Home / ಕವನ / ಕವಿತೆ / ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು
ಖಾಲಿ ತಲೆಗಳು ಬೇಕು
ಬಿಕರಿಗಿರುವ
ತಲೆಗಳಲ್ಲದ ತಲೆಗಳು ಬೇಕು.

ಸರಕಾಗಿ
ಬಳಕೆಗೆ ಸಿದ್ಧವಿರುವ
ಬೇಕಾದುದ, ಬೇಗ, ಸುಲಭವಾಗಿ
ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು.

ತನ್ನ ಕಣ್ಣುಗಳಲಿ
ನಮ್ಮ ವಿನಃ
ತನ್ನನ್ನಾಗಲಿ ಯಾರನ್ನಾಗಲಿ
ಛಾಪಿಸಿಕೊಳ್ಳದಿರುವ ಸೇವಾವ್ರತಿ ತಲೆಗಳು ಬೇಕು.

ವಾಸನೆ ಗ್ರಹಿಸಿ
ಆಗುವುದು ಆಗದಿರುವುದು ವಿಂಗಡಿಸಿ
ಮೇಲ್ಮೆಗೈಯ್ಯುವ
ಅಪೂರ್ವ ಶಕ್ತಿಯುಕ್ತಿಯ ಚತುರ ನಾಯಿ ತಲೆಗಳು
ಬೇಕು.

ನಮ್ಮನ್ನು ಸಹಿಸದ ದನಿ
ಹತ್ತಿರದ ದೂರದ ಯಾವುದೇ ಆಗಲಿ
ಹೇಗೆ ಮೊರೆದರೂ ಮಣಿಯದ
ನಮ್ಮದಕ್ಕೆ ತಕ್ಷಣವೆ ಸ್ಪಂದಿಸುವ ಯಂತ್ರಮಾನವ
ತಲೆಗಳು ಬೇಕು.

ಸುತ್ತಲ ಆಗು ಹೋಗುಗಳ ಗಮನಿಸಿ
ವಿಶ್ಲೇಷಿಸಿ
ಮಾರ್ಗದರ್ಶನ ನೀಡುವ
ಸ್ವಯಂ ಕ್ರಿಯಾಶೀಲವಾಗಿ ರಕ್ಷಿಸುವ ಮುತ್ಸದ್ದಿ,
ಮಾರಿಗೆ ತಲೆಗಳು ಬೇಕು.

ಬೆಟ್ಟದಷ್ಟು ಆಮಿಷ ಒಡ್ಡಲಿ
ಹಿಡಿದು ಹಿಂಡಿ ಹಿಪ್ಪೆ ಮಾಡಲಿ
ಸಡಿಲದ ನಿಷ್ಠೆಯ
ನಾವೆಸೆದುದನೆ ಮಹಾ ಪ್ರಸಾದವೆನ್ನುವ ಚರಣದಾಸ
ತಲೆಗಳು ಬೇಕು.

ನಮ್ಮ ನಡೆ, ನುಡಿ ಏನೇ ಇರಲಿ
ತಮ್ಮದನು ಉನ್ನತವಾಗಿರಿಸಿ
ಮಾನಾಪಮಾನ, ನ್ಯಾಯಾನ್ಯಾಯ ಗೌಣಮಾಡಿ
ತಮ್ಮ ಅಸ್ಮಿತೆಯ ನಮ್ಮದರಲಿ ಗುರತಿಸಿಕೊಳ್ಳುವ
ಗೂಂಡಾ ತಲೆಗಳು ಬೇಕು.

ಹುಬ್ಬೇರಿಸದಿರಿ
ಮಾನವತಾವಾದ ಪಠ್ಯಪುಸ್ತಕದ ಸರಕು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...