Home / ಕವನ / ಕವಿತೆ / ಪರದೇಶಿ

ಪರದೇಶಿ

ಹೊತ್ತು ಮೂಡುವ ಮುನ್ನ
ಕೂಡಿ ಹಾಕಿಕೊಂಡ ಕನಸುಗಳನ್ನು
ಎಳೆ ಬಿಸಿಲಿನಲ್ಲಿ ವಿಮಾನವೇರಿದ
ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ)
ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು
ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ
ಬಣ್ಣಬಣ್ಣದ ಹೂವುಗಳೂಡೆಸುತ್ತ ಕುಣಿಯುವರು
ಶತ ಶತಮಾನದಿ ಕೂಡಿ ಬಿದ್ದ
ಧರ್ಮ, ಬಸಿಲಿನ ಹೊಡೆತ, ಮರುಭೂಮಿ,
ಒಂದಕ್ಕೊಂದು ಸ್ಪರ್ಧಿಸುತ
ಅರ್ಥ ಹುಡುಕುವುದರಲ್ಲಿ ಬಿದ್ದಿರುವಾಗ
ಬಂಜರು ಭೂಮಿ ಸಾವಿರ ಸಾವಿರ
ಲಕ್ಷ ಲಕ್ಷ ಜನರನ್ನು ದತ್ತುಕೊಂಡಿದೆ.
ಹಸಿದು ಹಂಬಲಿಸಿದ ಬಂಜೆಯೊಡಲು
ತುಂಬದೆ ತೆಕ್ಕೆ ಬದ್ದಿದೆ
ಒತ್ತಾಗಿ ಬೆಳೆಯುತಿದೆ
ಏನೋ! ನಿಜ, ಈಗ…
ಮಾಳಿ, ಮೇಸ್ತ್ರಿ ಡ್ರೈವರ್, ದೋಬಿ…
ನಿಟ್ಟಿಸಿರಿಡುವರು.
ಹೆಂಡತಿಯ ಮೃದು ಮಾತು ಬಣ್ಣದ ಬಳೆಗಳಲ್ಲಿ
ಮಕ್ಕಳ ಕಿರುಚಾಟ ತುಂಟಾಟಗಳಲ್ಲಿ
ತಾಯಿ ಕೈತುತ್ತಿನಲಿ
ಚಿತ್ರಗಳು ಒಂದೊಂದೇ ಮೂಡಿಸಿಕೊಂಡು
ಹಗಲು ಧಗೆಯಾಗಿ ರಾತ್ರಿ ನೀರಸವಾಗಿ
ಅಬ್ಬರದ ಉಬ್ಬರದ ಅರಬ್ಬರ
ತೊತ್ತುಗಳಾಗಿ
ಪ್ರವಾಹದೇರುಬ್ಬದಲಿ ಸೆಣಸಾಟ
ಬದುಕು ಅಪೂರ್ಣ
ಊರಿನ ಪತ್ರಗಳು
ಮದುವೆ ಮುಂಜುವೆ ಹಬ್ಬ ಹರಿದಿನಗಳು
ಮನದಾಳ ಬಿರಿದು ಬಿಸಿಲಿಗೆ ತತ್ತರಿಸುವುದು
ಬಂಧುಗಳ, ಕರುಳುಗಳ ಸಾವಿನ ಸುದ್ದಿ
ಗಳ ಗಳನೇ ಕಣ್ಣೀರುರುಳಿ
ಅನಾಥ ಪ್ರಜ್ಞೆಯ ನೋವು ಕೂಡಾ
ಅನಾಥವಾದಾಗ
ಯಾವ ಕನಸು ಚಿಗಿತು ಚಿತ್ತಾರವಾಗಿ
ನಿಂತು ಮನ ಆರಳಿಸಿಯಾವು!
ಇವರು ಅನಾಥರು
ಮರಳುಗಾಡಿನ ಮರೀಚಿಕೆ
ಭಾವನೆಗಳು ಅಲ್ಲೇ ಹರಿದು ಕಮರಿ
ಮುಚ್ಚಿ ಬಿಡುವುವು
ತಾನಿಲ್ಲಿ ಯಂತ್ರ, ಗೊತ್ತಾದಾಗ
ಆಸೆ ಸತ್ತು ಕಣ್ಣು ಬತ್ತಿ
ದಿನ ರಾತ್ರಿಗಳಿಗೆ ಬದುಕೇ ಇಲ್ಲ
ನಿಟ್ಟಿಸಿರಿಡುವಾಗ
ದೂರದ ತಾಯ್ನಾಡು ಕೈ ಬೀಸಿ ಕರೆಯುತಿದೆ
ಬಾ ಬಾ ಎಂದು
ಅಂಗಲಾಚುತ್ತಿದೆ ಹೆಂಡತಿಯ
ಏಕಾಂತದ ಕಣ್ಣೀರು
ಬಿಸಿಲಿನುಬ್ಬುಬ್ಬರ ಇಳಿಸಿ ಸೂರ್ಯ
ಕಡಲು ಸೇರಲೇಬೇಕು
ಸತ್ತು ಬದುಕಿಯೋ
ಬದುಕಿ ಸತ್ತೋ
ಕೊನಗೆ ಸಮಾಧಿಗೆ ಬರುತ್ತಾರೆ
ತಾಯ್ನಾಡಿಗೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...