Home / ಲೇಖನ / ವಿಜ್ಞಾನ / ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ ಆರೋಗ್ಯದ ಮೇಲೆ ಅನೇಕ ವ್ಯತೀರೀಕ ಪರಿಣಾಮವುಂಟಾಗುತ್ತದೆ, ಎಂದು ಸಂಶೋಧಕರು ಹೇಳುತ್ತಾರೆ.

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಶೇ. ೫೦ ರಷ್ಟು ಜನಕ್ಕೆ ಈ ರಕ್ತಹೀನತೆ ಕಂಡು ಬಂದಿದೆ. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಜೀರ್ಣನಾಳ (ಕರುಳುಗಳು) ಈ ಕಬ್ಬಿಣದ ಅಂಶವನ್ನು ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಈ ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುವ ಅಂಶವೇ ನಾವು ಕಾಫಿ ಟೀಗಳನ್ನು ತಿಂಡಿಯ ನಂತರ ನಡುವೆ ಕುಡಿಯುತ್ತ ಹೋಗುವುದರಿಂದ ಆಗುತ್ತದೆ. ಈ ಟೀ ಕಾಫಿಯಲ್ಲಿರುವ ‘ಟ್ಯಾನಿನ್’ ಎಂಬ ಪದಾರ್ಥವು ಕಬ್ಬಿಣಾಂಶದ ಹೀರುವಿಕೆಯನ್ನು ತಡೆಗಟ್ಟುತ್ತದೆ. ದಕ್ಷಿಣ ಭಾರತೀಯರು ಸೇವಿಸುವ ಯಾವುದೇ ತಿಂಡಿಯಿಂದ ಕರಳು ೦.೪ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆಯನ್ನು ಪ್ರತಿಬಂಧಿಸಲು ಪ್ರತಿಯೊಬ್ಬರಿಗೆ ನಿತ್ಯ ಒಂದು ಮಿ.ಗ್ರಾಂ. ಕಬ್ಬಿಣಾಂಶದ ಅಗತ್ಯವಿದೆ. ಈ ಲೆಕ್ಕಾಚಾರದಂತೆ ನಮಗೆ ನಮ್ಮ ನಿತ್ಯದ ತಿಂಡಿಯಿಂದಲೇ ಸಾಕಷ್ಟು ಕಬ್ಬಿಣಾಂಶದ ದೊರಕುತ್ತದೆ. ಕಾಫಿ, ಟೀಯಲ್ಲಿ ಇರುವ ‘ಟ್ಯಾನಿನ್’ ಎಂಬ ಪದಾರ್ಥ ಕಬ್ಬಿಣಾಂಶದ ಹೀರುವಿಕೆಗೆ ತೊಡರುಗಾಲು ಹಾಕುತ್ತದೆ. ಹೀಗಾಗಿ ತಿಂಡಿ ತಿಂದ ತಕ್ಷಣ ಕಾಫಿ ಕುಡಿದರೆ ಕರಳು ಕೇವಲ ೦.೨ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಲು ಶಕ್ಯವಾಗುತ್ತದೆ. ಟೀ ಕುಡಿದರೆ ಕಬ್ಬಿಣಾಂಶದ ಹೀರುವಿಕೆಯ ಪ್ರಮಾಣ ೦.೧ ಮಿ.ಗ್ರಾಂ ಗೆ ಇಳಿಯುತ್ತದೆ. ಏಕೆಂದರೆ ಟೀಯಲ್ಲಿ ಕಾಫಿಯಲ್ಲಿರುವುದಕ್ಕಿಂತ ಹೆಚ್ಚು ಟ್ಯಾನಿನ್ ಇರುತ್ತದೆ.

ವೈಜ್ಞಾನಿಕ ವಾಸ್ತವತೆ ಹೀಗಿರುವಾಗ ತಿಂಡಿತಿಂದ ತಕ್ಷಣ, ನಡುನಡುವೆ ಕಾಫಿ, ಟೀ ಕುಡಿಯುವುದು ಒಳ್ಳೆಯದಲ್ಲ. ಹಾಗೆಂದ ಮಾತ್ರಕ್ಕೆ ತಿಂಡಿಯನ್ನೇನು ಬಿಡುವ ಅಗತ್ಯವಿಲ್ಲ. ಅದೇ ವಿಜ್ಞಾನಿಗಳು ಹೇಳುವ ಪ್ರಕಾರ ತಿಂಡಿ ತಿಂದ ಮೇಲೆ ಕಾಫಿ, ಟೀ ಕುಡಿಯದಿದ್ದರೆ ಸಮಾಧಾನವೆ ಇರುವುದಿಲ್ಲ ಎನ್ನುವವರಿಗೆ ಒಂದು ಮಾರ್ಗೋಪಾಯ ಹೇಳಿದ್ದಾರೆ. ಅಂದರೆ ತಿಂಡಿ ತಿಂದ ಅರ್ಧಗಂಟೆಯ ನಂತರ ಕಾಫಿ ಟೀ ಕುಡಿದರೆ ಕರುಳುಗಳ ಮೇಲೆ ‘ಟ್ಯಾನಿನ್’ ಪ್ರಭಾವ ಬೀರಲಾರದು; ಎಂದು ಹೇಳಿದ್ದಾರೆ. ಇದೇ ವಿಜ್ಞಾನಿಗಳು ಕಬ್ಬಿಣದ ಅಂಶವನ್ನು ವೃದ್ದಿಸುವ ‘ಸಿ’ ಜೀವಸತ್ವವುಳ್ಳ ಮೋಸುಂಬೆ, ನಿಂಬೆ, ಇತರ ಪೇಯಗಳನ್ನು ತಿಂಡಿ ತಿಂದ ನಂತರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವರ್ಧಿಸುತ್ತದೆ, ಎಂಬುವುದನ್ನು ಕಂಡು ಹಿಡಿದಿದ್ದಾರೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್