Home / ಬಾಲ ಚಿಲುಮೆ / ಕಥೆ / ದೇವಶರ್ಮನ ಕಥೆ

ದೇವಶರ್ಮನ ಕಥೆ

ಒಂದಾನೊಂದು ಊರಿನಲ್ಲಿ ದೇವಶರ್ಮನೆಂಬ ಬ್ರಾಹ್ಮಣನಿದ್ದನು. ಅವನು ವೇದ ಶಾಸ್ತ್ರಗಳನ್ನು ಬಲ್ಲವನು.  ದಿನವೂ ವೇದಗಳನ್ನು ಓದುವನು. ಶಾಸ್ತ್ರದಲ್ಲಿ ಹೇಳಿರುವಂತೆ ನಡೆಯುವನು. ಆಹಿತಾಗ್ನಿಯು (ಮನೆಯಲ್ಲಿ ಅಗ್ನಿಯನ್ನು ಇಟ್ಟುಕೊಂಡು ದಿನವೂ ಬೆಳಿಗ್ಗೆ ಸಂಜೆ ತಪ್ಪದೆ ಹೋಮ ಮಾಡುವವರು.) ಆತನಿಗೆ ಪರಮ ಪತಿವ್ರತೆಯಾದ ಯಜ್ಞದತ್ತೆಯೆಂಬ ಹೆಂಡತಿಯಿದ್ದಳು. ಅವಳೊಮ್ಮೆ ಬಸುರಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅದೇ ದಿನವೇ ಅವರ ಮನೆಯಲ್ಲಿದ್ದ ಮುಂಗುಸಿಯೂ ಒಂದು ಮರಿಯನ್ನು ಹಾಕಿತು. ಆ ಬ್ರಾಹ್ಮಣಿಯು ತನ್ನ ಮಗುವಿನಂತೆ ಆ ಮರಿಯನ್ನು ವಿಶ್ವಾಸದಿಂದ ಸಾಕುತ್ತಿದ್ದಳು:
ಅದೂ ಮಗುವಿನಲ್ಲಿ ಬಲು ಅಕ್ಕರೆಯಿಂದ ಇದ್ದರೂ ಆಕೆಗೆ “ಇದು ಕೆಟ್ಟಜಾತಿ. ಯಾವಾಗಲಾದರೂ ಮಗುವಿಗೆ. ಕೇಡುಮಾಡಿದರೂ ಮಾಡೀತು ಎಂದು ಬಲು ಎಚ್ಚರಿಕೆಯಿಂದ ಇರುತ್ತಿದ್ದಳು.
ಒಂದುದಿನ ಆಕೆಯು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಗಂಡನನ್ನು ಕೂಗಿ, “ನಾನು ಕೆರೆಗೆ ಹೋಗಿ ನೀರು ತರುವೆನು. ನೀವು ಈ ಮಗುನನ್ನು ನೋಡಿಕೊಳ್ಳಿ, ಮುಂಗುಸಿಯೂ ಇಲ್ಲಿಯೇ  ಇದೆ. ಎಚ್ಚರಿಕೆ.” ಎಂದು ಹೇಳಿ ಒಪ್ಪಿಸಿ ಕೊಡವನ್ನು ತೆಗೆದುಕೊಂಡು ನೀರಿಗೆ ಹೋದಳು. ಆ ವೇಳೆಗೆ ಆ ಊರಿನ ಅರಸು “ದಾನಕ್ಕಾಗಿ ಬರಬೇಕು” ಎಂದು ಆಳುಗಳನ್ನು ಕಳುಹಿಸಿದನು. ಆ ದೇವಶರ್ಮನು ಅರಸನ ಮಾತು ಮೀರಲಾರದೆ ಅಲ್ಲಿಗೆ ಹೋದನು.
ಇತ್ತ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಂದು ನಾಗರಹಾವು ತನ್ನ ಬಿಲದಿಂದ ಈಚೆಗೆ ಬಂತು. ಮುಂಗುಸಿಯು ಅದನ್ನು ಕಂಡು ಅದರಮೇಲೆ ಬಿದ್ದು ಕಾದಾಡಿ ಅದನ್ನು ಕೊಂದಿತು.
ಹಾಗೆ ಹಗೆಯನ್ನು ಕೊಂದೆನೆಂಬ ತನ್ನ ಸಂತೋಷವನ್ನು ತಾಯಿಗೆ ಹೇಳಲು ಅದು ಅಕೆಗೆ ಎದುರಾಗಿ ಬಂತು. ಆಕೆಯು ಅದರ ಮುಸುಡಿಯಲ್ಲಿದ್ದ ಮಾಂಸ ರಕ್ತಗಳನ್ನು ನೋಡಿ ಮಗುವನ್ನು ಕೊಂದು ಬಂದಿರುವುದು ಎಂದುಕೊಂಡು, ಆ ಕೋಪ ದುಃಖಗಳಲ್ಲಿ ತಾನು ತಂದಿದ್ದ ನೀರಿನ ಕೊಡವನ್ನು ಅದರ ತಲೆಯ ಮೇಲೆ ಕುಕ್ಕಿದಳು. ಅದು ಅಲ್ಲಿಯೇ ಸತ್ತು ಬಿದ್ದಿತು.
ಬ್ರಾಹ್ಮಣಿಯು ಮನೆಗೆ ಬಂದು ನೋಡಿದಳು. ಮಗುವು ತೊಟ್ಟಿಲಲ್ಲಿ ಸುಖವಾಗಿ ಆಡಿಕೊಂಡಿತ್ತು. ತೊಟ್ಟಿಲಿನ ಮಗ್ಗುಲಲ್ಲಿಯೇ ನಾಗರಹಾವು ತುಂಡಾಗಿ ಬಿದ್ದಿತ್ತು ಆ ವೇಳೆಗೆ ಗಂಡನೂ ಬಂದನು. ಬ್ರಾಹ್ಮಣಿಯು ಬಲವಾಗಿ ಅತ್ತು. “ನಿಮ್ಮನ್ನು ಕಾದಿಕೊಂಡಿರಿ ಎಂದರೆ ನೀವು ಕೇಳಲಿಲ್ಲ. ದಾನದಮೇಲಿನ ಆಸೆಯಿಂದ ನೀವು ಹೊರಟು ಹೋದಿರಿ. ಅದರ ಫಲವಾಗಿ ಇಷ್ಟೂ ಆಯಿತು. ನಾನು ಬರುವವರೆಗೂ ತಡೆಯಬಾರದಾಗಿತ್ತೇ? ಮಗುವಂತಿದ್ದ ಮುಂಗುಸಿಯು ಅನ್ಯಾಯವಾಗಿ ಮೃತ್ಯುವಿನ ಪಾಲಾಯಿತು. ಅಷ್ಟಲ್ಲದೆ ಹೇಳಿದರೇ?
ಲೋಭ ಬಲಿತತಿಯಾಗಬಾರದು | ಲೋಭವನು ಪೂರ್ಣ ಬಿಡಬಾರದು ॥
ಲೋಭವು ಅತಿಯಾಗಲು ಫಲವಾಗಿ | ಆಯಿತು ಚಕ್ರವು ಮಸ್ತಕದಲ್ಲಿ ॥೮॥
ಬ್ರಾಹ್ಮಣನು ಹೇಳಿದನು: – “ಅದು ಹೇಗೆ?” ಎಂದು
ಆಕೆಯು ಹೇಳಿದಳು:-
*****
ಚಕ್ರಧರನ ಕಥೆ ಓದಿ
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...