Home / ಕವನ / ಅನುವಾದ / ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ
ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ,
ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ
ಅವರಿಗೆ ತಿಳಿಯುವುದಿಲ್ಲ. ಹಾಗೆ
ನಾಲ್ಕು ಬಾರಿ ಭಿಕ್ಷೆ ಕೊಟ್ಟ ಮನೆಯ ಮುಂದೆ ಐದನೆಯ ಬಾರಿ ಭಿಕ್ಷುಕ ನಿಂತು ಕೂಗುತ್ತಾನೆ
ಈಗ ಅವನಿಗೆ ನಿಜವಾಗಿ ಹೊಟ್ಟೆಹಸಿದಿದೆ. ಹಾಗೆ
ಡಾಕ್ಟರಿಗೆ ಕಾಯುತ್ತಾ ರೋಗಿಯೊಬ್ಬ ಬಿದ್ದಿದ್ದಾನೆ. ಗಾಯದಿಂದ ರಕ್ತ ಹರಿಯುತ್ತಲೇ ಇದೆ.
ಹಾಗೆ
ನಾವೀಗ ಮುಂದೆ ಬಂದು ಕೆಡುಕು ಸಂಭವಿಸಿದ್ದನ್ನು ಹೇಳುತ್ತಿದ್ದೇವೆ.
ಕಟುಕರಂತೆ ನಮ್ಮ ಗೆಳೆಯರನ್ನು ಕೊಚ್ಚಿ ಹಾಕಿದರೆಂಬ ಸುದ್ದಿ ಮೊದಲಿಗೆ ತಿಳಿದಾಗ
ಭಯದ ಚೇತ್ಕಾರವಿತ್ತು. ನಂತರ ನೂರು ಜನರನ್ನು ಕೊಚ್ಚಿ ಹಾಕಿದರು. ಸಾವಿರ ಜನರನ್ನು
ಕೊಚ್ಚಿದಾಗ ಕಟುಕತನಕ್ಕೆ ಕೊನೆಯಿರಲಿಲ್ಲ. ಮೌನದ ಕಂಬಳಿ ಎಲ್ಲರನ್ನು ಕವಿದಿತ್ತು.
ಕೆಡುಕು ಮಳೆಯಂತೆ ಧೋ ಎಂದು ಸುರಿಯುವಾಗ ಯಾರೂ ಗೊಣಗುವುದಿಲ್ಲ.
ತಪ್ಪಿನ ಮೇಲೆ ತಪ್ಪು, ಕೆಡುಕಿನ ಮೇಲೆ ಕೆಡುಕು ರಾಶಿ ಬೀಳುತ್ತ ಹೋದಾಗ ಅವು
ಯಾವುವೂ ಕಣ್ಣಿಗೇ ಕಾಣದಂತೆ ಅದೃಶ್ಯವಾಗುತ್ತವೆ. ನೋವು ಸಹಿಸಲಾರದಷ್ಟಾದಾಗ
ಅಳು, ಚೇರಾಟಗಳು ಕೂಡ ಕೇಳುವುದಿಲ್ಲ. ಅಳು ಕೂಡ ಬೇಸಗೆ ಮಳೆಯಂತೆ
ಸುರಿಯುತ್ತದೆ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...