Home / ಕವನ / ಕವಿತೆ / ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು
ಖಾಲಿ ತಲೆಗಳು ಬೇಕು
ಬಿಕರಿಗಿರುವ
ತಲೆಗಳಲ್ಲದ ತಲೆಗಳು ಬೇಕು.

ಸರಕಾಗಿ
ಬಳಕೆಗೆ ಸಿದ್ಧವಿರುವ
ಬೇಕಾದುದ, ಬೇಗ, ಸುಲಭವಾಗಿ
ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು.

ತನ್ನ ಕಣ್ಣುಗಳಲಿ
ನಮ್ಮ ವಿನಃ
ತನ್ನನ್ನಾಗಲಿ ಯಾರನ್ನಾಗಲಿ
ಛಾಪಿಸಿಕೊಳ್ಳದಿರುವ ಸೇವಾವ್ರತಿ ತಲೆಗಳು ಬೇಕು.

ವಾಸನೆ ಗ್ರಹಿಸಿ
ಆಗುವುದು ಆಗದಿರುವುದು ವಿಂಗಡಿಸಿ
ಮೇಲ್ಮೆಗೈಯ್ಯುವ
ಅಪೂರ್ವ ಶಕ್ತಿಯುಕ್ತಿಯ ಚತುರ ನಾಯಿ ತಲೆಗಳು
ಬೇಕು.

ನಮ್ಮನ್ನು ಸಹಿಸದ ದನಿ
ಹತ್ತಿರದ ದೂರದ ಯಾವುದೇ ಆಗಲಿ
ಹೇಗೆ ಮೊರೆದರೂ ಮಣಿಯದ
ನಮ್ಮದಕ್ಕೆ ತಕ್ಷಣವೆ ಸ್ಪಂದಿಸುವ ಯಂತ್ರಮಾನವ
ತಲೆಗಳು ಬೇಕು.

ಸುತ್ತಲ ಆಗು ಹೋಗುಗಳ ಗಮನಿಸಿ
ವಿಶ್ಲೇಷಿಸಿ
ಮಾರ್ಗದರ್ಶನ ನೀಡುವ
ಸ್ವಯಂ ಕ್ರಿಯಾಶೀಲವಾಗಿ ರಕ್ಷಿಸುವ ಮುತ್ಸದ್ದಿ,
ಮಾರಿಗೆ ತಲೆಗಳು ಬೇಕು.

ಬೆಟ್ಟದಷ್ಟು ಆಮಿಷ ಒಡ್ಡಲಿ
ಹಿಡಿದು ಹಿಂಡಿ ಹಿಪ್ಪೆ ಮಾಡಲಿ
ಸಡಿಲದ ನಿಷ್ಠೆಯ
ನಾವೆಸೆದುದನೆ ಮಹಾ ಪ್ರಸಾದವೆನ್ನುವ ಚರಣದಾಸ
ತಲೆಗಳು ಬೇಕು.

ನಮ್ಮ ನಡೆ, ನುಡಿ ಏನೇ ಇರಲಿ
ತಮ್ಮದನು ಉನ್ನತವಾಗಿರಿಸಿ
ಮಾನಾಪಮಾನ, ನ್ಯಾಯಾನ್ಯಾಯ ಗೌಣಮಾಡಿ
ತಮ್ಮ ಅಸ್ಮಿತೆಯ ನಮ್ಮದರಲಿ ಗುರತಿಸಿಕೊಳ್ಳುವ
ಗೂಂಡಾ ತಲೆಗಳು ಬೇಕು.

ಹುಬ್ಬೇರಿಸದಿರಿ
ಮಾನವತಾವಾದ ಪಠ್ಯಪುಸ್ತಕದ ಸರಕು
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...