Home / ಕವನ / ಕವಿತೆ / ಸು(ಅ)ಮಂಗಲೆ

ಸು(ಅ)ಮಂಗಲೆ

ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು
ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು
ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ
ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ
ಗರತಿ ನಿನಗೇತಕೆ ಈ ದುಸ್ಥಿತಿ?

ಮೂಡಣದಿ ಸೂರ್ಯ ಮೂಡುವ ಮುನ್ನ ನೀ ಎದ್ದೆ
ಮನೆ ಮಲಗುವ ತನಕ ಬದುಕ ಸಾಗಿಸುತ ನೀ ಬಂದೆ
ಬಣ್ಣದ ಬದುಕಿನ ಜೊತೆ ಬವಣೆಗಳ ಸಹಿಸುತ
ಸಂಸಾರ ರಥ ಸಾಗಿಸುವ ಕಡೆಗೀಲು ನೀನಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮುಹೂರ್ತಗಳಿಗೆಲ್ಲ ಸುಮಂಗಲೆಯರೇ ಭೂಷಣ
ಮಹಿಳೆಯರಿಲ್ಲದೇ ಕಾರಣಗಳೆಲ್ಲ ಭಣ ಭಣ
ಪತಿ ಬದುಕಿದ್ದ ಮಹಿಳೆಯರಿಗಷ್ಟೇ ಆಮಂತ್ರಣ
ವಿಧವೆಯರಿಗೆ ಹಾಕಿರುವರಲ್ಲ ನಾನಾ ನಿಯಂತ್ರಣ
ಗರತಿ ನಿನಗೇತಕೆ ಈ ದುಸ್ಥಿತಿ?

ಮಂಗಳ ಕಾರ್ಯಗಳಿಗೆ ಸುಮಂಗಲಿಯರೆ ಮೀಸಲಂತೆ
ಮಾಂಗಲ್ಯ ಇಲ್ಲದ ಮಹಿಳೆಯರೆಲ್ಲ ಅಮಂಗಳವಂತೆ
ಪತಿ ಇಲ್ಲದಿರೆ ಆರತಿಯೂ ನೀ ಬೆಳಗ ಬಾರದಂತೆ
ಈ ಕಟ್ಟುಪಾಡುಗಳೆಲ್ಲ ನಿನ್ನ ಕೊರಳಿಗೆ ಮೀಸಲಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮಲ್ಲಿಗೆ ಮುಡಿಗಿಲ್ಲದಿರೆ ಕೋಮಲೆ ನೀನಲ್ಲವೇನು?
ಕುಂಕುಮವು ಹಣೆಗಿಲ್ಲದಿರೆ ಕರುಣೆಯು ಬಾರದೇನು?
ಮಾಂಗಲ್ಯವಿಲ್ಲ ಎಂದರೆ ಮಮತೆಯು ಇಲ್ಲವೇನು?
ಕೈ ಬಳೆಗಳಿಲ್ಲದಿರೆ ಕೈ ಹಿಡಿದು ನಡೆಸಲಾರಳೇನು?
ಕಾಲುಂಗುರಗಳಿಲ್ಲದಿರೆ ನಮ್ಮ ಕಾಯ ಲಾರಳೇನು?
ಸರಿ ಹೋಗಲಾರದೇ ಗರತಿ ನಿನ್ನಯ ಸ್ಥಿತಿ?
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...