Home / ಕವನ / ಕವಿತೆ / ಇರುಳು

ಇರುಳು

ಈ ಅಪರಿಮಿತ ಪರಿಧಿ
ಇದು ಕತ್ತಲೆಯ ಸರದಿ
ಕೋವೆ ಕಂಭಗಳಿಂದೆದ್ದು ಸಂಜೆಯ ಮೋಡಗಳಿಂದ ಬಿದ್ದು
ಮೆಲ್ಲಗೆ ಆಕಳಿಸಿ ಹೊರಟಿದೆ ಸವಾರಿ ಕಂಬಳಿ ಹೊದ್ದು
ಡಾಮರು ರೋಡುಗಳ ಮೇಲೆ ಶೂನ್ಯ ಬಿಚ್ಚಿ ಹಾಸಿ
ಮಲಗುವ ತಯಾರಿ

ಅಥವಾ ಅದಕ್ಕೆ ಮೊದಲು
ಓಣಿ ಓಣಿಗಳಲ್ಲಿ ಸಂದಿಗೊಂದಿಗಳಲ್ಲಿ ಹೊಕ್ಕು
ಕಾಂಪೌಂಡ್ ಗೇಟುಗಳ ಜಿಗಿದು ಬಳ್ಳಿಗಳ ಬಳಸಿ
ಬೊಗಳಿಸಿಕೊಂಡು ಸ್ವಚ್ಛಂದ ಖವ್ವಾಲಿ ಹಾಡುವ
ಬೀದಿ ಭಿಕಾರಿ

ನೃತ್ಯ ಮಂದಿರಗಳಲ್ಲಿ ಕಾಕ್‌ಟೇಲ್ ಹೀರಿ ನಶಾ ಏರಿ
ಸ್ಕರ್ಟುಗಳ ನಿರಿಗಳಲಿ ಸೆರೆಯಾಗಿ ತೂಕಡಿಸಿ
ತಲೆದೀಪ ಕೆಡಿಸಿ ಅರೆತೆರೆದ ಪರೆ ತೆರೆದು
ರಹಸ್ಯ ದೋಚುವ ಮುಖವಾಡಧಾರಿ

ಬೀದಿಯಲ್ಲಿ ಬಿದ್ದವರ ಕೆಸರಿನ ಜನರ
ಹೊಕ್ಕಳಬಳ್ಳಿ ಹಿಡಿದು ಜಗ್ಗುವ ಕ್ರೂರ ಅಸ್ತಿತ್ವಕ್ಕೆ
ಬಲವಂತ ನಿದ್ದೆಗುಳಿಗೆ ತಿನ್ನಿಸಿ ಮಲಗಿಸುವ ಹೆಣ್ಣು
ಈ ಮಹಾನಗರದ ಬೆತ್ತಲೆಕಣ್ಣು
ಸಾಗರದಂತೆ ಅಲೆಯೆದ್ದು
ಎಲ್ಲಾ ನುಂಗಿ ಹಿರಿನಾಗರದಂತೆ ಬಿದ್ದ ಜಾಡ್ಯ
ಧ್ಯಾನಕ್ಕೆ ಸಂದಿದೆ ಮೌನಿ.
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...