Home / ಕವನ / ಭಾವಗೀತೆ / ಎತ್ತಿನ ಹಾಡು

ಎತ್ತಿನ ಹಾಡು

ಮಾಗಿಽಯ ಹೊಡಿಯಾಗ
ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ
ನಾ ಹೋಗಿ ಒಂದ
ತೆನಿಧಂಟ ತಿಂದರ
ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ
ಕೈಲಾಸಕ ||೧||

ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ
ನಾ ಹೋಗಿ ಒಂದ
ಹೊಡೆಧಂಟ ತಿಂದರ
ಬಡಬಡಗಿಲೆ ಹೊಡೆದ್ಯೊ | ನಮ ಜೀವ ಹೋದಾವೊ
ಕೈಲಾಸಕ ||೨||

ಹೆತ್ತಿಕಾಳೆ ಕುಡು ಅಂದ್ರಽ
ನಿನ ಮಡದಿ ಅತ್ತ ಮಾರಿ ತಿರುವ್ಯಾಳ
ಹತ್ತಗೊಳಗ ತಿನ್ನಂದ್ರ
ಖಂಡಽಗ ತಿನ್ನುವ
ತುಂಡಿನಽ ತಂದ್ಹೊಡೊ | ಜೀವ ಹೋದಾವೊ
ಕೈಲಾಸಕ ||೩||

ಹಿಂಡಿಽಯ ಕುಡು ಅಂದಽ
ನಿನ ಮಡದಿ ಮೂಗನೆ ಮುರದಾಳ
ಖಂಡಽಗ ತಿನ್ನಂದ್ರ
ಇಖ್ಖಂಡ್ಗ ತಿನ್ನಂಥ
ತುಂಡಿನಽ ತಂದ್ಹೊಡೊ | ನಮ ಜೀವ ಹೋದಾವೊ
ಕೈಲಾಸಕ ||೪||

ಇಕ್ಕಿದರ ಹೆಂಡಿನಾದಿನಽ | ಹಚ್ಚಿದರ ಕುಳ್ಳ ನಾದಿನಽ
ದೇವಽರ ಮುಂದಿಽನ
ಪರಸಾದ ನಾ ಆದ
ಮತ್ತ್ಯಾತಕಾದೇನಽ | ನಮ ಜೀನ ಹೋದಾವ
ಕೈಲಾಸಕ ||೫||

ಸತ್ತರ ತೊಗಲಾದೆನಽ | ಮೆಟ್ಟಿದರ ಕೆರವಾದೆನಽ |
ಹೆಗಲ ಮ್ಯಾಲಾಡಂತ
ಬಾರಕೋಲ ನಾ ಆದ
ಮತ್ತ್ಯಾತಕಾದೇನ | ನಮ ಜೀವ ಹೋದಾವ
ಕೈಲಾಸಕ ||೬||
*****

ಎತ್ತಿನ ಕಡೆಯಿಂದ ಅಡವಿಯಲ್ಲಿ ಬೇಕುಬೇಕಾದಷ್ಟು ಕೆಲಸವನ್ನು ಮಾಡಿಸಿಕೊಂಡು ಅದರ ಸುಖದ ಕಡೆಗೆ ಮಾತ್ರ ಅಲಕ್ಷ್ಯವನ್ನು ಮಾಡಿದರೆ ಅದಕ್ಕೆ ಎಷ್ಟು ದುಃಖವಾಗಬೇಡ! ತಮ್ಮ ಕೆಲಸಗಳನ್ನು ಮಂದಿಯ ಕಡೆಯಿಂದ ಬೇಕಾದ ಹಾಗೆ ಮಾಡಿಸಿಕೊಂಡು, ಅವರ ಅನುವು-ಆಪತ್ತುಗಳ ಕಡೆಗೆ ನೋಡುವ ಪ್ರಸಂಗ ಬಂದಾಗ ಮೋರೆ ತಿರುವುವ ಸ್ವಭಾವವು ಬಹು ಜನರಲ್ಲಿರುತ್ತದೆ. ಅಂಥರಿಗೆ ಚುಚ್ಚುವಂತೆ ಈ ಹಾಡು ಇದೆ. ಇದಲ್ಲದೆ ಒಕ್ಕಲಿಗರ ಮನೆಯಲ್ಲಿ ದನ-ಕರುಗಳ ನೀರು-ಮೇವುಗಳ ಚಿಂತೆಯು ಮನೆಯ ಒಡತಿಗೆ ಇಲ್ಲದೆ ಹೋಗಬಾರದೆಂಬುದಕ್ಕೂ ಈ ಹಾಡು ಉಸಯುಕ್ತವಾಗಿದೆಯೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿಯ ಜಾತಿಗೆ ಸೇರಿದ್ದು.

ಶಬ್ದ ಪ್ರಯೋಗಗಳು:— ಮಾಗಿ=ಮಾಗಿಯ ಕಾಲದ ಎಂದರೆ ಮಾಘ ಮಾಸದ ನೇಗಿಲು ಗೆಲಸ. ಮಾಯದಿಂದ=ಪ್ರೀತಿಯಿಂದ. ಧಂಟಿ=ದಂಟು. ತುಂಡೀನ=ಸೊಕ್ಕಿದವಳನ್ನು. ಹೆಂಡಿ=ಸೆಗಣಿ. ಕುಳ್ಳ=ಬರಣಿ. ಪರಸಾದ=ಧೂಪದ ಬೂದಿ (ಪ್ರಸಾದ). ಬಾರಕೋಲ=ಚಬಕ

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...