Home / ಕವನ / ಕವಿತೆ / ಕತ್ತಲ ಗೂಡಿನ ದೀಪ

ಕತ್ತಲ ಗೂಡಿನ ದೀಪ

ಮೈತುಂಬಾ ಮಸಿ ಮೆತ್ತಿದರೂ
ತೊಳೆದು ಬರಬಲ್ಲರು ಅವರು
ಕೇಳಲುಬಾರದು
ಮಸಿಯ ಮೂಲಕ್ಕೆ ಕಾರಣ
ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು.

ಬಿಳಿಮೈಯ ಮಾತಿಗೆ ಬಸವನ ಗೋಣು
ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು.
ಕರಿಮೈಯ ಮಾರನ ಮನೆಯ
ದೀಪದ ಬೆಳಕಿಗೆ ಯಾವ ಬಣ್ಣ

ಕೇಳಲೇ ಇಲ್ಲ, ಬಲ್ಲವರು
ತಗ್ಗಿದ ತಲೆಗಳ ಎತ್ತಲಾಗಲೇ ಇಲ್ಲ
ಜಾತಿ ಎಂಬ ಬಾವಿಯ ಆರದ ನೀರು
ಸಿಹಿಯಲ್ಲ, ಉಪ್ಪುಪ್ಪು.

ಆದೇ ಆಗ ಮೂಡಿದ್ದ
ಪೂರ್ವದಲ್ಲೊಬ್ಬ ಪ್ರಖರ ಸೂರ್ಯ
ದೀನ ದಲಿತರ ಹಾಡುಗಳು
ಮುಖಪುಟದ ಮೇಲೆ ಮೂಡಲಾರಂಭಿಸಿದವು
ಮಂತ್ರಗಳ ಮೇಲೋಚ್ಛಾಟನೆ ಮಾಡಿ.

ಆತನ ಕಣ್ಣುಗಳಲ್ಲಿ ತೀಕ್ಷ್ಣ ಹೊಳಪು
ಭಂಡಾರ ಮೆತ್ತಿದ ಹಣೆಗಳು
ತಲೆತಗ್ಗಿಸಿದವು.

ಬೆಚ್ಚಿಬಿದ್ದರು ಧರ್ಮಸೈತಾನರು
ಮೈಗಂಟಿದ ದಾರ ಬಿಗಿಯಾಗಿ
ಉಸಿರುಗಟ್ಟಿದಂತೆ

ಜಲಪಾತದ ವಾಙ್ಮಯಕ್ಕೆ
ಬೆದರಿದ ಪುರಾಣಗಳು
ಪಟಪಟನೇ ಉದುರಿಬಿದ್ದವು.

ಅದೊಂದು ಧಾತುವಿನಿಂದ
ಹೊಮ್ಮಿದ, ಪಲ್ಲವಿಸಿದ
ರಕ್ತದಲ್ಲೇ ಬೆಂಕಿಯುಗುಳುವ
ಲಾವಾ ತುಂಬಿಕೊಂಡ
ಬೆಂಕಿಯುಂಡೆಗಳು
ವರ್ತಮಾನದ ಬಾಗಿಲ ಕಾವಲುಗಾರರು

ಕತ್ತಲೆಗೂಡಿನ ದೀಪಗಳು
ಜಗ್ಗನೇ ಉರಿಯುತ್ತಿವೆ.
ಬಾಯಿಲ್ಲದವನ ಕೂಗಿಗೆ
ಕಂಚಿನ ಕಂಠ ಎರವಲು ಸಿಕ್ಕಿದೆ.
ದಲಿತರ ಕೇರಿಗಳು
ದಿಗ್ವಿಜಯದ ಕೇಕೆಗಳು

ಪ್ರತಿ ಉದಯವೂ
ಮಾರ್ದವದ ಸೌಂದರ್ಯ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...