Home / ಲೇಖನ / ಇತರೆ / ಭಾರತ ಕಮ್ಮಿಯಿಲ್ಲ

ಭಾರತ ಕಮ್ಮಿಯಿಲ್ಲ

“ಫಾರ್ಚೂನ್- ೫೦೦ ಲಾರ್‍ಜೆಸ್ಟ್ ಕಂಪೆನೀಸ್” ಪಟ್ಟಿಯಲ್ಲಿ ಇಡೀ ವಿಶ್ವದ ೫೦೦ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭವ್ಯ ಭಾರತದ ಏಳು ಅದ್ಭುತ ಕಂಪನಿಗಳೂ ಸ್ಥಾನಮಾನ ಪಡೆದುಕೊಂಡಿರುವುದೊಂದು ಹೆಗ್ಗಳಿಕೆಯ ವಿಷಯವಾಗಿದೆ.

೧ ಭವ್ಯ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ‌ಎನ್‌ಜಿಸಿ)

೨ ಭಾರತೀಯ ತೈಲ ನಿಗಮ (ಐ‌ಒಸಿ)

೩ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷಸನ್ ಲಿಮಿಟೆಡ್ (ಎಚ್ ಪಿಸಿ‌ಎಲ್)

೪ ರಿಲಿಯನ್ಸ್ ಇಂಡಸ್ಟ್ರೀಸ್

೫ ಟಾಟಾ ಮೋಟಾರ್‍ಸ್

೬ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿ‌ಐ)

೭ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿ‌ಎಲ್)

ಇವೆಲ್ಲ “ಫಾರ್ಚೂನ್ ೫೦೦ ಲಾರ್‍ಜ್‌ಸ್ಟ್ ಕಂಪನೀಸ್” ಪಟ್ಟಿಗೆ ಸೇರಿವೆ.

ಜಾಗತಿಕ ಮಟ್ಟದ ಈ ೫೦೦ ಬೃಹತ್ ಕಂಪನಿಗಳು ೨೦೧೪ ರಲ್ಲಿ ಒಟ್ಟಾರೆಯಾಗಿ ೩೧.೨ ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು ಒಟ್ಟು ೧.೭೦ ಲಕ್ಷ ಕೋಟಿ ಡಾಲರ್‌ಗಳಷ್ಟು ನಿವ್ವಳ ಲಾಭದತ್ತ ಮುನ್ನಡೆದಿದ್ದವು!

ಈ ೫೦೦ ಕಂಪನಿಗಳು ವಿಶ್ವದ ೩೬ ದೇಶವಿದೇಶಗಳಲ್ಲಿ ವಹಿವಾಟು ನಡೆಸಿದ್ದು ಒಟ್ಟಾರೆಯಾಗಿ ೬೫ ಲಕ್ಷ ಮಂದಿಗೆ ಈಗಾಗಲೇ ಉದ್ಯೋಗ ನೀಡಿವೆ.

ಈ ಫಾರ್ಚೂನ್ ೫೦೦ ಲಾರ್‍ಜೆಸ್ಟ್ ಕಂಪನೀಸ್- ಪಟ್ಟಿಯಲ್ಲಿ ವಾಲ್‌ಮಾರ್ಟ್ ಮೊತ್ತ ಮೊದಲ ಸ್ಥಾನದಲ್ಲಿದೆ.

ಚೀನಾದ ತೈಲ ಸಂಸ್ಕರಣೆ ಕಂಪನಿ ಆನ್ ಒಪೆಕ್ ಗ್ರೂಪ್ ಎರಡನೆಯ ಸ್ಥಾನದಲ್ಲಿದೆ.

ನೆದರ್‌ಲೆಂಡಿನ ರಾಯಲ್ ಡಚ್‌ಷಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಎಕ್ಸಾನ್ ಮೊಬಿಲ್ ನಂತರದ ಸ್ಥಾನಮಾನದಲ್ಲಿದೆ.

ಈ ೫೦೦ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಆಪಲ್ ೧೫ ನೇ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ೬೧ ನೇ ಸ್ಥಾನದಲ್ಲಿ, ಐಬಿ‌ಎಂ ೮೨ ನೆಯ ಸ್ಥಾನದಲ್ಲಿ, ಮೈಕ್ರೋಸಾಫ್ಟ್ ೯೫ ನೆಯ ಸ್ಥಾನದಲ್ಲಿ ಗೂಗಲ್ ೧೨೪ ನೆಯ ಸ್ಥಾನದಲ್ಲಿ ಪೆಪ್ಸಿ ೧೪೧ ನೆಯ ಸ್ಥಾನದಲ್ಲಿ ಇಂಟೆಲ್ ೧೮೨ ನೆಯ ಸ್ಥಾನದಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್ ೨೭೮ ನೆಯ ಸ್ಥಾನದಲ್ಲಿ ಇವೆಲ್ಲ ಕಂಪನಿಗಳು ಅಮೆರಿಕ ಮೂಲದವೇ ಆಗಿವೆ.

ಹೋದ ವರ್ಷದೊಂದಿಗೆ ತುಲನೆ ಮಾಡಿದಲ್ಲಿ ಈ ಬಾರಿ ಟಾಟಾ ಮೋಟಾರ್ಸ್ ಹಾಗೂ ಎಸ್‌ಬಿ‌ಐ, ಒ‌ಎನ್‌ಜಿಸಿ- ರಿಲಯನ್ಸ್- ಎಚ್‌ಪಿಸಿ‌ಎಲ್‌- ಬಿಪಿಸಿ‌ಎಲ್ ಇವೆಲ್ಲ ಫಾರ್ಚೂನ್ ಪಟ್ಟಿಯ ಬ್ಯಾಂಕಿಂಗ್‌ನಲ್ಲಿ ಕೆಳಕ್ಕಿಳಿದಿವೆ.

ಏನೇ ಇದ್ದರೂ ಭವ್ಯ ಭಾರತದ ಕಂಪನಿಗಳು ಬೇರೆ ಯಾವುದೇ ದೇಶದ ಕಂಪನಿಗಳಿಗಿಂತ, ಕಡಿಮೆ ಇಲ್ಲವೆಂಬುದೊಂದು ಹೆಗ್ಗಳಿಕೆಯಲ್ಲವೇ??
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...