Home / ಕವನ / ಕವಿತೆ / ದರ್ಶನ

ದರ್ಶನ

ಅರೆ ನಿದ್ದ ಅರೆ ಅರಿವು,
ಮಂಪರು ದಾರಿ ಹಿಡಿದು
ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ;
ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ
ಜನ ತಿಕ್ಕಲು ಕುಣಿತ;
ಏನೇನೊ ನೋಡಿ ಏನೇನೊ ಹಾಡುವ
ಕನಸ ಕೈಗಾರಿಕಾಶಾಲೆ;
ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರೆವ
ಚಂಡಸೃಷ್ಟಿಯ ಲೀಲೆ.
ನೋಡುತ್ತ ಹೋದೆ.

‘ಹುಗಿದ ಹಳ ಬಾವಿಯೊಳ’ ತಾಳ ಬೇತಾಳ,
ಅರಿಯಬಾರದು ಹೊರಗೆ ಹೂವ ತಳದಾಳ.
ಆಕಾರವೇನೊ ಇದೆ ಆಕೃತಿಯೆ ನಷ್ಟ,
ಜರುಗುತಿದೆ ಏನೇನೊ ತಿಳಿಯುವದೆ ಕಷ್ಟ.

ಹರಿದ ಮೈ ಮುರಿದ ತಲೆ ಬುಡವಿರದ ಬೆಟ್ಟ,
ಹುತ್ತಗಳ ಕರಿಗಣ್ಣು ಕಬಳಿಸಿವೆ ಗುಟ್ಟ.
ಚುಕ್ಕಿಗಳ ಧಿಕ್ಕರಿಸಿ ಇರುಳೊಡೆದ ಕಾಡು,
ತೇಗಿ ಕೂಗುತ್ತಿತ್ತು ಬೆಚ್ಚಿಸುವ ಹಾಡು.
ಆಚೆ ಕಡೆ ಮುದಿ ಆಲ, ಕೆದರುತಲೆ ಕಂಬ,
ಈಚೆ ಈ ಭಾರಿ ಮನೆ, ಮೂಗಿರದ ಜಂಬ.
ಹಿಂದೆ ಎಂದೋ ಕಡಲ ಮೇಲೆಲ್ಲ ನಡೆದು
ಬಿರುಗಾಳಿ ಬಡಿದೋ
ದಾಳಿಯಲಿ ಸಿಡಿದೋ
ತಳ ಸೇರಿ ಎಲ್ಲೆಲ್ಲು ಬಿದ್ದಿರುವ ಹಡಗುಗಳ
ಅವಶೇಷ ಶೈಲಿಯಲಿ ತಂತಿ ಮನೆ ಕಂಬ.

ಹಣ ಚಿಗುರಿ ಹರಿದಿತ್ತು ನದಿಯಂತೆ ಧೂಪ,
ಮಾನವರ ಮೈಯಲ್ಲಿ ಮೃಗದ ಆಲಾಪ.
ಮೈಯಿರದ ಹಕ್ಕಿ ಹಸಿವಿನಲಿ ಸೊಕ್ಕಿ
ಹಿಗ್ಗಿ ಹಾಕುತ್ತಿತ್ತು ಕಿವಿತುಂಬ ಶಾಪ.

ತುಟಿ ಮೂಡಿ ಬಂಡೆಗಳು ಕುಡಿದಂತೆ ಕಳ್ಳು,
ಕೊಂಬೆಯಲಿ ಮುಖವರಳಿ ಹಾಕಿದವು ಸಿಳ್ಳು.
ಮೃಗಗಳಿಗೆ ಒಂದೊಂದು ಅಂಗಕ್ಕು ಒಡವೆ
ಸತ್ಯ ಸುಳ್ಳಿಗೆ ನಡೆದು ಪ್ರತಿಗಳಿಗೆ ಮದುವೆ.

ವಿಶ್ವರೂಪಕ್ಕೆ ಕಂಗಾಲಾದೆ ಪಾರ್ಥ.
ಚೀರಿ ಕಣ್ತೆರೆದೆ.
ಮತ್ತೆ ಪರಿಚಿತ ಗಾಳಿ ನೀರು ಮಣ್ಣಿಗೆ ಮರಳಿ
ಹಾಯೆನಿಸಿ ಉಸಿರಾಡಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...