Home / ಕವನ / ಕವಿತೆ / ಅವ್ವನ ಸಂಸ್ಕೃತಿ

ಅವ್ವನ ಸಂಸ್ಕೃತಿ

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು
ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ.
ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ
ಶತಶತಮಾನಗಳ ತಂಪು ತಗುಲಿ ತಂಗಾಳಿ
ತಣ್ಣಗಾಗುತ್ತ ಭೂಮಿಯಾದಳು ಅಮ್ಮ
ಬೆಳೆಸಿದಳು ಮಹಾ ವೃಕ್ಷಗಳ ಅವಳು
ಬೇರು ಬಿಡಿಸಿದಳು ಒಡಲಲ್ಲಿ
ಲೋಕಕ್ಕೆ ತಂಪು ನೀಡಿದಳು
ಗುಡ್ಡಗಾಡುಗಳಲ್ಲಿ ಬುಡಕಟ್ಟುಗಳ ನೆಲೆ
ಪೋಷಿಸಿದಳು ತಂಪೆರೆದಳು ಅವಳು
ಜೀರುಂಡೆಗಳ ಝೇಂಕಾರ ಕೇಳುತ್ತ
ಹಲಸು ಕಿತ್ತಳೆ ಮಾಮರಗಳ ಬೆಳೆಸಿದಳು
ಋತುಮನಗಳ ಪರಿಮಳ ಸೂಸಿದಳು
ಒಣಗಿದೆಲೆಗಳ ಕೊಳೆತ ವಾಸನೆಯಲ್ಲಿ
ನಾಗರೀಕತೆಗಳ ಸುಳಿವಿಲ್ಲ
ಅಮ್ಮನ ಶಾಂತ ಸೆರಗು ಮಾತ್ರ
ದೂರದೂರದ ತನಕ ಹಬ್ಬಿದ ಶಾಂತತೆ
ಹುಲ್ಲು ಹಾಸಿನ ಮೇಲೆ ಅವ್ವನ ಸರಳ ಮುಗ್ಧತೆ
ಬಣ್ಣಬಣ್ಣದಲಿ ಕಣ್ಣು ಮಿಟುಕಿಸುವ ಕಮನಬಿಲ್ಲು
ನೆರಳು ನೀಡಲಾರದು ಭೂತಾಯಿ ಒಡಲಿಗೆ
ಮೋಡಗಳ ನೆರಳು ಬೆಳಕಿನಾಟ ಮಧ್ಯಾಹ್ನ
ಅಮ್ಮನ ಏಕಾಕಿತನಗಳಿಗೆ ತಿವಿಯುವ ಖಾಲಿತನವಿಲ್ಲ
ಬೇಸರವಿಲ್ಲ ಬೆಟ್ಟಕ್ಕೆ ಎಂದಿಗೂ ಕಾಲ ಹೊರೆಯಾಗಿಲ್ಲ
ಒಂದೇ ತರಹದ ಏಕತಾನತೆಯ ಚಿಂತೆ ಅವಳಿಗಿಲ್ಲ
ಅವಳು ಹೆತ್ತು ಹೊತ್ತ ಗರ್ಭದ ಹೊಕ್ಕಳಬಳ್ಳಿ
ಅನನ್ಯ ತಲಸ್ಪರ್ಶಿ ತಾಯ್ತನದ ಮುಖಕಾಂತಿ,
ಅಮ್ಮ ತಟ್ಟಿದ ರೊಟ್ಟಿ ಸುಡುವ ಹೆಂಚಿನ ತಳದಲ್ಲಿ
ಮಿಂಚು ಬಳ್ಳಿಯ ಸರಿದಾಟ, ಕಣ್ಣಮುಚ್ಚಾಲೆ
ಉರಿವ ಕಟ್ಟಿಗೆಯ ಬಿಸಿ ತುಂಬಿದ ಸುವಾಸನೆ
ಆಪ್ತ ದೀಪದ ಬುಡ್ಡಿಯ ಮಂದ ಬೆಳಕು,
ಚಿತ್ರಿಸುವ ತರತರದ ನೆರಳ ಚಿತ್ತಾರಗಳು
ನೋವು ಸಂಕಟಗಳ ಮದ್ಯ ಮಿನುಗಿ
ಲಯವಾದ ಸೂರ್ಯ ಕಿರಣಗಳನ್ನು
ಮುತ್ತಿಟ್ಟು ಋತುಗಳ ಅಪ್ಪುಗೆಯಲ್ಲಿ
ಪ್ರಕೃತಿ ಮಲಗಿತ್ತು ಸುಖ ನಿದ್ರೆಯಲ್ಲಿ
ಅಮ್ಮನ ಮೆಚ್ಚಗಿನ ಮೃದು ಹಚ್ಚಡವ ಹೊದ್ದು
ಒಲೆಯಲ್ಲಿನ ನಿಗಿನಿಗಿಸುವ ಬೆಂಕಿ ಕೆಂಡದಲ್ಲಿ
ಅಮ್ಮನ ನೋವಿನ ನೆಲೆಗಳ ಪ್ರತಿಫಲನವಿತ್ತು
ದೈತ್ಯ ನಿಸರ್ಗದ ನಿಡಿದಾದ ಟೊಂಗೆಗಳಲ್ಲಿ
ಅಮ್ಮನ ಪ್ರೀತಿಯ ಜೀವಜಾಲವಿತ್ತು
ಬೆಟ್ಟದ ನಿಶ್ಚಲ ಕಲ್ಲು ಮಣ್ಣುಗಳಲ್ಲಿ
ಧರ್ಮದರ್ಶಿಗಳ ನೆರಳಿತ್ತು
ಶತಶತಮಾನಗಳಿಂದ ಗಟ್ಟಿಯಾಗಿ ನಿಂತ
ಧೃಢಚಿತ್ತದ ಬೆಟ್ಟದ ಕಲ್ಲುಗಳಲ್ಲಿ
ಅಮ್ಮ ಕಟ್ಟಿದ ಬುಡಕಟ್ಟುಗಳಿದ್ದವು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...