Home / ಲೇಖನ / ವಿಜ್ಞಾನ / ಉಲ್ಕಾ ವೃಷ್ಟಿ!!

ಉಲ್ಕಾ ವೃಷ್ಟಿ!!

ನಿರ್ಧಿಷ್ಟ ಪಥದಲ್ಲಿ ತಿರುಗುವ ಗ್ರಹಗಳ ನಡುವಿನ ಹಾದಿಯಲ್ಲಿ ಅಡ್ಡ ಬರುವ ಸಣ್ಣ ಬಂಡೆಗಳಂತಹ ಮಿಟಿಯೋರಾಯ್ಡ್ಸ್ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಗಾಳಿಯ ಜತೆ ಸಂಘರ್ಷಕ್ಕೊಳಗಾಗುತ್ತವೆ. ತಿಕ್ಕಾಟದಿಂದ ಇವು ಉರಿಯತೊಡಗುತ್ತವೆ. ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಭೂಮಿ ಎಡೆಗೆ ಧಾವಿಸಿ ಮಿಂಚುವ ನಕ್ಷತ್ರಗಳಂತೆ ಕಂಡು ಕರಗಿ ಹೋಗುತ್ತವೆ. ಉರಿದು ಬೀಳುವ ಈ ಸ್ಥಿತಿಯಲ್ಲಿ ಇವಕ್ಕೆ ‘ಮೀಟಿಯೋರ್ಸ್’ ಉಲ್ಕೆಗಳೆಂದು ಕರೆಯಲಾಗುತ್ತದೆ.

ಇಂಥಹ ಅಸಂಖ್ಯಾತ ಉಲ್ಕೆಗಳ ಪಾತ ದಿನವೂ ಆಕಾಶದಲ್ಲಿ ನಡೆಯುತ್ತಲೇ ಇರುತ್ತದೆ. ಬೀಳುವ ನಕ್ಷತ್ರ ಉಲ್ಕೆಯು ಸಾವುನೋವಿನಂತಹ ವಿಪ್ಲವ ತರುತ್ತದೆನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಪ್ರತಿ ಮೂವತ್ಮೂರು ವರ್ಷಗಳ ಅಂತರದಲ್ಲಿ ಉಲ್ಕಾಪಾತ ಗಣನೀಯವಾಗಿ ಹೆಚ್ಚುತ್ತದೆಂದು ಖಗೋಳ ವಿಜ್ಞಾನಿಗಳ ಅಭಿಮತ. ಗಂಟೆಗೆ ೫೦ ರಿಂದ ೧೦೦ ರ ತನಕ ನವೆಂಬರ್ ತಿಂಗಳ ೧೮ ರ ಬೆಳಗಿನ ಜಾವ ೨-೧ಂ ಗಂಟೆಗೆ ಶಿಖರ ತಲುಪುವ ಈ ನಕ್ಷತ್ರ ಮಳೆ ಬರಿಕಣ್ಣಿಗೆ ವಿಜ್ಞಾನಿಗಳಿಗೆ ಕಂಡಿತು. ಲಿಯೋನಿಡ್ ಮಿಟಿಯೋರಾಯ್ಡ್ಸ್‌ ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಆಕಾಶಕಾಯಗಳು ‘ಟೆಂಪಲ್‌ಟಟ್ಸ್’ ಎನ್ನುವ ಧೂಮಕೇತು ಉಳಿಸಿ ಹೋದ ಧೂಳು ಕಸದಿಂದ ನಿರ್ಮಾಣವಾದವು. ಭೂಮಿಯ ಮೇಲ್ಮೈ ತಲುಪುವ ವೇಳೆಗಾಗಲೇ ಉಷ್ಣತೆ ಕಳೆದುಕೊಂಡು ಮತ್ತೆ ಬಂಡೆಗಳಂತಾದಾಗ ಉಲ್ಕೆಗಳನ್ನು ಮಿಟಿಯೋರೈಟ್ಸ್ ಎಂದು ಕರೆಯುತ್ತಾರೆ. ಲೋಹ ರಾಸಾಯನಿಕಗಳ ಕಲ್ಲು ಧೂಳುನಿಂದ ಕೂಡಿದ ಉಲ್ಕೆಗಳು ಜೀವ ಸೃಷ್ಟಿಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಒದಗಿಸಬಲ್ಲವು ಎನ್ನುತ್ತಾರೆ. ಖಗೋಳ ವಿಜ್ಞಾನಿಗಳು. ೩೬ ವರ್ಷಗಳಿಗೊಮ್ಮೆ ಪಾತಗೊಳ್ಳುವ ಈ ಉಲ್ಕೆಗಳ ದೃಷ್ಟಿಯಿಂದ ಇದುವರೆಗೆ ಅಪಾಯಗಳಾದ ವರದಿಗಳಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...