ಕೂಲಿಕೆಲಸ ನಮ್ಮದು

ಕೂಲಿಕೆಲಸ ನಮ್ಮದು
ದಿನದ ಕೂಲಿಕೆಲಸ ನಮ್ಮದು|
ಅಂದಿನದ ಕೂಲಿ ಅಂದೇ ಪಡೆವ
ನಾಳಿನ ಕೆಲಸದ ಖಾತ್ರಿಯೇ ಇಲ್ಲ||

ದಿನದ ಕರ್ಮಕೆ ಪ್ರತಿಫಲವ
ಅಂದೇ ಕೊಡುವಕಾಲ|
ಹಿಂದಿನಂತೆ ಮುಂದಿನ ಜನ್ಮಕೆ
ವರ್ಗಾವಣೆಯೆಂಬುದೇ ಇಲ್ಲ|
ಪುಣ್ಯವಿದ್ದರೇನೇ ನಾಳೆಯ
ಕೆಲಸ ನೀ ಪಡೆಯುವೆ
ಇಲ್ಲದಿರೆ ಇಂದೇ
ಕಂತೆ ಒಗೆದು ಸಂತೆಮುಗಿಸಿ
ಇಹದ ಪ್ರಯಾಣ ಮುಗಿಸುವೆ||

ಕೋಟಿ ಇರಲಿ ಆಸ್ತಿ
ನಿನ್ನದಲ್ಲ ನಾಳೆಗೆ|
ಭೀತಿ ಇರಲಿ ನಿನಗೆ
ನಾಳೆಯ ಪಾಳಿಗೆ|
ಭಯವಿರಲಿ ಧರ್ಮದ
ಮಾನದಂಡ ಚಾಟಿಗೆ|
ನೀತಿ ನಿಯಮವಿರಲಿ
ನಿನ್ನ ದುಡಿಮೆಗೆ||

ಎಷ್ಟು ಗಳಿಸಿ ಕೂಡಿಟ್ಟರೇನು
ಹೆತ್ತಮಕ್ಕಳು ಕಡೆಗಣಿಸೆ ಮುಪ್ಪಿನಲಿ
ನೊಂದು ಮನಮಿಡಿಯೆ
ಯಾರಿರುವರು ನಿನ್ನೊಟ್ಟಿಗೆ|
ಸತ್ತಾಗ ಬಂಧು-ಸಂಸಾರ
ಬರುವುದೇ ನಿನ್ನೊಂದಿಗೆ
ಧರ್ಮ, ಪುಣ್ಯಕರ್ಮ ಫಲಗಳೆರಡೇ
ಉಳಿವವು ನಿನ್ನ ಜೊತೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ
Next post ಹರಿ ನಿನ್ನ ನೋಡದೆ…

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…