Home / ಕಥೆ / ಸಣ್ಣ ಕಥೆ / ಕೈಲಾಗದ ಅರಸರು

ಕೈಲಾಗದ ಅರಸರು

ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡಳಿತದಲ್ಲಿ ಬಿಗಿತಪ್ಪಿತು. ಮೂಕರಸರು ಆಳುತ್ತಿರುವಲ್ಲಿ ಅಧಿಕಾರಿಗಳಿಗೆ ಹಿಂದಿನಷ್ಟು ನಯಭಯಗಳಿರಲಿಲ್ಲ. ಆದರೂ ಚಿಕ್ಕದೇವರಾಜ ಒಡೆಯರ ನೆನಪು ಇನ್ನೂ ಬಲವಾಗಿತ್ತು. ಮೂಕರಸರು ಹತ್ತು ವರ್ಷಕಾಲ ಅನುಭವಿಸಿದರು.

ಮೂಕರಸರ ತರುವಾಯ ದೊಡ್ಡ ಕೃಷ್ಣರಾಜ ಒಡೆಯರೆಂಬ ಅವರ ಮಕ್ಕಳು ದೊರೆಗಳಾದರು. ಇವರಿಗೆ ಕೋಪವು ಬಲು ಬೇಗ ಬರುತ್ತಿತ್ತು; ಕೋಪ ಬಂದಾಗ ನ್ಯಾಯಾನ್ಯಾಯಗಳನ್ನು ನೋಡದೆ ಎದುರಾದವರನ್ನು ಅತಿಯಾಗಿ ಹಿಂಸೆಗೆ ಗುರಿಮಾಡಿ ಕ್ರೌರ್ಯವನ್ನು ತೋರುತ್ತಿದ್ದರು; ಆದರೆ ಪರಕ್ಷಣವೇ ಅವರನ್ನು ಕರೆಸಿ ಬಹುಮಾನವನ್ನು ಮಾಡುತ್ತಿದ್ದರು. ಸ್ಥಿರಬುದ್ದಿಯು ಈ ದೊರೆಗಿರಲಿಲ್ಲ; ಹೆಮ್ಮೆಯೂ ಲೋಲುಪ್ತಿಯ ಇದ್ದವು. ಹತ್ತೊಂಭತ್ತು ವರ್ಷಕಾಲ ರಾಜರಾಗಿದ್ದರೂ ಆಡಳಿತದ ವಿಚಾರಗಳನ್ನು ತಿಳಿಯಲು ಪ್ರಯತ್ನಿಸದ ಅವುಗಳೆಲ್ಲವನ್ನೂ ಮಂತ್ರಿಗಳಿಗೆ ಬಿಟ್ಟು ಕೊಟ್ಟು ತಾವು ಸುಖಗಳಲ್ಲಿ ಮಗ್ನರಾಗಿ ತಮ್ಮ ಸಮಾನರೇ ಇಲ್ಲವೆಂದು ತಿಳಿದಿದ್ದರು. ಅಧಿಕಾರಿಗಳೂ ರಾಜರಿಗೆ ಬೇಕಾದ ಸುಖಗಳನ್ನೊದಗಿಸುತ್ತ ಅವರಿಗೆ ರಾಜಕಾರ್ಯಗಳ ತೊಂದರೆಕೊಡದೆ ತಾವೇ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ರಾಜರು ಕೇಳಿದಷ್ಟು ಹಣ ಬೊಕ್ಕಸದಿಂದ ಬರುತ್ತಿತ್ತು. ಆದ್ದರಿಂದ ಈ ರಾಜರು ಸಂಗೀತ, ಸಾಹಿತ್ಯ, ನಾಚು, ರಂಗು ಮುಂತಾದುವುಗಳಲ್ಲಿಯೇ ಆಸಕ್ತರಾಗಿದ್ದರು. ಮೃಗಶಾಲೆಗೇ ವರ್ಷಕ್ಕೆ ಒಂದು ಲಕ್ಷ ವರಹಗಳನ್ನು ಇವರು ವೆಚ್ಚ ಮಾಡುತ್ತಿದ್ದರು. ಆ ಮೃಗ ಶಾಲೆಯಲ್ಲಿ ಹುಲಿ, ಕರಡಿ, ಸಿವಂಗಿ, ಕಾಡೆಮ್ಮೆ, ಹುಲ್ಲೆ ಕರು, ಕಡವೆ, ಸಾರಂಗ, ಕಪಿ, ಗಿಣಿ, ಮಲೆಸೇನ, ಕಾಳಿಂಗ, ನವಿಲು, ಪುನುಗಿನಬೆಕ್ಕು, ಪಾರಿವಾಳ, ಗೌಜಹಕ್ಕಿ, ಲಾವಕನಹಕ್ಕಿ, ಗಿಡಗ, ಭೈರಿ ಮುಂತಾದ ನಾನಾ ಬಗೆಯ ಮೃಗಗಳಿದ್ದವು. ಈ ರಾಜರು ಈ ಮೃಗಗಳ ಸಹವಾಸದಲ್ಲಿಯೂ ತಮ್ಮ ಸುಖವಿನೋದಗಳಲ್ಲಿಯೈ ಕಾಲ ಕಳೆಯುತ್ತ ಬೊಕ್ಕಸದ ಹಣವನ್ನು ವೆಚ್ಚ ಮಾಡಿದರು.

ಈ ದೊಡ್ಡ ಕೃಷ್ಣರಾಜ ಒಡೆಯರವರಿಗೆ ಮಕ್ಕಳಿರಲಿಲ್ಲ. ಅವರ ಹಿರಿಯ ಕುಟುಂಬ ದೇವಾಜಮ್ಮಣ್ಣಿಯವರು ರಾಜ್ಯದ ಸೂತ್ರಗಳನ್ನು ಕೈಹಿಡಿದು ದತ್ತುಮಾಡಿಕೊಳ್ಳುವ ಯೋಚನೆಮಾಡಿದರು. ಮುಂದೆ ಆಳಿದ ಚಾಮರಾಜ ಒಡೆಯರೆಂಬವರೂ ಚಿಕ್ಕ ಕೃಷ್ಣರಾಜ ರೆಂಬವರೂ ಗೊಂಬೆಗಳಂತಾದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...