Home / ಲೇಖನ / ಇತರೆ / ಭಾರತ ಕಮ್ಮಿಯಿಲ್ಲ

ಭಾರತ ಕಮ್ಮಿಯಿಲ್ಲ

“ಫಾರ್ಚೂನ್- ೫೦೦ ಲಾರ್‍ಜೆಸ್ಟ್ ಕಂಪೆನೀಸ್” ಪಟ್ಟಿಯಲ್ಲಿ ಇಡೀ ವಿಶ್ವದ ೫೦೦ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭವ್ಯ ಭಾರತದ ಏಳು ಅದ್ಭುತ ಕಂಪನಿಗಳೂ ಸ್ಥಾನಮಾನ ಪಡೆದುಕೊಂಡಿರುವುದೊಂದು ಹೆಗ್ಗಳಿಕೆಯ ವಿಷಯವಾಗಿದೆ.

೧ ಭವ್ಯ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ‌ಎನ್‌ಜಿಸಿ)

೨ ಭಾರತೀಯ ತೈಲ ನಿಗಮ (ಐ‌ಒಸಿ)

೩ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷಸನ್ ಲಿಮಿಟೆಡ್ (ಎಚ್ ಪಿಸಿ‌ಎಲ್)

೪ ರಿಲಿಯನ್ಸ್ ಇಂಡಸ್ಟ್ರೀಸ್

೫ ಟಾಟಾ ಮೋಟಾರ್‍ಸ್

೬ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿ‌ಐ)

೭ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿ‌ಎಲ್)

ಇವೆಲ್ಲ “ಫಾರ್ಚೂನ್ ೫೦೦ ಲಾರ್‍ಜ್‌ಸ್ಟ್ ಕಂಪನೀಸ್” ಪಟ್ಟಿಗೆ ಸೇರಿವೆ.

ಜಾಗತಿಕ ಮಟ್ಟದ ಈ ೫೦೦ ಬೃಹತ್ ಕಂಪನಿಗಳು ೨೦೧೪ ರಲ್ಲಿ ಒಟ್ಟಾರೆಯಾಗಿ ೩೧.೨ ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು ಒಟ್ಟು ೧.೭೦ ಲಕ್ಷ ಕೋಟಿ ಡಾಲರ್‌ಗಳಷ್ಟು ನಿವ್ವಳ ಲಾಭದತ್ತ ಮುನ್ನಡೆದಿದ್ದವು!

ಈ ೫೦೦ ಕಂಪನಿಗಳು ವಿಶ್ವದ ೩೬ ದೇಶವಿದೇಶಗಳಲ್ಲಿ ವಹಿವಾಟು ನಡೆಸಿದ್ದು ಒಟ್ಟಾರೆಯಾಗಿ ೬೫ ಲಕ್ಷ ಮಂದಿಗೆ ಈಗಾಗಲೇ ಉದ್ಯೋಗ ನೀಡಿವೆ.

ಈ ಫಾರ್ಚೂನ್ ೫೦೦ ಲಾರ್‍ಜೆಸ್ಟ್ ಕಂಪನೀಸ್- ಪಟ್ಟಿಯಲ್ಲಿ ವಾಲ್‌ಮಾರ್ಟ್ ಮೊತ್ತ ಮೊದಲ ಸ್ಥಾನದಲ್ಲಿದೆ.

ಚೀನಾದ ತೈಲ ಸಂಸ್ಕರಣೆ ಕಂಪನಿ ಆನ್ ಒಪೆಕ್ ಗ್ರೂಪ್ ಎರಡನೆಯ ಸ್ಥಾನದಲ್ಲಿದೆ.

ನೆದರ್‌ಲೆಂಡಿನ ರಾಯಲ್ ಡಚ್‌ಷಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಎಕ್ಸಾನ್ ಮೊಬಿಲ್ ನಂತರದ ಸ್ಥಾನಮಾನದಲ್ಲಿದೆ.

ಈ ೫೦೦ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಆಪಲ್ ೧೫ ನೇ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ೬೧ ನೇ ಸ್ಥಾನದಲ್ಲಿ, ಐಬಿ‌ಎಂ ೮೨ ನೆಯ ಸ್ಥಾನದಲ್ಲಿ, ಮೈಕ್ರೋಸಾಫ್ಟ್ ೯೫ ನೆಯ ಸ್ಥಾನದಲ್ಲಿ ಗೂಗಲ್ ೧೨೪ ನೆಯ ಸ್ಥಾನದಲ್ಲಿ ಪೆಪ್ಸಿ ೧೪೧ ನೆಯ ಸ್ಥಾನದಲ್ಲಿ ಇಂಟೆಲ್ ೧೮೨ ನೆಯ ಸ್ಥಾನದಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್ ೨೭೮ ನೆಯ ಸ್ಥಾನದಲ್ಲಿ ಇವೆಲ್ಲ ಕಂಪನಿಗಳು ಅಮೆರಿಕ ಮೂಲದವೇ ಆಗಿವೆ.

ಹೋದ ವರ್ಷದೊಂದಿಗೆ ತುಲನೆ ಮಾಡಿದಲ್ಲಿ ಈ ಬಾರಿ ಟಾಟಾ ಮೋಟಾರ್ಸ್ ಹಾಗೂ ಎಸ್‌ಬಿ‌ಐ, ಒ‌ಎನ್‌ಜಿಸಿ- ರಿಲಯನ್ಸ್- ಎಚ್‌ಪಿಸಿ‌ಎಲ್‌- ಬಿಪಿಸಿ‌ಎಲ್ ಇವೆಲ್ಲ ಫಾರ್ಚೂನ್ ಪಟ್ಟಿಯ ಬ್ಯಾಂಕಿಂಗ್‌ನಲ್ಲಿ ಕೆಳಕ್ಕಿಳಿದಿವೆ.

ಏನೇ ಇದ್ದರೂ ಭವ್ಯ ಭಾರತದ ಕಂಪನಿಗಳು ಬೇರೆ ಯಾವುದೇ ದೇಶದ ಕಂಪನಿಗಳಿಗಿಂತ, ಕಡಿಮೆ ಇಲ್ಲವೆಂಬುದೊಂದು ಹೆಗ್ಗಳಿಕೆಯಲ್ಲವೇ??
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...