Home / ಲೇಖನ / ವಿಜ್ಞಾನ / ಇನ್ನು ರೋಬೊಟ್‌ಗಳ ಕೆಲಸ

ಇನ್ನು ರೋಬೊಟ್‌ಗಳ ಕೆಲಸ

“ಇನ್ನು ಮುಂದೆ ರೋಬೊಟ್‌ಗಳು ಬೇಕಾಗಿವೆ!” ಎಂಬ ಜಾಹೀರಾತು ನೀಡುವ ಕಾಲವಿನ್ನು ದೂರವಿಲ್ಲ!

ಒಂದು ರೋಬೊಟ್- ಸರಾಸರಿ ೬ ರಿಂದ ೮ ಕಾರ್‍ಮಿಕರ ಕೆಲಸ ಕಾರ್‍ಯಗಳನ್ನು ಸುಗಮವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆಂದು ಚೀನಾದೇಶದ ಬೀಜಿಂಗ್‌ನಲ್ಲಿ ಸಾಬೀತು ಪಡಿಸಿರುವುದು.

ಈಗಾಗಲೇ ಚೀನಾದ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕವು ಸಂಪೂರ್ಣವಾಗಿ ಮಾನವ ರಹಿತವಾಗಿದ್ದು ಅಲ್ಲಿನ ಎಲ್ಲಾ ಕೆಲಸ ಕಾರ್‍ಯಗಳನ್ನೂ ಅಲ್ಲಿನ ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಈಗಾಗಲೇ ಪರಿಪೂರ್ಣವಾಗಿ ಕೆಲಸ ನಿರ್ವಹಿಸಿ ವಿಶ್ವವ್ಯಾಪ್ತಿ ಶಹಭಾಸ್‌ಗಿರಿ ಪಡೆದಿವೆ…!

ಈಗೀಗ ಅಲ್ಲಲ್ಲಿ… ಚೀನಾದಲ್ಲಿ “ರೋಬೊಟ್‌ಗಳು ಬೇಕಾಗಿವೆ…” ಎಂಬ ನಾಮಫಲಕಗಳೂ ಜಾಹೀರಾತುಗಳು ರಾರಾಜಿಸುತ್ತಿವೆ!!

ಚೀನಾ ದೇಶದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಜನಸಂಖ್ಯೆ ನಿಯಂತ್ರಣಾ ಭಾರೀ ಭಾರೀ ಕ್ರಮದಿಂದಾಗಿ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಹೀಗಾಗಿ ಎಲ್ಲೆಲ್ಲೂ ಕಾರ್ಮಿಕರ ಬೃಹತ್ ಸಮಸ್ಯೆ ತಲೆದೋರಿದೆ. ಇದರಿಂದಾಗಿ – ಇನ್ನು ಮುಂದೆ ರೋಬೊಟ್‌ಗಳನ್ನೇ ಹೆಚ್ಚೆಚ್ಚು ಅಭಿವೃದ್ಧಿ ಪಡಿಸಬೇಕಾದ ತುರ್‍ತು ಅಲ್ಲಿ ತಲೆದೋರಿದೆ.

ಇಲ್ಲಿನ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕದಲ್ಲಿ ಎಲ್ಲ ಕೆಲಸಗಳನ್ನು ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಮಾಡಿ ಪೂರೈಸುತ್ತಿವೆ. ಚೀನಾದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಜನರಿಲ್ಲದ ಮೊದಲ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಂಪೆನಿಯ ಎಲ್ಲ ಸರಕು ಸಾಗಣೆ ಟ್ರಕ್‌ಗಳು ರೋಬೊಟ್‌ಗಳ ಮೂಲಕ ಗೋದಾಮುಗಳಿಗೆ ಸರಕುಗಳನ್ನು ಸಾಗಿಸುತ್ತವೆ. ತಾಂತ್ರಿಕ ಸಿಬ್ಬಂದಿ ನಿಯಂತ್ರಣ ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಕಾರ್ಯಗಳನ್ನು ನೋಡುತ್ತಾರೆ. ಉಳಿದಂತೆಲ್ಲವನ್ನೂ ಸಂಪೂರ್ಣವಾಗಿ ಈ ಎಲ್ಲ ರೊಬೋಟ್‌ಗಳೇ ಮಾಡುತ್ತವೆ.

ಇಲ್ಲಿ ಸುಮಾರು ೬೫೦ ಜನ ಕಾರ್‍ಮಿಕರು ಕೆಲಸ ನಿರ್ವಹಿಸಬೇಕು. ಆದರೆ ೬೦ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ! ಇದನ್ನು ೨೦ ಕ್ಕೆ ಇಳಿಸುವ ಚಿಂತನೆ ನಡೆಸುತ್ತಿದ್ದು ಇನ್ನು ೫ ರೋಬೊಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವರು.

ಬೇರೆ ಬೇರೆ ರಾಷ್ಟ್ರದವರೆಲ್ಲ ಬಂದು ಒಂದು ಕಾರ್ಮಿಕರಿಲ್ಲದ ಕಂಪೆನಿಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಇಂಥಾದೊಂದು ಜನರಿಲ್ಲದ ಕಾರ್ಖಾನೆ ಆರಂಭಿಸುವ ಚಿಂತನೆ ನಡೆಸಿರುವರು.

ಬರುಬರುತ್ತಾ ಜನರಿಲ್ಲದ ಕಾರ್ಖಾನೆಗಳನ್ನು ಎಲ್ಲ ದೇಶ ವಿದೇಶಗಳಲ್ಲಿ ಆರಂಭಿಸಿದರೆ ಮುಂದಿನ ಜನಾಂಗದ ಗತಿ ಹೇಗೆಂದು ಈಗಾಗಲೇ ಚಿಂತೆಯಾಗಿದೆ…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...