Home / ಕವನ / ಕವಿತೆ / ಜೋಳಿಗೆ

ಜೋಳಿಗೆ

ಮಳೆಯಜೋಳಿಗೆ ಹರಿದುಬಿತ್ತಿಲ್ಲಿ
ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ
ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ.

ಕಪ್ಪು ಕಡುರಾತ್ರಿಗೆ ಊಹಿಸದ
ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು
ಒಡೆದೋಡುವ ಹುಚ್ಚು ರಭಸ
ಹಾದಿಬೀದಿಗಳಿಗೂ ನಡುಕ
ಕ್ಷಣಕ್ಷಣಕೂ ದ್ವೀಪಗಳಾಕೃತಿ.
ದಿಕ್ಕುತಪ್ಪಿತೆಲ್ಲೊ
ಚೀತ್ಕಾರ ಆಕ್ರಂದನ ನೀರೆಲ್ಲ ನೆತ್ತರು
ಗುಡಿಗುಂಡಾರ ಮನೆಮಠಗಳೆಲ್ಲ ಮುಳುಗಿ
ಸ್ಮಶಾನ, ಮೇಲೆ ಧಾರಾಕಾರ ಮಳೆ
ಚಂದ್ರತಾರೆಯರು ಸಾಕ್ಷಿಯಾಗದೆ
ಅದೆಲ್ಲೋ ತಿರುಗಾಟ

ತೇಪೆಹಚ್ಚಿದ ಹಿಡಿಕೆ ಹರಿದ ಜೋಳಿಗೆ
ಒಳಗೆಲ್ಲ ಆಕ್ರಂದದ ಕೂಗು ಹೆಣಗಳ ರಾಶಿರಾಶಿ
ಕೆಂಪು ಕರಿನೀರು ಮಣ್ಣೀರು ಕಣ್ಣೀರು
ತುಂಬಿಕೊಂಡು ಮತ್ತೆಲ್ಲೋ ದೇವ ನಡೆದೇಬಿಟ್ಟ.

ಸೂತಕದ ಮನೆ ಮನಗಳಿಗೀಗ
ಕರಿನೆರಳಿನಾ ಛಾಯೆ ಸರಿಸಿ
ಸಾಂತ್ವನಕೊಡಲು ಬಂತು ಬಂತು
ತುಂಬಿಬಂತು ಕರುಣಾಳು
ಹೃದಯವಂತರ ನೋಟಿನ ಜೋಳಿಗೆ
ಬೆಂದ ಹೃದಯಗಳಿಗೊಂದಿಷ್ಟು ಉಸಿರು
ನೆತ್ತಿಗೊಂದು ಸೂರು
ಹೆಜ್ಜೆಗಳಿಗಳಿಗೊಂದಷ್ಟು ಭರವಸೆಗಳಿಗೆ…

ಆದರೆಲ್ಲೋ ನರಿ ನಾಯಿಗಳ ಕಿವಿ ನಿಮಿರಿ
ವಾಸನೆ ಬಡಿದು ಜೋಳಿಗೆ ಎಳೆದಾಡಿ
ಹರಿದು ಹಿಂಜುವ ಮುನ್ನ
ಇಲಿ ಹೆಗ್ಗಣಗಳು ತಿಂದು ತೇಗುವ ಮುನ್ನ
ಬೇಕೀ ಜೋಳಿಗೆಗಳಿಗೆ
ಡಬ್ಬಣ ಸುತಳಿ
ಕಳ್ಳನಲ್ಲದ ಕಾವಲಗಾರನೂ ಕೂಡಾ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...