Home / ಕವನ / ಕವಿತೆ / ಪರದೇಶಿ

ಪರದೇಶಿ

ಹೊತ್ತು ಮೂಡುವ ಮುನ್ನ
ಕೂಡಿ ಹಾಕಿಕೊಂಡ ಕನಸುಗಳನ್ನು
ಎಳೆ ಬಿಸಿಲಿನಲ್ಲಿ ವಿಮಾನವೇರಿದ
ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ)
ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು
ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ
ಬಣ್ಣಬಣ್ಣದ ಹೂವುಗಳೂಡೆಸುತ್ತ ಕುಣಿಯುವರು
ಶತ ಶತಮಾನದಿ ಕೂಡಿ ಬಿದ್ದ
ಧರ್ಮ, ಬಸಿಲಿನ ಹೊಡೆತ, ಮರುಭೂಮಿ,
ಒಂದಕ್ಕೊಂದು ಸ್ಪರ್ಧಿಸುತ
ಅರ್ಥ ಹುಡುಕುವುದರಲ್ಲಿ ಬಿದ್ದಿರುವಾಗ
ಬಂಜರು ಭೂಮಿ ಸಾವಿರ ಸಾವಿರ
ಲಕ್ಷ ಲಕ್ಷ ಜನರನ್ನು ದತ್ತುಕೊಂಡಿದೆ.
ಹಸಿದು ಹಂಬಲಿಸಿದ ಬಂಜೆಯೊಡಲು
ತುಂಬದೆ ತೆಕ್ಕೆ ಬದ್ದಿದೆ
ಒತ್ತಾಗಿ ಬೆಳೆಯುತಿದೆ
ಏನೋ! ನಿಜ, ಈಗ…
ಮಾಳಿ, ಮೇಸ್ತ್ರಿ ಡ್ರೈವರ್, ದೋಬಿ…
ನಿಟ್ಟಿಸಿರಿಡುವರು.
ಹೆಂಡತಿಯ ಮೃದು ಮಾತು ಬಣ್ಣದ ಬಳೆಗಳಲ್ಲಿ
ಮಕ್ಕಳ ಕಿರುಚಾಟ ತುಂಟಾಟಗಳಲ್ಲಿ
ತಾಯಿ ಕೈತುತ್ತಿನಲಿ
ಚಿತ್ರಗಳು ಒಂದೊಂದೇ ಮೂಡಿಸಿಕೊಂಡು
ಹಗಲು ಧಗೆಯಾಗಿ ರಾತ್ರಿ ನೀರಸವಾಗಿ
ಅಬ್ಬರದ ಉಬ್ಬರದ ಅರಬ್ಬರ
ತೊತ್ತುಗಳಾಗಿ
ಪ್ರವಾಹದೇರುಬ್ಬದಲಿ ಸೆಣಸಾಟ
ಬದುಕು ಅಪೂರ್ಣ
ಊರಿನ ಪತ್ರಗಳು
ಮದುವೆ ಮುಂಜುವೆ ಹಬ್ಬ ಹರಿದಿನಗಳು
ಮನದಾಳ ಬಿರಿದು ಬಿಸಿಲಿಗೆ ತತ್ತರಿಸುವುದು
ಬಂಧುಗಳ, ಕರುಳುಗಳ ಸಾವಿನ ಸುದ್ದಿ
ಗಳ ಗಳನೇ ಕಣ್ಣೀರುರುಳಿ
ಅನಾಥ ಪ್ರಜ್ಞೆಯ ನೋವು ಕೂಡಾ
ಅನಾಥವಾದಾಗ
ಯಾವ ಕನಸು ಚಿಗಿತು ಚಿತ್ತಾರವಾಗಿ
ನಿಂತು ಮನ ಆರಳಿಸಿಯಾವು!
ಇವರು ಅನಾಥರು
ಮರಳುಗಾಡಿನ ಮರೀಚಿಕೆ
ಭಾವನೆಗಳು ಅಲ್ಲೇ ಹರಿದು ಕಮರಿ
ಮುಚ್ಚಿ ಬಿಡುವುವು
ತಾನಿಲ್ಲಿ ಯಂತ್ರ, ಗೊತ್ತಾದಾಗ
ಆಸೆ ಸತ್ತು ಕಣ್ಣು ಬತ್ತಿ
ದಿನ ರಾತ್ರಿಗಳಿಗೆ ಬದುಕೇ ಇಲ್ಲ
ನಿಟ್ಟಿಸಿರಿಡುವಾಗ
ದೂರದ ತಾಯ್ನಾಡು ಕೈ ಬೀಸಿ ಕರೆಯುತಿದೆ
ಬಾ ಬಾ ಎಂದು
ಅಂಗಲಾಚುತ್ತಿದೆ ಹೆಂಡತಿಯ
ಏಕಾಂತದ ಕಣ್ಣೀರು
ಬಿಸಿಲಿನುಬ್ಬುಬ್ಬರ ಇಳಿಸಿ ಸೂರ್ಯ
ಕಡಲು ಸೇರಲೇಬೇಕು
ಸತ್ತು ಬದುಕಿಯೋ
ಬದುಕಿ ಸತ್ತೋ
ಕೊನಗೆ ಸಮಾಧಿಗೆ ಬರುತ್ತಾರೆ
ತಾಯ್ನಾಡಿಗೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...