Home / ಲೇಖನ / ವಿಜ್ಞಾನ / ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ

ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ

ಅಂಗವಿಕಲರೆ ಆಗಿರಲಿ, ಮುದುಕರೆ ಆಗಿರಲಿ, ಹೆಳವರೇ ಆಗಿರಲಿ, ಅವರಿಗೆಲ್ಲ ಮಾರ್ಗದರ್ಶಕನಂತೆ ಗುರಿ ತೋರಿಸುವ ವಿನೂತವಾದ ಸಂಪರ್ಕ ಸಾಧನವನ್ನು ಇತ್ತೀಚಿಗೆ ಕಂಡು ಹಿಡಿಯಲಾಗಿದೆ. ಇದನ್ನು ಹಿಡಿದುಕೊಂಡು ಕಣ್ಣಿದ್ದವರಿಗಿಂತಲೂ ಸಲೀಸಾಗಿ ಎಂಥಹ ಜನಸಂದಣಿ ಮತ್ತು ವಾಹನಗಳ ಭರಾಟೆಗಳನ್ನು ಭೇಧಿಸಿ ಹೋಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಬ್ರಿಟನ್ನಿನಲ್ಲಿ ಸಂಶೋಧಿಸಲ್ಪಟ್ಟ ಈ ಸಾಧನವನ್ನು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ.

ಈ ಮೊದಲು ಅಮೇರಿಕ ಮತ್ತು ರಷಿಯಾ ರಾಷ್ಟ್ರಗಳು ಕಂಪ್ಯೂಟರ್ ಸಹಕಾರದ ಕೃತಕ ಉಪಗ್ರಹದ ಉಪಯೋಗಿಸುವ ಕ್ಷಿಪಣಿಗಳನ್ನು ಮಿಲಿಟರಿ ಕಾರ್ಯಾಚರಣೆಗೆ ತಯಾರಿಸುತ್ತಿದ್ದರು. ನಗರದ ಭೂಪಟದಲ್ಲಿ ನಾವು ತಲುಪಬೇಕಾದ ಪ್ರದೇಶವನ್ನು ಗುರುತಿಸಿದಾಗ ಕಂಪ್ಯೂಟರ್ ಅದನ್ನು ಗುರುತಿಸಿ ಆ ಪ್ರದೇಶಕ್ಕೆ ಹೋಗುವಾಗ ಇರುವ ಅಡೆತಡೆಗಳನ್ನು ಕೂಡ ತಿಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಬಾಹ್ಯಾಕಾಶದಲ್ಲಿ ಭೂಪ್ರದಕ್ಷಿಣೆ ಹಾಕುತ್ತಿರುವ ವಿಶ್ವಸೂಚಿ ವ್ಯವಸ್ಥೆಯನ್ನು (Global positioning System) ಹೊಂದಿದ ಕೃತಕ ಉಪಗ್ರಹಗಳ ನೆರವಿನಿಂದ ಅಂಧರು ತಮ್ಮ ದೇಹಕ್ಕೆ ಅಳವಡಿಸಿಕೊಳ್ಳುವ ಸಾಧನ ‘ಮೊಬಿಕ್’ (Mobic) ನಲ್ಲಿರುವ ಭೂಪಟದಲ್ಲಿ ಇರುವ ಮಾರ್ಗವನ್ನು ಕಂಪ್ಯೂಟರ್ ಮೂಲಕ ಅರಿತುಕೊಳ್ಳುತ್ತಾರೆ. ಈ ಕಂಪ್ಯೂಟರ್ ಅಂಧರ ದೇಹದ ಸಂವೇಧನೆಗಳಿಗೆ ಸಂಪರ್ಕ ಹೊಂದಿದವರಿಗೆ ದಾರಿ ತೋರಿಸುತ್ತದೆ.

ಇಂಥಹ ಮೊಬಿಕ್, ಸಾಧನಗಳು ಜಗತ್ತಿನಲ್ಲಿರುವ ಕೋಟ್ಯಾಂತರ ಅಂಧರ, ಅಂಗವಿಕಲರ, ವೃದ್ಧರ ಆಶಾಕಿರಣವಾದರೆ ಕೆಲವಷ್ಟು ಸಮಸ್ಯೆಗಳು ಪರಿಹಾರವಾಗಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...