Home / ಕವನ / ಕವಿತೆ / ಗಡಿಯಲ್ಲಿ ಕಾವ್ಯ

ಗಡಿಯಲ್ಲಿ ಕಾವ್ಯ

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು
ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು
ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ
ಶಬ್ದ ಮೀರಿದ ಸಂಕಟಗಳ ನುಂಗಿ
ದೀರ್ಘ ಬದುಕಿನ ವಿಷಾದಗಳ ಮರೆತು
ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ
ಸರಹದ್ದುಗಳೇ ಇಲ್ಲದ ಮಹಾಕಾವ್ಯ.

ನನ್ನ ಕಾವ್ಯದ ಒಂದೊಂದು ಅಕ್ಷರವೂ
ನೂರಾರು ಪ್ರತಿಮೆಗಳ ಮೂಡಿಸುತ್ತಲೇ
ಅರ್ಥವಿಲ್ಲದ ಸರಹದ್ದುಗಳ ಅಳಿಸುತ್ತದೆ
ಮಾನವ ಕಾವ್ಯದ ಒಂದೊಂದು ಸ್ವರವೂ
ಅನಂತ ಆಗಸದಲಿ
ಸ್ನೇಹದ ಬಣ್ಣ ಹರಡುತ್ತಿದೆ.
ಸರಹದ್ದುಗಳೇ ಇಲ್ಲದ ಕಾವ್ಯ
ಗುನುಗುನಿಸಿ ಹಾಡುತ್ತಿದೆ.
ಎರಡು ದೇಶಗಳ ಮಧ್ಯೆ ಎಳೆದ ರೇಖೆಗಳನು
ಎಡಬಿಡದೇ ಸುರಿದ ಮಳೆ ಅಳಿಸಬಹುದೆ?
ಗುನುಗುನಿಸಿ ಹಾಡಿದ ನನ್ನ
ಮೇಘ ಮಲ್ಹಾರದ ರಾಗ
ಹೇಗೆ ಮುರಿಯುತ್ತದೆ ನೋಡು
ಗಡಿಗಳ ಗೋಡೆ ಸರಹದ್ದು ಸರಪಳಿಗಳನು
ಲೋಕವೇ ನಿದ್ದೆಯ ತೆಕ್ಕೆಗೆ ಜಾರಿರಲು
ಗಸ್ತು ನಿಂತಿದೆ ನೋಡು ಗಡಿಯಲ್ಲಿ ಕಾವ್ಯ.

ಬೇಕಿಲ್ಲ ಗನ್ನು ಬಂದೂಕು ಮಿಸಾಯಿಲ್ಲು ನನಗೆ
ಹೃದಯ ಬೆಸೆಯುವ ಜೀವಂತ ಕಾವ್ಯವಿದೆಯಲ್ಲ?
ನನ್ನವರ ಹಾಡಿಗೆ ಗಡಿಯಾಚೆಗಿನ
ಅವರೂ ಹಾಡುತ್ತಿದ್ದಾರೆ
ನೋಡು, ನನ್ನವರ ಹೆಜ್ಜೆಯೊಂದಿಗೆ
ಅವರೂ ಕುಣಿಯುತ್ತಿದ್ದಾರೆ
ಹೇಗೆ ಅರಳುತ್ತಿದೆ ನೋಡು ಗಡಿಯಲ್ಲಿ
ನಿರ್ಭಂಧಗಳೇ ಇಲ್ಲದ ಮಾನವ ಕಾವ್ಯ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...