ಕತ್ತಲು

ನಟ್ಟನಡು ರಾತ್ರಿಯಲಿ
ಹುತ್ತಗಟ್ಟಿತು ಕತ್ತಲು
ತುಟ್ಟತುದಿ ಕೋವಿಯಲಿ
ಹೆಡೆಯ ಎತ್ತಿತು ಸುತ್ತಲು

ಬುಸ್ಸೆನ್ನುವ ಭಾವದಲ್ಲಿ
ಸತ್ತ ಸಂಬಂಧಗಳು
ವಿಷನಾಗರ ನಾಲಗೆಯಲ್ಲಿ
ನಕ್ಷತ್ರಗಳ ನುಂಗಿದವು
ಗೋರಿಯೊಳಗೆ ತಂಗಿದವು
ಆಕಾಶದ ಹಣೆಯಲ್ಲಿ
ಕುಂಕುಮದ ಚಂದಿರನ
ಒಂದೇಕ್ಷಣ ಒರೆಸಿದವು
ಕರಿಮಣಿಗಳ ಕಿತ್ತವು
ಬೆಳದಿಂಗಳ ಬಸಿದವು.

ಮುಖ ಕಾಣದ ಸುಖ ಸಹಿಸದ
ಕುಣಿವ ಮೂಳೆಗತ್ತಲು
ಇತಿಹಾಸದ ಪರಿಹಾಸದ
ಹುಸಿಪಾಠವು ಎತ್ತಲು
ಸದ್ದಿಲ್ಲದೆ ಗೆದ್ದಲ ಗೆದ್ದು
ಗಾದಿಯ ಏರಿತು ಹಾವು
ಹೊರಗಿನ ಕತ್ತಲು ಒಳಗನು ಸೇರಿ
ಹತ್ತಿರವಾಯಿತು ಸಾವು
ಬೆಳಕಿನ ಚಿಗುರಿಗೆ ಉಗುರನು ಹಾಕಿ
ಕನಸನು ಕೊಂದಿತ್ತು-
ಕತ್ತಲು-
ಕನಸನು ಕೊಂದಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author
Next post ಆಸೆಯು ಮುಂದೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…