಶಿಕ್ಷಣದ ಸಪ್ತಾಹಮಿಂದು!
ತಂತನೂಳಿಗವ ಗೆಯ್ಯಿರಿಮೆಂದು ಕರೆಯುತಿದೆ,
ಬಂಗಾರಮಪ್ಪುದು ಭವಿಷ್ಯ ವಲಮೆಂದು! ೨೮

ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೆ ಬಿಜ್ಜೆ!
ಹೆರರ ನಾಲಗೆಯೆಂಜಲೆನ್ನೆಗಂ ಸವಿಯೊ?
ತನ್ನ ಮುಂಗತಿ ತೋರೆ ತನ್ನ ಹಿರಿಯರ ಹೆಜ್ಜೆ!
ಹೆರರ ಬೆಳಕೊಳೆ ಕಾಂಬ ತನ್ನವರ ೧ ಕವಿಯೊ? ೩೨

ಅವರವರ ನುಡಿಗಳಿಂದವರವರ ಜಾಣಿ
ಕೆಯನೆಚ್ಚರಿಸುವ ನುಡಿಗಳ ತಾಯೆ ವಾಣಿ!
ನಿರವಶೇಷ ಜ್ಞಾನದರ್‍ಜನವನೆಮ್ಮ
ನುಡಿಯಿನೆಮಗಿತ್ತು ಭಾರತವ ಸಲಹಮ್ಮ! ೩೬
*****
ದ್ರುಷ್ಟಾರ (seer)

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...