ಅಡ್ಡಡ್ಡಲ್ಲ ಉದ್ದುದ್ದಾಗಿ
ತಲೆ ಅಲುಗಾಡಿಸುತ್ತಲೇ ಇರಬೇಕು
ನಿಲ್ಲಿಸಿದರೆ ಬಂತು ಬೆತ್ತ.
‘ಪಾಪ! ಇವಳೆಷ್ಟು ಮುಗ್ಧೆ’ ಹಾಗೇಽ ಇರಬೇಕು
ಮಾತನಾಡಿದರೆ ಮುರಿದುಬೀಳುತ್ತವೆ ಹಲ್ಲು.
ಕಣ್ಣಿಗೆ ರೆಪ್ಪೆ ಬಂದಂತೆ ನಟಿಸಬೇಕು
ವರ್ಣಿಸಿದರೆ ಬಾಸುಂಡೆಗಳು.
ಇವನೊಬ್ಬನ ಮಾತುಗಳೇ ವೇದವಾಕ್ಯಗಳು
ಬೇರೆಯವರವು ಚಿಲ್ಲರೆ ತುಕ್ಕುಹಿಡಿದವು.
ಹಸಿದ ಹುಲಿಗೆ ಮೊದಲು ತಟ್ಟೆ
ಇಡದಿರೆ ಇಡಿಯಾಗಿ ತಿನಬಹುದು ಅವಳನ್ನೇ.
ಅವಳು ಪ್ರೇಮದ ಹಸಿರು ನಿರೀಕ್ಷಿಸಿದ್ದಾದರೆ
ಕಾಮಿ ಎಂದು ಕೊಳ್ಳೆ ಇಟ್ಟು
ಕಪಾಳಮೋಕ್ಷ ಎದುರಾದೀತು.
ಮಾತು ಮಾತಿಗೆ ಸಂಶಯ ಪಿಶಾಚಿ
ಹೊರಗೆ ಸತ್ಯಹರಿಶ್ಚಂದ್ರ, ಧರ್ಮರಾಯ,
ಮಾತುಮಾತುಗಳಲಿ ಮದ್ದು ಗುಂಡುಗಳ ಸಿಡಿಸುವಿಕೆ
ನರನಾಡಿಗಳಲಿ ಬಂದೂಕು ಹೊತ್ತ
ವಸಾಹತುವೇ ತೊಲಗಿಲ್ಲಿಂದ-
ಇಲ್ಲದಿರೆ ಸಿಡಿದೇಳುವುದು ಗೊತ್ತು
ಗಾಂಧಿ ತಾತನ ಮಂತ್ರ ‘ಮಾಡು ಇಲ್ಲವೆ ಮಡಿ’.
*****
Related Post
ಸಣ್ಣ ಕತೆ
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…