Home / ಲೇಖನ / ವಿಜ್ಞಾನ / ಮರೆಗುಳಿತನ

ಮರೆಗುಳಿತನ

ಕೆಲವರಿಗೆ ಮರೆಗುಳಿತನ ವಂಶ ಪರಂಪರೆಯಾಗಿ ಬಂದಿರುತ್ತದೆ. ವಯಸ್ಸು ಸಣ್ಣದಿರಲಿ ದೊಡ್ಡದಿರಲಿ ಮರೆಗುಳಿತನ ಜಾಸ್ತಿಯಿರುವುದು, ಮರೆವು ಒಂದು ವರದಾನ. ಕಹಿಯನ್ನು ಮರೆಯಲು ದೇವರಿತ್ತ ವರವು. ಇದರಿಂದಾಗಿ ತುಸು ನೆಮ್ಮದಿ, ತೃಪ್ತಿ, ಶಾಂತಿ ಲಭಿಸಲು ಕಾರಣವಾಗಿದೆ. ಮರೆವು ಬೇಕು. ಆದರೆ ಅದೇ ಜಾಸ್ತಿಯಾದರೆ…. ಜೀವನ ನೀರಸನವಾಗುವುದು.

ಈ ಮರೆಗುಳಿತನಕ್ಕೆ ಕಾರಣವೇನು? ವಯಸ್ಸಾಗುತ್ತಾ… ಬರುಬರುತ್ತಾ… ಮರೆವು ಸಹಜವೇ? ನಿಜಕ್ಕೂ ಮರೆವು ಒಂದು ವರದಾನವೇ? ಇದೊಂದು ಕಾಯಿಲೆಯೇ?

– ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಶಾಶ್ವತ ಪರಿಹಾರ ನೀಡುವ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ನಿರಂತರವಾಗಿ…. ಹಲವು ಸಂಶೋಧನೆಗಳು ಈಗಾಗಲೇ ಜರುಗುತ್ತಿವೆ.

ಈಗೀಗ ಘಟಾನುಘಟಿ ವೈದ್ಯರು, ನರತಜ್ಞರು, ವಿಜ್ಞಾನಿಗಳು… ಈಗಲೂ ಈ ಕಾಯಿಲೆಗೆ ಔಷಧಿಯನ್ನು ನಿಖರ ಕಾರ್‍ಯ ಕಾರಣವನ್ನು ಪರಿಹಾರವನ್ನು ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಆದರೆ… ಜುಲೈ ೨೦೧೫ ರಲ್ಲಿ ಸರ್ರೆಯ ಕ್ರಿಟಿನ್ ನಿತ್ಯಾನಂದನ್ ಲಂಡನ್ ಶಾಲಾ ಬಾಲಕ ವಯಸ್ಸು ೧೫ ವರ್ಷ ಭಾರತೀಯ ಮೂಲದ ಬ್ರಿಟೀಶ್ ಪ್ರಜೆಯಾದ ಈತ ಈಗ ಮರೆಗುಳಿತನಕ್ಕೆ ಪರಿಹಾರ ಕಂಡು ಹಿಡಿದು, ಇಡೀ ಜಗತ್ತನ್ನು ನಿಬ್ಬೆರಗುಗೊಳಿಸಿದ್ದಾನೆ. ಅಬ್ಬಾ! ವಯಸ್ಸು ಕಿರಿದು ಸಾಧನೆ ಹಿರಿದು ಎಂದು ಹುಬ್ಬೇರುವಂತೆ ಮಾಡಿದ್ದಾನೆ. ಈ ಮರೆಗುಳಿತನ ಕಾಣಿಸಿಕೊಳ್ಳುವ ಹತ್ತು ವರ್ಷ ಮೊದಲೇ ಈ ರೋಗ ಲಕ್ಷಣಗಳನ್ನು ಗುರ್ತಿಸಿ ತಡೆಗಟ್ಟುವ ವಿಧಿವಿಧಾನವನ್ನು ಕಂಡು ಹಿಡಿದಿರುವನು.

ಈತನು ತನ್ನೆಲ್ಲ ಪ್ರಯೋಗ ವಿವರವಾದ ಸಂಶೋಧನಾ ವರದಿಗಳನ್ನು ಈಗಾಗಲೇ “ಗೂಗಲ್ ಸೈನ್ಸ್ ಫೇರ್ ಪ್ರೈಜ್‌ಗೆ” ಕಳಿಸಿದ್ದಾನೆ. ಅಲ್ಲಿ ಅಂತಿಮವಾಗಿದ್ದು ಬಹುಮಾನ ಕೂಡಾ ಬಂದಿದೆ!

ಈತನಕ ಮರೆಗುಳಿಗೆ ದಿವ್ಯ ಔಷಧಿಯನ್ನು ಕಂಡು ಹಿಡಿಯಲು ಹಲವು ಥರದ ಅರಿವಿನ ನಾನಾ ಪರೀಕ್ಷೆಗಳನ್ನು ನಡೆಸಬೇಕಾಗಿತ್ತು! ಇಲ್ಲವೆ ವ್ಯಕ್ತಿಯ ಸಾವಿನ ತರುವಾಯ ಆತನ ಮೆದುಳನ್ನು ಪರೀಕ್ಷೆಗೆ ಒಡ್ಡಬೇಕಾಗಿತ್ತು. ಇದು ಪೋಸ್ಟ್‌ಮಾರ್‍ಟಂ ಕೆಲಸವಾಗಿತ್ತು!

ಆದರೆ… ಸರ್ರೆಯ ಕ್ರಿಟನ್ ನಿತ್ಯಾನಂದನ್ ಈಗ ತಾನು ಟ್ರೋಜನ್ ಹಾರ್ಸ್ ಎಂಬ ಪ್ರತಿಕಾಯವನ್ನು ಬಹಳ ಕಷ್ಟಪಟ್ಟು ಸಂಶೋಧಿಸಿದ್ದು ಅದು ಮೆದುಳನ್ನು ಸಲೀಸಾಗಿ ಹೊಕ್ಕು ಅಲ್ಲಿರುವ ಮರೆಗುಳಿತನ ತರುವ ನ್ಯೂರೋಟಾಕ್ಸಿಕ್ ಪ್ರೋಟಿನ್‌ಗಳ ಜತೆ ಕೂಡಿಕೊಳ್ಳುವುವು…. ಹೀಗಾಗಿ ಮೊತ್ತ ಮೊದಲ ಪ್ರಯತ್ನದಲ್ಲಿಯೇ ಮರೆಗುಳಿತನವನ್ನು ಗುರ್ತಿಸಿದ್ದು ಪರಿಹಾರವೂ ದೊರಕಿರುವುದು!

ಈಗೀಗ ಬ್ರಿಟನ್ ದೇಶದಲ್ಲೇನು… ಇತರ ದೇಶ ವಿದೇಶಗಳಲ್ಲಿ ಕೂಡಾ ಮರೆಗುಳಿತನ ಬಹುದೊಡ್ಡ ಕಾಯಿಲೆಯಾಗಿ ಉಲ್ಬಣಗೊಳ್ಳುತ್ತಿದ್ದು ಇದಕ್ಕೊಂದು ಪರಿಹಾರ ಸಿಕ್ಕಂತಾಗಿದೆಯೆಂದು ನಿತ್ಯಾನಂದನ್ ಈಗಾಗಲೇ ಅಭಿಮಾನದಿಂದ ಸಾರಿಕೊಂಡಿದ್ದಾನೆ.

ನಾವು ನೀವು ಎಲ್ಲರೂ ನಿತ್ಯಾನಂದನ್‌ಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...