Home / ಬಾಲ ಚಿಲುಮೆ / ಕವಿತೆ / ತುಂಟ ಪುಟ್ಟ

ತುಂಟ ಪುಟ್ಟ

ನಮ್ಮ ಪುಟ್ಟ ಬಹಳ ದಿಟ್ಟ
ಸಿಹಿ ಅಂದ್ರೆ ತುಂಬಾ ಇಷ್ಟ
ಸಕ್ಕರೆ ಬೆಲ್ಲ ಕದ್ದು
ಯಾರೂ ಕಾಣದಂಗೆ ಮೆದ್ದು

ಸೈಕಲ್‌ ಅಂದ್ರೆ ಪ್ರಾಣ
ಹೊಡೆಯೋಕೆ ಬೇಕು ತ್ರಾಣ
ಎಷ್ಟೇ ಟ್ರಾಫಿಕ್ಕಿದ್ರೂ
ನುಗ್ಗೇ ಬಿಡ್ತಾನೆ ಹೇಗಾದ್ರೂ

ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು
ಕೊಡದಿದ್ರೆ ಬಿಡೋದೆ ಇಲ್ಲ
ಕೆಲಸಕ್ಕೊಂದು ರೇಟು
ಅಮ್ಮ ಕೊಡ್ತಾಳೆ ಏಟು

ಟೆಸ್ಟ್ ಅಂದ್ರೆ ತುಂಬಾ ಕಷ್ಟ
ಓದೋಕೆ ಕೂರಿಸೋದೆ ಸಂಕಷ್ಟ
ಬಾಯಿ ಮಾತ್ರಾ ಬೊಂಬಾಯಿ
ತಲೆಯೊಳಗಿಲ್ಲ ಬದನೆಕಾಯಿ

ಶಾಲೆಗೆ ಬರೋದು ಲೇಟೆ
ಅಲೆಯೋದು ಪೇಟೆ ಪೇಟೆ
ಬಂದಾಗ್ಲ ಮಾಡ್ತಾನೆ ತರ್ಲೆ
ಮೇಷ್ಟ್ರು ಕೇಳ್ತಾರೆ ಮರ್ಲೆ

ತಂಗಿ ತುಂಬಾ ಜಾಣೆ
ಅಣ್ಣ ಹಂಗ್ಯಾಕೊ ಕಾಣೆ
ಕ್ಲಾಸಿಗವಳೆ ಫಷ್ಟು
ಎಲ್ಲಾದ್ರಲ್ಲೂ ಫಾಸ್ಟು

ಬಂದೇ ಬಿಡ್ತು ರಿಸಲ್ಟು
ಪುಟ್ಟಂಗಾಯ್ತು ಇನ್ಸಲ್ಟು
ಕ್ಲಾಸಿಗಿವನೆ ಲಾಸ್ಟು
ಆಯ್ತು ಒಂದೊರ್ಷ ವೇಸ್ಟು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...