Home / ಲೇಖನ / ವಿಜ್ಞಾನ / ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಕರ್ಕ ಮತ್ತು ಮಕರ ಅಕ್ಷಾಂಶಗಳ ನಡುವಿನ ವಲಯದಲ್ಲಿ ಹವಾಮಾನ ಅಧ್ಯಯನ ಹಾಗೂ ಜಗತ್ತಿನಾದ್ಯಂತವಾಗುವ ಹವಾಮಾನ ವೈಪರಿತ್ಯಗಳನ್ನು ಅಳೆಯಲು ಮೊದಲ ಬಾರಿಗೆ ಭಾರತ ಮತ್ತು ಫ್ರಾನ್ಸ್ ಜತೆಗೂಡಿ ಹವಾಮಾನ ಮಾಪನ ಉಪಗ್ರಹವನ್ನು ಆಕಾಶಕ್ಕೆ ಬಿಡಲು ಮುಂದೆ ಬಂದಿದೆ. ಭೂಮಿಯಿಂದ ೮೬೭ ಕಿ.ಮೀ. ಎತ್ತರದಲ್ಲಿ ಭೂಮಧ್ಯ ರೇಖೆಯ ಗುಂಟ ಸುತ್ತುಹಾಕಲಿರುವ ಈ ಉಪಗ್ರಹವು ಒಂದು ದಿನದಲ್ಲಿ ತನಗೆ ಸೂಚಿಸಲಾದ ಪ್ರದೇಶವನ್ನು ಎರಡರಿಂದ ಆರು ಭಾರಿಯವರೆಗೂ ಸೂಕ್ಷ್ಮವಾಗಿ ಗಮನಿಸಲಿದೆ.

ಈ ಉಪಗ್ರಹಕ್ಕೆ ‘ಮೇಘಾ ಟ್ರೋಫಿಕಸ್’ ಎಂದು ಸೂಕ್ತವಾಗಿ ಹೆಸರಿಡಲಾಗಿದೆ. ಉಷ್ಣವಲಯದಲ್ಲಿಯ ವಾತಾವರಣದಲ್ಲಿ ಸಂಶೋಧನೆಗಾಗಿ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾದ ಈ ಕೃತಕ ಉಪಗ್ರಹವು ವಿಶ್ವದಲ್ಲಿಯೇ ಮೊದಲನೇಯದ್ದಾಗಿದೆ. ಭಾರತದ ಐ. ಎಸ್. ಎಲ್.ವಿ. ಯ ಮುಖಾಂತರ ೨೦೦೫ ರೊಳಗಾಗಿ ಈ ಉಪಗ್ರಹಗಳನ್ನು ಹಾರಿಬಿಡಲಾಗುವುದು. ಇದರ ಅಂದಾಜು ವೆಚ್ಚ ೩೦ ರಿಂದ ೪೦ ಕೋಟಿ, ಈ ಯೋಜನೆಯಲ್ಲಿ ಹವಾಮಾನ ಜಾಗತಿಯ ಮಟ್ಟದ ಅಧ್ಯಯನ ನಡೆಸುವಂಥಹ ಅಂತರರಾಷ್ಟ್ರೀಯ ವಿಜ್ಞಾನಿಗಳು ಆಸಕ್ತಿ ಮತ್ತು ಕುತೂಹಲವನ್ನು ವ್ಯಕ್ತಿಪಡಿಸಿದ್ದಾರೆ. ಇಲ್ಲಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ ೫೦೦ ಕೆ.ಜಿ. ತೂಕದ ಈ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್ ಸಂಸ್ಥೆ ಪರಸ್ಪರ ‌ಸಹಕರಿಸಿ ರಚಿಸಲಿದೆ. ಇದರ ಕಾರ್ಯಯೋಜನೆಯಲ್ಲಿ Indian Institute of Science ಮತ್ತು I.I.T.ಗಳು ದೇಶದಾದ್ಯಂತ ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.

ಪಶ್ಚಿಮಘಟ್ಟದ ಹವಾಮಾನದ ಏರುಪೇರುಗಳ ವೈಪರಿತ್ಯದಲ್ಲಿ ಮತ್ತು ಉತ್ತರ ಗೋಲಾರ್ಧದಲ್ಲಿ ಆಗುವ ಬದಲಾವಣೆಗಳಲ್ಲಿ ಉಷ್ಣವಲಯದ ಪಾತ್ರವನ್ನು ಗುರುತಿಸಬೇಕೆಂಬ ಹೊಸ ಚಿಂತನೆಯ ಫಲವಾಗಿ ಈ ಉಪಗ್ರಹವು ರಚಿತವಾಗಿದೆ. ಉಷ್ಣವಲಯದ ಹವೆಯಲ್ಲಾಗುವ ಬದಲಾವಣೆಗಳಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಚಂಡಮಾರುತದ ಬೀಸುವಿಕೆ ಅಥವಾ ಕ್ಷಾಮ ಉಂಟಾಗುವಿಕೆಗಳು ಮತ್ತು ಇತ್ಯಾದಿ ಹವಾಮಾನದ ಮಹತ್ವಪೂರ್ಣ ಮಾಹಿತಿಗಳು ಇದರಿಂದ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಷ್ಣವಲಯ ಕುರಿತು ಹೆಚ್ಚಿನ ಆಸಕ್ತಿ ಈಗ ಯುರೋಪ್ ಮತ್ತು ಅಮೇರಿಕದಲ್ಲಿ ಬೆಳೆಯುತ್ತಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...