Home / ಕವನ / ಕವಿತೆ / ಸಾಮಾಜಿಕ ನ್ಯಾಯ

ಸಾಮಾಜಿಕ ನ್ಯಾಯ

ನನ್ನ ಹರಿದ ಅಂಗಿಯ ಮಧ್ಯದ
ತುಂಡು ಬಟ್ಟೆಯನ್ನೇ ತೆಗೆದು ಅವ್ವ
ಹೊಲಿದಳು ನನಗೊಂದು ನಮಾಜಿನ ಟೋಪಿ
ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ
ಚಂದದ ಕಸೂತಿ ಹೆಣೆದ ಟೊಪ್ಪಿಗೆ
ಜಂಭದಿಂದ ಭಿಮ್ಮನೆ ಬೀಗುತ್ತ
ಅಹಮ್ಮಿನ ನೋಟ ಬೀರಿ
ನನ್ನವ್ವನ ಬಡತನವನು
ಅಣಕಿಸಿ ನಗುತ್ತಿದೆ ನೋಡು!

ಬೀಡಿ ಕಟ್ಟುವ ನನ್ನವ್ವನ
ನಾಜೂಕು ಎಸಳು ಬೆರಳುಗಳು
ಮೀನಾರಿನ ಅಜಾಹ್‌ನ ಕರೆಗೆ
ತಲೆಮೇಲೆ ಸೆರೆಗೆಳೆದು
ಹರಿದ ಬಟ್ಟೆಯನ್ನೇ ಹಾಸಿ
ನಮಾಜು ಮಡುತ್ತಿರುವುದ ಕಂಡು
ನೆರೆಯವಳ ಬಹುಮಹಡಿ ಬಂಗಲೆಯಿಂದ
ಮಖಮಲ್ಲಿನ ಜಾನಿಮಾಜು
ಧಿಮಾಕಿನಿಂದ ನಗುತ್ತಿದೆ ನೋಡು!
ಶ್ರಮಜೀವಿ ನನ್ನಪ್ಪ
ದಿನವೆಲ್ಲ ರಿಕ್ಷಾ ಹೊಡೆದು
ಗಳಿಸಿದ ಪುಡಿಗಾಸಿನ ಲೆಕ್ಕ
ದಣಿದ ನನ್ನವ್ವನ ಕೈಗಿಟ್ಟು
ದೈನ್ಯತೆಯ ನೋಟ ಬೀರಿ
ಕಣ್ಣೆತ್ತಿ ನೋಡಿದಾಗ
ಮಹಡಿ ಮನೆ ಸಾಹುಕಾರನ
ಕೆಂಪು ನೋಟಿನ ಕಟ್ಟುಗಳು
ನನ್ನವ್ವನ ಕೈಯಲ್ಲಿದ್ದ
ಪುಡಿಗಾಸು ನೋಡಿ
ಕಿಸಕ್ಕನೆ ನಗುತ್ತಿವೆ ನೋಡು!

ನನ್ನವ್ವನ ಹರಿದ ಸೀರೆಗೆ
ಜೋಡಿಸಿದ ನೂರೆಂಟು ತೇಪೆ
ದುಡಿದು ದುಡಿದು ಸವೆದ
ನನ್ನಪ್ಪನ ಅಂಗೈ ರೇಖೆ
ಸವೆದು ಶಿಥಿಲವಾದ ಪಂಚೆ
ಹರಿದ ಬನಿಯನ್ನುಗಳ ನೋಡಿ
ಸೂಟುಬೂಟು ಪಿತಾಂಬರ
ಕಟುಕಿಯಾಡಿ ನಗುವಾಗ ವ್ಯವಸ್ಥೆಯ ಎದೆಗೆ
ಝಾಡಿಸಿ ಒದ್ದು ಕೇಳಬೇಕೆನಿಸುತ್ತದೆ
ಹೇಳು ಎಲ್ಲಿ ಬಚ್ಚಿಟ್ಟಿರುವೆ
ನಿನ್ನ ಸಾಮಾಜಿಕ ನ್ಯಾಯ?
*****
ಅಜಾಹ್‌ನ – ನಮಾಜಿನ ಕರೆ

ಜಾನಿಮಾಜು – ನಮಾಜ್ ಮಾಡುವಾಗ ಕೆಳಗೆ ಹಾಸಿಕೊಳ್ಳುವ ಬಟ್ಟೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...