ತಿಮ್ಮ

ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್ಟು ಹೋದೀರಿ!” ಎಂದು ಆಗಾಗ ಹೇಳುತ್ತಿದ್ದವು.

ಆ ಹಿಂಡಿನಲ್ಲಿ ತಿಮ್ಮ ಎಂಬ ಒಂದು ಮರಿ ಇತ್ತು. ಆದು ಒಂದು ದಿನ “ಯಾವಾ ಗಲೂ ಇವರ ಜೊತೆಯಲ್ಲಿಯೇ ಏಕೆ ಹೋಗಬೇಕು? ಇಂದು ನಾನೇ ಬೇರೆ ಹೋಗುತ್ತೇನೆ” ಎಂದುಕೊಂಡಿತು. ಅಂದು ಹಾಗೆಯೇ, ಅವರೆಲ್ಲರೂ ಹೋಗುತ್ತಿದ್ದ ದಾರಿಯನ್ನು ಬಿಟ್ಟು, ಮತ್ತೊಂದು ಹಾದಿಯನ್ನು ಹಿಡಿಯಿತು. ಎಂದಿನಂತೆ ಮರಿಗಳೆಲ್ಲ ಜತೆಯಲ್ಲಿ ಬರುತ್ತಿವೆ ಎಂದು ದೊಡ್ಡ ಕಪಿಗಳೂ ಮುಂದು ಮುಂದಕ್ಕೆ ಹೋದವು. ತಿಮ್ಮನು ಹಿಂದೆ ಉಳಿದುದು ಯಾರಿಗೂ ತಿಳಿಯದು.

ತಿಮ್ಮನು ಕೊಂಚದೂರ ಹೋಗುವುದರೊಳಗಾಗಿ, ಒಂದು ನಾಯಿ ಬಂತು; ತಿಮ್ಮನನ್ನು ಕಂಡು ಬೊಗಳಿತು. ಅದನ್ನು ಕಂಡು ಕೆಲವರು ತುಂಟ ಹುಡುಗರು ಬಂದರು. ತಿಮ್ಮನನ್ನು ಬೇಕಾದಷ್ಟು ಕೀಟಲೆ ಮಾಡಿದರು. ಕೆಲವರು ಮುಖವನ್ನು ಉದ್ದಮಾಡಿ, “ಗುರ್‌ಗುರ್‌” ಎಂದು ಅಣಕಿಸಿದರು. ಮತ್ತೆ ಕೆಲವರು ಕೈಚಪ್ಪಾಳೆಯಿಟ್ಟು “ಕೋತೀ ತಿಮ್ಮಾ! ಲೇ! ಕೋತೀ ತಿಮ್ಮಾ!” ಎಂದು ಅದನ್ನು ರೇಗಿಸಿದರು. ಇನ್ನು ಕೆಲವರು ಕಲ್ಲಿನಿಂದ ಹೊಡೆದರು. ಇದನ್ನೆಲ್ಲಾ ಕಂಡು ತಿಮ್ಮನಿಗೆ ಬಲು ದಿಗಿಲಾಯಿತು. ಅರಿಚಿಕೊಂಡಿತು; ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೋ ತಿಳಿಯದೆ, ಸುಮ್ಮನೆ “ಕಿಚಿಕಿಚಿ” ಎಂದು ಒರಲಿಕೊಂಡಿತು.

ಅಷ್ಟರಲ್ಲಿ ಅದರ ಅರಚಾಟವು ದೊಡ್ಡ ಕಪಿಗಳಿಗೆ ಕೇಳಿಸಿತು. ಕೂಡಲೇ ಹಿಂಡಿಗೆ ಹಿಂಡೇ ತಿಮ್ಮನಿರುವ ತಾವಿಗೆ ಓಡಿಬಂದವು. ಅವು ಬರುತ್ತಲೇ ಹುಡುಗರೂ ಓಡಿಹೋದರು. ನಾಯಿಯೂ ಓಡಿಹೋಯಿತು.

ಆಗ ಅದಕ್ಕೆ ಬುದ್ಧಿ ಬಂತು. ತಿಮ್ಮನು ಅಲ್ಲಿಂದ ಮುಂದೆ ಎಂದೂ ಅವಿಧೇಯನಾಗಿ ನಡೆಯಲಿಲ್ಲ. ಹಿಂಡಿನಲ್ಲಿ ಯಾರಾದರೂ ತಾಯಿತಂದೆಗಳು ಹೇಳಿದ ಮಾತು ಕೇಳದೆ ಹೋದರೆ, ತಿಮ್ಮನು ಅವರಿಗೆ ತನ್ನ ಕಥೆಯನ್ನು ಹೇಳಿ ದಾರಿಗೆ ತರುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...