Home / ಲೇಖನ / ಇತರೆ / ಭಾರತ ಕಮ್ಮಿಯಿಲ್ಲ

ಭಾರತ ಕಮ್ಮಿಯಿಲ್ಲ

“ಫಾರ್ಚೂನ್- ೫೦೦ ಲಾರ್‍ಜೆಸ್ಟ್ ಕಂಪೆನೀಸ್” ಪಟ್ಟಿಯಲ್ಲಿ ಇಡೀ ವಿಶ್ವದ ೫೦೦ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭವ್ಯ ಭಾರತದ ಏಳು ಅದ್ಭುತ ಕಂಪನಿಗಳೂ ಸ್ಥಾನಮಾನ ಪಡೆದುಕೊಂಡಿರುವುದೊಂದು ಹೆಗ್ಗಳಿಕೆಯ ವಿಷಯವಾಗಿದೆ.

೧ ಭವ್ಯ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ‌ಎನ್‌ಜಿಸಿ)

೨ ಭಾರತೀಯ ತೈಲ ನಿಗಮ (ಐ‌ಒಸಿ)

೩ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷಸನ್ ಲಿಮಿಟೆಡ್ (ಎಚ್ ಪಿಸಿ‌ಎಲ್)

೪ ರಿಲಿಯನ್ಸ್ ಇಂಡಸ್ಟ್ರೀಸ್

೫ ಟಾಟಾ ಮೋಟಾರ್‍ಸ್

೬ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿ‌ಐ)

೭ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿ‌ಎಲ್)

ಇವೆಲ್ಲ “ಫಾರ್ಚೂನ್ ೫೦೦ ಲಾರ್‍ಜ್‌ಸ್ಟ್ ಕಂಪನೀಸ್” ಪಟ್ಟಿಗೆ ಸೇರಿವೆ.

ಜಾಗತಿಕ ಮಟ್ಟದ ಈ ೫೦೦ ಬೃಹತ್ ಕಂಪನಿಗಳು ೨೦೧೪ ರಲ್ಲಿ ಒಟ್ಟಾರೆಯಾಗಿ ೩೧.೨ ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು ಒಟ್ಟು ೧.೭೦ ಲಕ್ಷ ಕೋಟಿ ಡಾಲರ್‌ಗಳಷ್ಟು ನಿವ್ವಳ ಲಾಭದತ್ತ ಮುನ್ನಡೆದಿದ್ದವು!

ಈ ೫೦೦ ಕಂಪನಿಗಳು ವಿಶ್ವದ ೩೬ ದೇಶವಿದೇಶಗಳಲ್ಲಿ ವಹಿವಾಟು ನಡೆಸಿದ್ದು ಒಟ್ಟಾರೆಯಾಗಿ ೬೫ ಲಕ್ಷ ಮಂದಿಗೆ ಈಗಾಗಲೇ ಉದ್ಯೋಗ ನೀಡಿವೆ.

ಈ ಫಾರ್ಚೂನ್ ೫೦೦ ಲಾರ್‍ಜೆಸ್ಟ್ ಕಂಪನೀಸ್- ಪಟ್ಟಿಯಲ್ಲಿ ವಾಲ್‌ಮಾರ್ಟ್ ಮೊತ್ತ ಮೊದಲ ಸ್ಥಾನದಲ್ಲಿದೆ.

ಚೀನಾದ ತೈಲ ಸಂಸ್ಕರಣೆ ಕಂಪನಿ ಆನ್ ಒಪೆಕ್ ಗ್ರೂಪ್ ಎರಡನೆಯ ಸ್ಥಾನದಲ್ಲಿದೆ.

ನೆದರ್‌ಲೆಂಡಿನ ರಾಯಲ್ ಡಚ್‌ಷಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಎಕ್ಸಾನ್ ಮೊಬಿಲ್ ನಂತರದ ಸ್ಥಾನಮಾನದಲ್ಲಿದೆ.

ಈ ೫೦೦ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಆಪಲ್ ೧೫ ನೇ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ೬೧ ನೇ ಸ್ಥಾನದಲ್ಲಿ, ಐಬಿ‌ಎಂ ೮೨ ನೆಯ ಸ್ಥಾನದಲ್ಲಿ, ಮೈಕ್ರೋಸಾಫ್ಟ್ ೯೫ ನೆಯ ಸ್ಥಾನದಲ್ಲಿ ಗೂಗಲ್ ೧೨೪ ನೆಯ ಸ್ಥಾನದಲ್ಲಿ ಪೆಪ್ಸಿ ೧೪೧ ನೆಯ ಸ್ಥಾನದಲ್ಲಿ ಇಂಟೆಲ್ ೧೮೨ ನೆಯ ಸ್ಥಾನದಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್ ೨೭೮ ನೆಯ ಸ್ಥಾನದಲ್ಲಿ ಇವೆಲ್ಲ ಕಂಪನಿಗಳು ಅಮೆರಿಕ ಮೂಲದವೇ ಆಗಿವೆ.

ಹೋದ ವರ್ಷದೊಂದಿಗೆ ತುಲನೆ ಮಾಡಿದಲ್ಲಿ ಈ ಬಾರಿ ಟಾಟಾ ಮೋಟಾರ್ಸ್ ಹಾಗೂ ಎಸ್‌ಬಿ‌ಐ, ಒ‌ಎನ್‌ಜಿಸಿ- ರಿಲಯನ್ಸ್- ಎಚ್‌ಪಿಸಿ‌ಎಲ್‌- ಬಿಪಿಸಿ‌ಎಲ್ ಇವೆಲ್ಲ ಫಾರ್ಚೂನ್ ಪಟ್ಟಿಯ ಬ್ಯಾಂಕಿಂಗ್‌ನಲ್ಲಿ ಕೆಳಕ್ಕಿಳಿದಿವೆ.

ಏನೇ ಇದ್ದರೂ ಭವ್ಯ ಭಾರತದ ಕಂಪನಿಗಳು ಬೇರೆ ಯಾವುದೇ ದೇಶದ ಕಂಪನಿಗಳಿಗಿಂತ, ಕಡಿಮೆ ಇಲ್ಲವೆಂಬುದೊಂದು ಹೆಗ್ಗಳಿಕೆಯಲ್ಲವೇ??
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...