Home / ಕವನ / ಕವಿತೆ / ಮೂರು ಮೊಗಗಳು

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ
ನಾಲ್ಕನೆಯ ಮೊಗ ಇದ್ದೇ ಇರುವುದು
ಕಾಣುವುದರಾಚೆಗೇ ಕಾಣದುದು ಇರುವುದು
ಕಾಣುವುದೆ ಮರೆ ಕಾಣದಿರುವುದಕೆ
ಓ ಧರ್ಮಚಕ್ರವೇ
ಕೈಹಿಡಿದು ನಡೆಸೆನ್ನನು
ಸತ್ಯಮೇವ ಜಯತೆ

ಒಂದು ಹಕ್ಕಿಯು ತಿನ್ನುತಿದ್ದರು
ಇನ್ನೊಂದು ಹಕ್ಕಿಯು ನೋಡುತಿದ್ದರು
ಒಂದು ಹಕ್ಕಿಗೆ ಹೇಗೆ ಗೊತ್ತು
ಇನ್ನೊಂದು ಹಕ್ಕಿ ಹೊರಡಲು ಯೋಚಿಸಿರುವುದು
ಒಟ್ಟಿಗೇ ಅವು ರೆಕ್ಕೆ ಬಿಚ್ಚಿ
ಆಕಾಶದಲ್ಲದೊ ಹಾರುತಿರುವುವು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಹಗಲಿಗಿರುಳನು ಕಂಡರಾಗದು
ಇರುಳಿಗೆ ಬಳಕೆಂದರಾಗದು
ಆದರೂ ಅವು ಒಬ್ಬನೇ ನಟ
ಎರಡು ಪಾತ್ರಗಳ ಮಾಡಿದಂತೆ
ಒಂದು ವೇಷವ ಕಳಚದೇ ಇ-
ನ್ನೊಂದು ರಂಗಕೆ ಬರುವುದುಂಟೆ
ಹಗಲು ಯಾವುದು ಇರುಳು ಯಾವುದು
ಒಂದ ಚುಚ್ಚಿದರಿನ್ನೊಂದು ನೋಯುವುದು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ತಿಳಿನೀರಿನೊಳಗೆ ಮಳೆನೀರಿನೊಳಗೆ
ಬಚ್ಚಲ ನೀರಿನೊಳಗೆ ಹಬೆಯ ಕನ್ನಡಿಯೊಳಗೆ
ಅಂಗಡಿಕಿಟಿಕಿಗಳ ಗಾಜಿನೊಳಗೆ
ಎಲ್ಲೆಲ್ಲೂ ಬಿಂಬವೆ ಪ್ರತಿಯೊಂದು ಬಿಂಬವೆ
ಪ್ರತಿಸಲವು ನೋಡಿದರು ಪ್ರತಿಸಲವು ಸೋಜಿಗವೆ
ಈ ಪ್ರತಿರೂಪಕೇನರ್ಥ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಪುಣ್ಯಕೋಟಿಯ ಕತೆಯ ಕೇಳಿ
ಕಣ್ಣೀರು ಕರೆಯದ ಮನುಜನಿರುವನೆ
ಮಾತು ಮರೆಯದ ಮಾತಿಗಾಗಿಯೊ
ಮಮತ ಮರೆಯದ ಮಾತೆಗಾಗಿಯೊ
ಕಟ್ಟು ಕತೆಯೋ ಸತ್ಯಕತೆಯೊ
ಎಲ್ಲ ಕತೆಗಳ ಒಟ್ಟುಕತೆಯೋ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...