Home / ಲೇಖನ / ವಿಜ್ಞಾನ / ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ

ಕರ್ಕ ಮತ್ತು ಮಕರ ಅಕ್ಷಾಂಶಗಳ ನಡುವಿನ ವಲಯದಲ್ಲಿ ಹವಾಮಾನ ಅಧ್ಯಯನ ಹಾಗೂ ಜಗತ್ತಿನಾದ್ಯಂತವಾಗುವ ಹವಾಮಾನ ವೈಪರಿತ್ಯಗಳನ್ನು ಅಳೆಯಲು ಮೊದಲ ಬಾರಿಗೆ ಭಾರತ ಮತ್ತು ಫ್ರಾನ್ಸ್ ಜತೆಗೂಡಿ ಹವಾಮಾನ ಮಾಪನ ಉಪಗ್ರಹವನ್ನು ಆಕಾಶಕ್ಕೆ ಬಿಡಲು ಮುಂದೆ ಬಂದಿದೆ. ಭೂಮಿಯಿಂದ ೮೬೭ ಕಿ.ಮೀ. ಎತ್ತರದಲ್ಲಿ ಭೂಮಧ್ಯ ರೇಖೆಯ ಗುಂಟ ಸುತ್ತುಹಾಕಲಿರುವ ಈ ಉಪಗ್ರಹವು ಒಂದು ದಿನದಲ್ಲಿ ತನಗೆ ಸೂಚಿಸಲಾದ ಪ್ರದೇಶವನ್ನು ಎರಡರಿಂದ ಆರು ಭಾರಿಯವರೆಗೂ ಸೂಕ್ಷ್ಮವಾಗಿ ಗಮನಿಸಲಿದೆ.

ಈ ಉಪಗ್ರಹಕ್ಕೆ ‘ಮೇಘಾ ಟ್ರೋಫಿಕಸ್’ ಎಂದು ಸೂಕ್ತವಾಗಿ ಹೆಸರಿಡಲಾಗಿದೆ. ಉಷ್ಣವಲಯದಲ್ಲಿಯ ವಾತಾವರಣದಲ್ಲಿ ಸಂಶೋಧನೆಗಾಗಿ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾದ ಈ ಕೃತಕ ಉಪಗ್ರಹವು ವಿಶ್ವದಲ್ಲಿಯೇ ಮೊದಲನೇಯದ್ದಾಗಿದೆ. ಭಾರತದ ಐ. ಎಸ್. ಎಲ್.ವಿ. ಯ ಮುಖಾಂತರ ೨೦೦೫ ರೊಳಗಾಗಿ ಈ ಉಪಗ್ರಹಗಳನ್ನು ಹಾರಿಬಿಡಲಾಗುವುದು. ಇದರ ಅಂದಾಜು ವೆಚ್ಚ ೩೦ ರಿಂದ ೪೦ ಕೋಟಿ, ಈ ಯೋಜನೆಯಲ್ಲಿ ಹವಾಮಾನ ಜಾಗತಿಯ ಮಟ್ಟದ ಅಧ್ಯಯನ ನಡೆಸುವಂಥಹ ಅಂತರರಾಷ್ಟ್ರೀಯ ವಿಜ್ಞಾನಿಗಳು ಆಸಕ್ತಿ ಮತ್ತು ಕುತೂಹಲವನ್ನು ವ್ಯಕ್ತಿಪಡಿಸಿದ್ದಾರೆ. ಇಲ್ಲಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ ೫೦೦ ಕೆ.ಜಿ. ತೂಕದ ಈ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್ ಸಂಸ್ಥೆ ಪರಸ್ಪರ ‌ಸಹಕರಿಸಿ ರಚಿಸಲಿದೆ. ಇದರ ಕಾರ್ಯಯೋಜನೆಯಲ್ಲಿ Indian Institute of Science ಮತ್ತು I.I.T.ಗಳು ದೇಶದಾದ್ಯಂತ ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.

ಪಶ್ಚಿಮಘಟ್ಟದ ಹವಾಮಾನದ ಏರುಪೇರುಗಳ ವೈಪರಿತ್ಯದಲ್ಲಿ ಮತ್ತು ಉತ್ತರ ಗೋಲಾರ್ಧದಲ್ಲಿ ಆಗುವ ಬದಲಾವಣೆಗಳಲ್ಲಿ ಉಷ್ಣವಲಯದ ಪಾತ್ರವನ್ನು ಗುರುತಿಸಬೇಕೆಂಬ ಹೊಸ ಚಿಂತನೆಯ ಫಲವಾಗಿ ಈ ಉಪಗ್ರಹವು ರಚಿತವಾಗಿದೆ. ಉಷ್ಣವಲಯದ ಹವೆಯಲ್ಲಾಗುವ ಬದಲಾವಣೆಗಳಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಚಂಡಮಾರುತದ ಬೀಸುವಿಕೆ ಅಥವಾ ಕ್ಷಾಮ ಉಂಟಾಗುವಿಕೆಗಳು ಮತ್ತು ಇತ್ಯಾದಿ ಹವಾಮಾನದ ಮಹತ್ವಪೂರ್ಣ ಮಾಹಿತಿಗಳು ಇದರಿಂದ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಷ್ಣವಲಯ ಕುರಿತು ಹೆಚ್ಚಿನ ಆಸಕ್ತಿ ಈಗ ಯುರೋಪ್ ಮತ್ತು ಅಮೇರಿಕದಲ್ಲಿ ಬೆಳೆಯುತ್ತಿದೆ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...