Home / ಲೇಖನ / ಇತರೆ / ಯುವಪೀಳಿಗೆ ಎತ್ತ ಸಾಗಿದೆ?

ಯುವಪೀಳಿಗೆ ಎತ್ತ ಸಾಗಿದೆ?

ಇಂದಿನ ಯುವ ಪೀಳಿಗೆ ಬಗ್ಗೆ ಕೇಳಿದರೆ, ಓದಿದರೆ, ನೋಡಿದರೆ ‘ಅಯ್ಯೋ ಪಾಪ!’ ಅನಿಸುವುದು.

ದುಡ್ಡಿಗಾಗಿ ಏನೆಲ್ಲ ಮಾಡುತ್ತಿರುವರು… ಎಂದಾಗ ಇಲ್ಲಿ ಬರೆಯಲು ಮನಸ್ಸು ಬರುತ್ತಿಲ್ಲ. ಆ ರೀತಿ ನಡೆದುಕೊಳ್ಳುತ್ತಿರುವರು. ದುಡ್ಡೇ ದೊಡ್ಡಪ್ಪ. ದುಡ್ಡಿನ ಮುಂದೆ ಬೇರೆ ದೇವರಿಲ್ಲವೆಂದು ಕೆಲವರು ಭಾವಿಸಿ, ದುಡ್ಡಿಗಾಗಿ, ಪಾಕೆಟ್ ಮನಿಗಾಗಿ, ಸ್ಮಾರ್ಟ್ ಫೋನಿಗಾಗಿ ಏನೆಲ್ಲ ಕಳೆದುಕೊಳ್ಳಲು ಸಿದ್ಧರು, ಬದ್ಧರು. ಶತಸಿದ್ಧರಾಗಿ ನಿಂತಿರುವರು.

ಇದು ಬರಿಯ ಲಖನೌದ ಕೊಯ್ಲಿಯಲ್ಲಿ ಜರುಗಿದ ಕಥೆ ವ್ಯಥೆಯಲ್ಲ. ಎಲ್ಲ ಕಡೆ ಜರುಗುತ್ತಿದೆ. ಇದನ್ನು ಬೆಳಕಿಗೆ ಬಂದಿಲ್ಲ ಅಷ್ಟೇ

ಶಾಲಾ ಕಾಲೇಜು ಮಕ್ಕಳು ಕೆಲವರಿಗೆ ಸ್ಮಾರ್ಟ್ ಫೋನ್ ಅಂದ್ರೆ ಜೀವ. ಕೊಳ್ಳಲು ಕಾಸಿಲ್ಲ. ಯಾರನ್ನು ಕೇಳುವುದು? ಅವರಿವರ ಕೈಯಲ್ಲಿ ಫೋನ್ ನೋಡಿ ತಾವೆ ಕೊಳ್ಳಲು ಮಾರ್ಗ ಹುಡುಕಿದರು! ಕೇವಲ ೫೦೦ ರೂಪಾಯಿಗೆ ರಕ್ತ ಮಾರಿಕೊಂಡರು. ವಯಸ್ಸು ೧೪ ವರ್‍ಷ ಮಾತ್ರ.

ಈ ರೀತಿ ಮೂರು ಜನ ತಮ್ಮ ರಕ್ತ ಮಾರಿದರು. ದಲ್ಲಾಳಿಗಳು ರಕ್ತ ನಿಧಿಗೆ ಕರೆದೊಯ್ಯುವರು. ಹಣ ಕೊಟ್ಟು ರಕ್ತ ಬಸಿದು ಕಳಿಸಿದರು. ನಾಲ್ಕು ವರ್ಷದ ಹಿಂದೆ ಇದೇ ಸಂಜಯ್‌ನ ಅಪ್ಪ ತೀರಿ ಹೋದ, ಕ್ಲಿನಿಕ್‌ನಲ್ಲಿ ಅಮ್ಮ ದುಡಿದರೆ ೩೦೦೦ ರೂಪಾಯಿ, ಸಂಜಯ್ ಬಟ್ಟೆ ಅಂಗಡಿಲಿ ೨೦೦೦ ರೂಪಾಯಿ ದುಡಿದರೂ ಹೊಟ್ಟೆ ಬಟ್ಟೆ ಮನೆ ಬಾಡಿಗೆ ಸಾಲುತ್ತಿರಲಿಲ್ಲ. ಹೀಗೆ ಸಂಜಯ್-ವಿನೂತ್-ಪುನೀತ್ ರಕ್ತ ನೀಡಿರುವರು.

ರಕ್ತದಾನ ಮಾಡಲು ಕಡ್ಡಾಯವಾಗಿ ೧೮ ವರ್‍ಷ ತುಂಬಿರಬೇಕು. ಆರೋಗ್ಯವಂತನಾಗಿರಬೇಕು.

ಹಿಮೊಗ್ಲೋಬಿನ್ ಮಟ್ಟ ಕನಿಷ್ಠ ೧೩ ಇರಲೇಬೇಕು. ಈಗಾಗಲೇ ರಕ್ತ ನೀಡಿ ೩ ತಿಂಗಳಾಗಿರಬೇಕು!

ಹೀಗಾಗಿ ಲಖನೌದ ಕೊಯ್ಲಿಯಲ್ಲಿರುವ ರಕ್ತ ನಿಧಿಗೆ ಬೀಗ ಹಾಕಿರುವ ಪೊಲೀಸರು ಮೂವರು ಏಜೆಂಟರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಕಟಕಟೆಗೆ ಹತ್ತಿಸಿರುವರು.

ಆದ್ದರಿಂದ ಮಕ್ಕಳೆ ಓದುವಾಗ ಓದಬೇಕು.

ಓದುವಾಗ ಗಳಿಕೆ ಸಲ್ಲ. ವಾಮ ಮಾರ್ಗದಿಂದ ಗಳಿಸಿದ್ದು ನರಕದ ಸಮಾನ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...