Home / ಕವನ / ಕವಿತೆ / ತಂದೇ ಪಾಲಿಸೋ

ತಂದೇ ಪಾಲಿಸೋ

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ ||

ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. ||

ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ
ಆತ್ಮದ | ಅಗಣಿತ ರೂಪ ಸಲೀಲಾ
ಮಾನಸ ಲೋಕದ ಮತಿಯ ಮಂದಿರದಿ | ನೀನೇ ನೀನಾಗಿ ತುಂಬಿ
ಮೆರೆವಂಥ | ನಿರ್ಮಾಯ ನಿರಾವಲಂಬಿ || ೧ ||

ಹಂಸಾ ನಾಥಾ ಆದೀ ನಾಥಾ | ಚಿದಂಬರಾ ಜಿನದೇವಾ
ಜೈನರು | ನೆನೆಯುವ ನಿರ್ವಾಣ ಭಾವಾ
ಮಾರಾರಿ ಮಾಯಾರಿ ಶೂನ್ಯದಿ ಸಂಚಾರಿ | ಬುದ್ಧನ ಬುದ್ಧಿಗೆ ಹೊಳೆದೆ
ಮಿಂಚಂತೆ | ಇದ್ದವನಿದ್ದಲ್ಲೆ ಇಳಿದೆ || ೨ ||

ಇಹದಲ್ಲಿ ನಿನ್ನಯ ಪ್ರೇಮದ ಸಲಿಲವ | ಹರಿಸಿದ ಕ್ರೈಸ್ತನ ಪ್ರಭುವೆ
ಸಮತೆಯ ಲೋಕವ ತೆರೆದಂಥ ವಿಭುವೆ
ಗುಡ್ಡದ ಗವಿಯಲಿ ಪೈಗಂಬರನಿಗೆ | ಕಾಣಿಸಿ ಕಣ್ಣಾದ ಅಲ್ಲಾ
ಈಶ್ವರ | ಮುಸ್ಲಿಂ ಧರ್ಮದ ಬೆಲ್ಲಾ || ೩ ||

ರಾಮನ ಕೃಷ್ಣನ ಹತ್ತವತಾರದ | ವಿಷ್ಟು ನಾರಾಯಣ ವಂದೇ
ಸಂತರ | ಭಕ್ತರ ಪೊರೆಯುವ ತಂದೇ
ಶಿವಶಿವ ಹರಹರ ಶಂಭೋಶಂಕರ | ಗಿರಿಜಾಧವನೆಂದು ಕರೆವೆ
ಶೈವರ | ವಿಶ್ವೇಶ್ವರನೆಂಬ ವರವೇ || ೪ ||

ಆದಿಶಕ್ತಿ ಆದಿಮಾಯೆ ಸರ್ವೇಶ್ವರಿ | ಶಾಂಭವಿ ಪಾರ್ವತಿ ಲಕುಮೀ
ಶಾರದೆ | ದೇವಿಯ ರೂಪದ ಸ್ವಾಮಿ
ಸರ್ವಧರ್ಮ ಸಮಲೋಚನ ಸರ್ವೇಶ | ಸರ್ವಾಗಮ ವಂದ್ಯ ಬಂಧು
ದೇವನೆ | ದೇಶಕಾಲಾತೀತ ಸಿಂಧು || ೫ ||

ಸಕಲ ನಿಷ್ಕಲ ರೂಪ ಸಕಲ ಕಲಾಧೀಶ | ಸಕಲಾತ್ಮ ಪರಿಪೂರ್ಣಶಿಲ್ಪಿ
ವಿಶ್ವದ | ರಚನೆಯ ಮಾಡಿದ ಶಿಲ್ಪಿ
ವೇದಾಗಮಗಳೆ ಹೊಗಳಲರಿಯದ ನಿನ್ನ | ಬಣ್ಣಿಸ ಹೋಗುವ ಮರುಳ
ಅಲ್ಪನು | ಅರಿಯನು ನಿನ್ನಯ ತಿರುಳ || ೬ ||

ಬೈಬಲು ಭಗವದ್ ಗೀತೆ ಕುರಾನು | ಎಲ್ಲವು ಹಾಡಿದ ಗುರುವೆ
ಮನಗಳ | ಮಂದಿರಗಳಲೆಲ್ಲ ಇರುವೆ
ಸಣ್ಣ ದೇವರುಗಳು ನೂರಾರು ಇರುವಾಗ | ಸಣ್ಣದಾಯಿತು ಮನವು ತಂದೇ
ತೋರಿಸು | ಎಲ್ಲರ ದೇವರು ಒಂದೇ || ೭ ||

ವಿಶ್ವ ವಿಶ್ವಗಳನ್ನೆ ತುಂಬಿ ತೋರುವ ನಿನ್ನ| ವಿಶ್ವರೂಪವ ತೋರು ದೇವಾ
ಸೃಷ್ಟಿಯ ಪ್ರತಿರೂಪ ನಿನ್ನ ಪ್ರಭಾವ || ೮ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...