Home / ಕವನ / ಕವಿತೆ / ಕಂದ ಕೃಷ್ಣ

ಕಂದ ಕೃಷ್ಣ

ತೇಲಿದ ಮೋಡಗಳ ನೀಲಿ
ಶಬ್ಧಗಳ ಗುಂಗುಗಳ ಹಿಡಿದು
ಹರಡಿ ಹಾಸಿದ ನೀಲಿ ಕಡಲ ಬಣ್ಣ
ಕಂಪು ಸೂಸಿ ಎಲ್ಲಾ ಹೂಗಳ ತುಂಟ
ಕಣ್ಣುಗಳ ನೋಟದಲಿ ಅರಳಿ ತೇಲಿ
ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ
ತುಂಬು ಕಂಪನಿಲಿ ಇಂಪಿನಲಿ ಲಾಲಿರಾಗ
ಬೆನ್ನು ಬಿಡದೆ ಬೆಂಬತ್ತಿ ಬಂದಾಗ
ಎದೆಯ ತುಂಬೆಲ್ಲಾ ಅರಬೀ ಸಮುದ್ರ ಉಕ್ಕಿ ಉಕ್ಕಿ
ನಾನೀಗ ಯಶೋಧೆ.
“ವಜ್ರ ವೈಢೂರ್ಯ ಬೇಡ ನನಗೆ
ತುಪ್ಪದ ಅಪ್ಪ ಸೇರದೆ ನಗೆ
ಎತ್ತಿ ದಾರತಿ ತುಂಬಾ ಬೆಳಕು ಕಳವಳದ
ಸಂಜೆ ರಾತ್ರಿಗಳು ನಿಟ್ಟಿಸಿದ ಕಣ್ಣುಗಳ ಸಾವಿರಾರು
ಹೈರಾಣ ಮಾಡಿದೆ ಕುದಿದ ಸೆಖೆ
ಬಯಲ ತಪ್ಪಲಲ್ಲಿ ನನ್ನ ಕೊಳಲಿನ ಕರೆಗೆ
ನರ್ತಿಸಲಿ ನವಿಲು ಅಲ್ಲಿ ಆಡಲಿ, ಕುಚೇಲ
ಚನ್ನಿದಾಂಡು, ಮತ್ತೆ ಗಿಲಿ ಗಿಲಿ ಗೆಜ್ಜೆಯನಾದ
ಗೋಪಿಕೆಯರು ಜೊತೆಗೂಡಲು ಋಷಿಯಲಿ,
ಅಮ್ಮ ಎತ್ತಿಕೊಳ್ಳು ಈಗಲೇ ಈಗಿಂದೀಗಲೇ.”
ಅವನೀಗ ಯಶೋಧೆ ಕಂದ.

ಎಲ್ಲ ರಾಗಗಳು ನದಿಯಾಗಿ ಹರಿದು
ಬಯಲು ತುಂಬ ಹಸಿರು ತಂಬೆಲರು
ಬೆಳ್ಳಗೆ ಬೆಳ್ಳಿಗೆರೆಯಲಿ. ತೇಲಿದ ಬೆಳ್ಳಕ್ಕಿ ಹಿಂಡು
ನೀಲ ಬಾನ ತುಂಬ ತುಂಟರು ಹಾಸಿದ ಬಣ್ಣದ
ಗಾಳಿ ಪಟಗಳು ಅರಳಿದ ಕಣ್ಣುಗಳಲಿ
ಜಗದ ವಿಸ್ಮಯ ಬಯಲು ಸೀಮೆಯ
ಹೊಲಗಳ ಬದುಕಿನ ತುಂಬ ಇವನ
ರಾಗ ಪಲ್ಲಕ್ಕಿ ಹಕ್ಕಿ ಸಾಲು ತೇಲಿ ಜಂಗಮದಲಿ
ಮುರಳಿ ಲೋಲನ ಕಂಪನಗಳ ರಾಗಗಳು
ದೇವಕಿ ನಂದನೀಗ ಯಶೋಧೆ ಕಂದ.

ಫರ್ಮಾನುಗಳ ಹೊರಡಿಸಿವೆ ಅಷ್ಟ ಮಠಗಳು
ಅಷ್ಟದಿಕ್ಕುಗಳಿಗೆ ಎಲ್ಲ ಇಹ ಪರದ ಗೌಜು
ಗದ್ದಲಗಳ ಮಧ್ಯೆ ಬಯಲಲ್ಲಿ ಅವನೀಗ
ಸುಮ್ಮನೆ ಮಣ್ಣಿನಲಿ ಆಡಿ ಮೈಕೈಯಲ್ಲಾ
ಧೂಳು ಕೆಸರು ಬೆತ್ತಲೆ ಬಯಲಲ್ಲಿ
ನಿಲ್ಲಿಸಿ ತಣ್ಣನೆಯ ಗಾಳಿ ಹೊತ್ತ ಪಂಚನದಿಗಳ
ನೀರು ಹೊಯ್ಯುತ್ತಿರುವ ಯಶೋಧೆ.
ಅವನೀಗ ಮರೆತು ಬಿಟ್ಟಿದ್ದಾನೆ. ಉಕ್ಕುವ ಸಮುದ್ರ
ಬಣ್ಣದ ಬೋರಂಗಿ ಹಿಡಿದು ಹಾರಿಸುತ್ತಿದ್ದಾನೆ. ಸುಮ್ಮನೆ. ಝಮ್ಮನೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...