Home / ಲೇಖನ / ವಿಜ್ಞಾನ / ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ

ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ

ಅಂಗವಿಕಲರೆ ಆಗಿರಲಿ, ಮುದುಕರೆ ಆಗಿರಲಿ, ಹೆಳವರೇ ಆಗಿರಲಿ, ಅವರಿಗೆಲ್ಲ ಮಾರ್ಗದರ್ಶಕನಂತೆ ಗುರಿ ತೋರಿಸುವ ವಿನೂತವಾದ ಸಂಪರ್ಕ ಸಾಧನವನ್ನು ಇತ್ತೀಚಿಗೆ ಕಂಡು ಹಿಡಿಯಲಾಗಿದೆ. ಇದನ್ನು ಹಿಡಿದುಕೊಂಡು ಕಣ್ಣಿದ್ದವರಿಗಿಂತಲೂ ಸಲೀಸಾಗಿ ಎಂಥಹ ಜನಸಂದಣಿ ಮತ್ತು ವಾಹನಗಳ ಭರಾಟೆಗಳನ್ನು ಭೇಧಿಸಿ ಹೋಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಬ್ರಿಟನ್ನಿನಲ್ಲಿ ಸಂಶೋಧಿಸಲ್ಪಟ್ಟ ಈ ಸಾಧನವನ್ನು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ.

ಈ ಮೊದಲು ಅಮೇರಿಕ ಮತ್ತು ರಷಿಯಾ ರಾಷ್ಟ್ರಗಳು ಕಂಪ್ಯೂಟರ್ ಸಹಕಾರದ ಕೃತಕ ಉಪಗ್ರಹದ ಉಪಯೋಗಿಸುವ ಕ್ಷಿಪಣಿಗಳನ್ನು ಮಿಲಿಟರಿ ಕಾರ್ಯಾಚರಣೆಗೆ ತಯಾರಿಸುತ್ತಿದ್ದರು. ನಗರದ ಭೂಪಟದಲ್ಲಿ ನಾವು ತಲುಪಬೇಕಾದ ಪ್ರದೇಶವನ್ನು ಗುರುತಿಸಿದಾಗ ಕಂಪ್ಯೂಟರ್ ಅದನ್ನು ಗುರುತಿಸಿ ಆ ಪ್ರದೇಶಕ್ಕೆ ಹೋಗುವಾಗ ಇರುವ ಅಡೆತಡೆಗಳನ್ನು ಕೂಡ ತಿಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಬಾಹ್ಯಾಕಾಶದಲ್ಲಿ ಭೂಪ್ರದಕ್ಷಿಣೆ ಹಾಕುತ್ತಿರುವ ವಿಶ್ವಸೂಚಿ ವ್ಯವಸ್ಥೆಯನ್ನು (Global positioning System) ಹೊಂದಿದ ಕೃತಕ ಉಪಗ್ರಹಗಳ ನೆರವಿನಿಂದ ಅಂಧರು ತಮ್ಮ ದೇಹಕ್ಕೆ ಅಳವಡಿಸಿಕೊಳ್ಳುವ ಸಾಧನ ‘ಮೊಬಿಕ್’ (Mobic) ನಲ್ಲಿರುವ ಭೂಪಟದಲ್ಲಿ ಇರುವ ಮಾರ್ಗವನ್ನು ಕಂಪ್ಯೂಟರ್ ಮೂಲಕ ಅರಿತುಕೊಳ್ಳುತ್ತಾರೆ. ಈ ಕಂಪ್ಯೂಟರ್ ಅಂಧರ ದೇಹದ ಸಂವೇಧನೆಗಳಿಗೆ ಸಂಪರ್ಕ ಹೊಂದಿದವರಿಗೆ ದಾರಿ ತೋರಿಸುತ್ತದೆ.

ಇಂಥಹ ಮೊಬಿಕ್, ಸಾಧನಗಳು ಜಗತ್ತಿನಲ್ಲಿರುವ ಕೋಟ್ಯಾಂತರ ಅಂಧರ, ಅಂಗವಿಕಲರ, ವೃದ್ಧರ ಆಶಾಕಿರಣವಾದರೆ ಕೆಲವಷ್ಟು ಸಮಸ್ಯೆಗಳು ಪರಿಹಾರವಾಗಬಹುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...