Home / ಕವನ / ಕವಿತೆ / ಮನಸ ಜೈನರ ಮಡದಿ

ಮನಸ ಜೈನರ ಮಡದಿ

ಮನಸ ಜೈನರ ಮಡದೆಽ ಬಾಽ
ಘನಮನಸಿನ ಗಂಬಿರಳಽ ಬಾಽ
ಘನಮನಸೆಂಬೊ ಗರತ್ಯಾರು ಮೆಚ್ಚಿ
ನೀಲಽ ಬಾಽಽ ನೀಲಽ ಸೀಲಽಽ ಬಾಽಽ
ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧||

ಅನಂದರಾಯರ ಇಗತೇ ಬಾ
ಆದಿಪುರುಷರ ಸತಿಯಳು ಬಾ
ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗುರುಳಿ
ಜೂಜ ಬಾಽ ಬಾ ಬಾ ಮೇತ್ರಿ ಬಾಽಽ
ಪುನ್ಯಫಲ ಮೇತ್ರಿ ನೀ ಬಾರಽ ಹಸಿಯ ಜಗಽಽಲೀಗೇ ಸೋ ||೨||

ನಾಗೀಂದ್ರನರಗಲ್ಲವು ಬಾ
ಅರಗಲ್ಲದ ರೂಪವು ಬಾ
ಹೋಯಿತು ಸರ್ಪಾ
ಎಡದಲಿ ಕುಳಿತ
ಕಲ್ಪ ಬಾಽ ಬಾ ಬಾ ಫಣಿಯವು ಬಾ
ಸೋಗಿನ ಗೊಂಬೆ ನೀ ಬಾರ ಹಸಿಯ ಜಗಽಽಲೀಗೇ ಸೋ ||೩||

ಮಂದಗಮನೆ ಮೋವನ್ನೇ ಬಾ
ಗಂಧ ಕಸ್ತುರಿ ಪರಿಮಳ ಬಾ
ನನ್ನಾಣೆ ಬಾಽ ಕಟ್ಟಾಣೆ ಬಾ
ಧನ ಧನಿಯಳು ಬಾಽ
ಕೂಕಮದಾಗಿನ ಭರಣೆ ಬಾರೊಂದ್ಹ ಸೀ ಜಗಽಽಲೀಗೇ ಸೋ ||೪||

ಮಾಣಿಕದಾಗಿನ ಏಣವು ಬಾ
ಜೋಡಮುತ್ತಿನ ಜಾಣೇ ಬಾ
ಚಂದ್ರನ ಸೊಸಿಯೇ ಬಾ
ಇಂದ್ರನ ಸತಿಯಳು ಬಾ
ಭಂಗರದಾಗಿನೆ ಭರಣೆ ಬುರೊಂದ್ಹಸಿಯ ಜಗಽಽಲೀಗೆ ಸೋ ||೫||

ಮಂಗಳ ಮಹಿಮನ ರುಣೀ ಬಾ
ಶ್ರಿಂಗಾರದ ಮುದ್ದಾನೇ ಬಾ
ಕುಂಬಕುಚಗಳು ನಲನಲಿದಾಡುತ
ರಂಬೇ ಬಾ ದೇಶದ ಗೊಂಬೆ ಬಾ
ಅಂಗೈನಿಂಗ ನೀ ಬಾರಽ ಹೆಸಿಯ ಜಗಽಽಲೀಗೇ ಸೋ ||೬||
*****

ಸೋಬಾನದ ಹಾಡುಗಳು

ಮಾನವದೇಹದಲ್ಲಿ ಪೂರ್ಣಸೌಂದರ್ಯವು ಪ್ರಕಟವಾಗುವ ಕಾಲಗಳು ಎರಡು. ಒಮ್ಮೆ ಎಳಗೂಸಿದ್ದಾಗ, ಇನ್ನೊಮ್ಮೆ ಪ್ರಾಯವೇರುವಾಗ. ಯೌವನದ ಬೆಡೆಗು ಶೃಂಗಾರರಸಕ್ಕೆ ಉದ್ದೀಪಕ. ಹೆಣ್ಣಿನ ಶೃಂಗಾರವನ್ನು ಹೆಣ್ಣುಮಕ್ಕಳೇ ಬಣ್ಣಿಸಿದ್ದು ಸೋಬಾನದ ಹಾಡುಗಳಲ್ಲಿ ನೋಡಲಿಕ್ಕೆ ಸಿಗುವಂತಿದೆ. ಶೃಂಗಾರವನ್ನು “ನೈಸರ್ಗಿಕವಾಗಿ ಲಜ್ಜಾಶೀಲರಾದ ನಾರಿಯರು ವರ್ಣಿಸಿದ ರೀತಿಗೂ ಸ್ವಚಂದತೆಗಾಸ್ಪದವಿರುವ್ ಪುರುಷರು ವರ್ಣಿಸಿದ ರೀತಿಗೂ ಮಹದಂತರವಿರುತ್ತದೆ. ಲಾವಣಿಯೊಳಗಿನ ಶೃಂಗಾರಕ್ಕೂ ಸೋಬಾನದ ಹಾಡುಗಳೊಳಗಿನ ಶೃಂಗಾರಕ್ಕೂ ಸರಿಹಚ್ಚಿ ನೋಡಿದರೆ ನಮ್ಮ ಈ ಅಭಿಪ್ರಾಯವು ಸ್ಪಷ್ಟವಾಗುವುದು. ಕವಿಚರಿತ್ರೆಯಲ್ಲಿ ಬಂದ ಕುಮಾರವ್ಯಾಸನ ದ್ರೌಪದಿಯ ಚೆಲುವಿಕೆಯ ವರ್ಣನೆಗೂ ರಾಜಶೇಖರವಿಳಾಸ ಮುಂತಾದ ಕಾವ್ಯಗಳೊಳಗಿನ ವೇಶ್ಯೆಯರ ವರ್ಣನೆಗೂ ಇರುವ ವ್ಯತ್ಯಾಸವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಮೇಲ್ಕಂಡ ನಮ್ಮ ಮಾತಿನ ಭಾವವು ಇನ್ನಿಷ್ಟು ಸ್ಫುಟವಾಗುವುದು.

ಹೆಣ್ಣುಮಕ್ಕಳು ವರ್ಣಿಸಿದ ಶೃಂಗಾರದಲ್ಲಿ ಒಂದು ಸಹೆಜವಾದ ಜೋಕೆಯಿದೆ. ಗಂಡಸರ ಹಾಡುಗಳಲ್ಲಿ ರೂಪವರ್ಣನೆಯು ಮೂರು ವಿಧದಲ್ಲಿ ಮಾಡಲ್ಪಟ್ಟಿದೆ. “ಮನಸ ಜೈನರ ಮಡದಿ” ಎಂಬ ಈ ಹಾಡಿನಲ್ಲಿ ಇಡೀ ಯೌವನಕ್ಕೆ ಸಂಬಂಧವಾಗುವ ಉಪಮೆಗಳಿವೆ. ಇದು ಒಂದು ವಿಧ. “ಹಿಂಬಳಿ ಮುಂಬಳಿ” ಮತ್ತು “ರನ್ನದುಡುಗುಣಿ” ಎಂಬೆರಡು ಹಾಡುಗಳಲ್ಲಿ ಮೈ ಮೇಲಿನ ಅಲಂಕಾರಗಳ ವರ್ಣನೆಯಿಂದ ಶೃಂಗಾರಕ್ಕೆ ಬಣ್ಣ ಕೊಡಲು ಯತ್ನಿಸಲಾಗಿದೆ. ಇದು ಎರಡನೆಯ ವಿಧ. ಇನ್ನು “ಹಸುಮಗಳಽ ನೀಲಮ್ಮ” ಮತ್ತು “ಹಣಿ ಎಂಬು ಭಾಂವಕ” ಎಂಬೆರಡು ಹಾಡುಗಳಲ್ಲಿ “ಅಕ್ಕ ಭಾವಽಗ ವರನಂದ” “ನಾರೀಗಿ ತಮಗ ವರನಂದ” ಮುಂತಾದ ಮಾತುಗಳಿಂದ ಪರ್ಯಾಯದಿಂದ ರೂಪವನ್ನು ವರ್ಣಿಸಿದಂತಿದೆ. ಇದು ಮೂರನೆಯ ವಿಧ.

“ಬಾಲಿ ತಾ ಮೈನೆರದು” ಎಂಬ ಹಾಡಿನ ಮೊದಲಿನ ನಾಲ್ಕು ನುಡಿಗಳಲ್ಲಿ ಖುತುಸಮಯದ ತಾತ್ಕಾಲಿಕ ಮುಖಲಕ್ಷಣ ಮುಂತಾದವುಗಳ ಸೊಗಸಾದ ವರ್ಣನೆಯಿದೆ. ಇದು ನಾಲ್ಕನೆಯ ವಿಧವೆಂದು ಹೇಳಬಹುದು.

“ಮನಸ ಜೈನರ ಮಡದಿ”

ಈ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೆ ಒಂದೇ ಸಂದರ್ಭದ ವರ್ಣನೆಯಿರುವುದರಿಂದ ತಿಳಿದುಕೊಳ್ಳಲಿಕ್ಕೆ ನಡುವೆ ಎಲ್ಲಿಯೂ ತೊಂದರೆ ಬರುವಂತಿಲ್ಲ.

ಛಂದಸ್ಸು:- ಮಂದಾನಿಲರಗಳೆಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಮನಸ ಜೈನರು=ಹಿಂದಕ್ಕೆ ಬಹಳ ಘನವಂತಿಕೆಯಿದ್ದ ಒಂದು ಜಾತಿ. ಗಂಬಿರಳ=ಗಂಭೀರಳು. ಸೋಗಿನ=ವಯ್ಯಾರದ. ಇಗತಿ=ಯುಕ್ತಿ ಯುಳ್ಳವಳು. ಜೂಜ=ಪಂಥಗಾರ್ತಿ. ಹಸಿಯ ಜಗಲಿ=ಲಗ್ನ ಫಲಶೋಭನಗಳ ಪೀಠ. ನಾಗೀಂದ್ರನ ಅರಗಲ್ಲ=ಹಾವಿನ ಹೆಡೆಯೊಳಗಿನ ಮಣಿ. ಅರಗಲ್ಲು=ಅರಸುಗಲ್ಲು (ರತ್ನ). ಕಲ್ಪ=ತಲ್ಪ(?) ಮಾಣಿಕದಾಗಿನ ಏಣ, ಭಂಗರದಾಗಿನ ಭರಣೆ=ಮಾಣಿಕದ ಏಣು, ಭಂಗಾರದ ಭರಣೆ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...