Home / ಕಥೆ / ಸಣ್ಣ ಕಥೆ / ಹಮ್ ನಹಿಂ ಗದ್ಧಾ

ಹಮ್ ನಹಿಂ ಗದ್ಧಾ

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂಟ್’ ಸಾಹೇಬರ ‘ಬಂಗ್ಲಗಿಂತಲೂ’ ಎತ್ತರದಲ್ಲಿ ಇದ್ದುವು. ಈ ಮೂವರು ‘ಆಫೀಸರರ’ ಬಟ್ಟೆಗಳನ್ನೆಲ್ಲಾ ಒಗೆಯುವ ಆಗಸನು ಒಬ್ಬನೇ. ಜನರಲ್ ಸಾಹೇಬರ ಮತ್ತು ಕರ್ನೆಲ್ ಸಾಹೇಬರ ‘ಬಂಗ್ಲೆಗಳು’ ಎತ್ತರದಲ್ಲಿ ಕಟ್ಟಿದುದರಿಂದ, ಆಗಸನು ಅವರ ವಸ್ತಗಳನ್ನು ಒಯ್ಯುವುದಕ್ಕೆ ಕತೆಯನ್ನು ಇಟ್ಟುಕೊಳ್ಳ ಬೇಕಾಯಿತು. ಆದರೆ ಲಫ್ಟೆನೆಂಟ್ ಸಾಹೇಬರ ಬಟ್ಟೆಗಳಿಗೆ ತನ್ನ ಬೆನ್ನನ್ನೇ ವಾಹನವಾಗಿ ಕೊಡುತಿದ್ದನು. ಇದರಲ್ಲಿ ನೂತನವೇನೂ ಇರಲಿಲ್ಲವೆಂದು ತಾನಾಗಿಯೇ ತೋರುವುದು. ಆದರೆ ಆಗಸನ ಈ ನಡತೆಯನ್ನು ನೋಡಿ ಲೆಫ್ಟೆನೆಂಟ್ ಸಾಹೇಬರು ರೇಗಿ ಬಿದ್ದರು. ಜನರಲ್ ಮತ್ತು ಕರ್ನಲ್ ಸಾಹೇಬರುಗಳ ವಸ್ತ್ರಗಳನ್ನು ಕತ್ತೆಯ ಮೇಲೂ, ತನ್ನ ವಸ್ತ್ರಗಳನ್ನು ಮಾತ್ರ ಬೆನ್ನ ಮೇಲೂ ಏಕೆ ಕೊಂಡುಹೋಗುತ್ತಿದ್ದನು ಎಂದು ಸಾಹೇಬರ ಬುದ್ಧಿಗೆ ತಿಳಿಯಲಿಲ್ಲ. ತನಗೆ ಇದೊಂದು ಬಗೆಯ ಅವಮಾನವೆಂದು ತಿಳಿದು, ಸಾಹೇಬರು ಆ ಬಡ ಪಾಪಿಗೆ ಬುದ್ಧಿ ಕಲಿಸಬೇಕೆಂದು ನಿಶ್ಚಯ ಮಾಡಿದರು.

ಸಾಹೇಬರು ಕಾರಣಾಂತರದಿಂದ ಅನೇಕ ಮಂದಿ ಸ್ನೇಹಿತರನ್ನು ಮನೆಗೆ ಒಂದು ದಿನ ಸಾಯಂಕಾಲ ಆಮಂತ್ರಿಸಿದ್ದರು. ಅತಿಥಿಗಳಲ್ಲಾ ಮನೆಯೊಳಗೆ ಕೂಡುತ್ತಲೇ ಸಾಹೇಬರ ಬಟ್ಟೆಗಳನ್ನು ಎಂದಿನಂತೆ ಬೆನ್ನ ಮೇಲೆ ಹೊತ್ತುಕೊಂಡು ‘ಡೋಭಿಯು’ ಒಳಕ್ಕೆ ಬಂದನು. ಅತಿಥಿಗಳ ಸಮಕ್ಷಮದಲ್ಲಿ ಅಗಸನು ತನಗೆ ತೋರಿಸಿದ ಈ ಅತ್ಯಾಚಾರವನ್ನು ನೋಡಿ, ಸಾಹೇಬರು ಉರಿದು ಬಿದ್ದರು. ಅದಲ್ಲದ ತಾನು ದೇಶಭಾಷಯಲ್ಲಿ ಎಷ್ಟರ ಮಟ್ಟಿಗೆ ಅಭ್ಯಾಸ ಮಾಡಿರುವನೆಂದು ತನ್ನ ಮಿತ್ರಮಂಡಳಿಗೆ ತೋರಿಸುವುದಕ್ಕೆ ಸಾಹೇಬರು ಕಾಂಕ್ಷಿತರಾಗಿ, ಅಗಸನಿಗೆ “ಕಂ ಹಿಯರ್ ಯು ನಿಗ್ಗರ್” ಎಂದು ಓದರಿದರು.

ಬಡ ಅಗಸನು ನಡುನಡುಗಿ ಮುಂದುಹೋಗಿ ದೊಡ್ಡ ಸಲಾಂ ಮಾಡಿದನು.

“ವ್ಹಾಯ್ ಜನರಲ್ ಸಾಹೀಬ್ ಎಂಡ್ ಕರ್ನೆಲ್ ಸಾಹೆಬ್ ತುಂ ಗಿವ್ ಗದ್ಧಾ ಎಂಡ್ ಹಂ ನಹಿ?” ಎಂದು ಸಾಹೇಬರು ಕುಪಿತಸ್ವರದಿಂದ ಹೇಳಿದರು.

ಅಗಸನ ಬುದ್ಧಿ ಅಡಿಮೇಲಾಯಿತು; ಅವನಿಗೆ ಈ ಸಿಟ್ಟು ಮಾತಿನ ಅರ್ಥವೇನೆಂದು ತಿಳಿದುಬರಲಿಲ್ಲ. ಅವನು ಮೌನದಿಂದ ಇರುವುದೇ ಲೇಸಂದು ತಿಳಿದು ನಿರುತ್ತರನಾದನು. ಆದರಿ ಅವನ ನಿರುತ್ತರದಿಂದ ಸಾಹೇಬರು ಇನ್ನೂ ಕೆರಳಿದಂತಾಗಿ “ಡೆಯರ್ ಯೂ ಡಿನ್ಯಾ ಇಟ್, ಅಯ್ಲ್ ಬ್ರೇಕ್ ಎವೆರಿ ಬೋನ್ ಫೊರ್ ಯೂ-ಮಾಲುಂ?” ಎಂದರು.

“ಖುದಾವಂದ್! ಆಪ್ ಕ್ಯಾ ಕಹತೇ ಹೈ ಮೈ ಸಮಜ್ತಾ ನಹಿಂ? ಎಂದು ‘ಢೋಬಿ’ ಯು ಉತ್ತರಿಸಿದನು.

“ಸಮಜ್ತೆ ನೈ? ಒಲ್ ರ್‍ಯಾಟ್, ಆಯ್ ವಿಲ್ ಎಕ್ಸ್‍ಪ್ಲೇನ್ ಟು ಯೂ, ದೇಖೊ.”

“ಜೀ ಹುಜೂರ್”

“ದೇಕ್ಹೋ! ಕರ್ನಲ್ಸಾಹಬ್ ಗದ್ಧಾ, ಜನರಲ್ ಸಾಹಬ್ ಗದ್ಭಾ; ಹಂ ಗದ್ಧಾ ನಹಿ”

ಇದಕ್ಕೆ ಅಗಸನು ಸುಮ್ಮನಿರಲಾರದೆ “ನಹಿ ಸಾಹೆಬ್, ಆಪ್ ಕೈಸಾ ಗದ್ಧಾ? ಆಪ್ ಗದ್ಧಾ ನಹಿ” ಎಂದನು.

ಇದನ್ನು ಕೇಳುತಲೇ ಸಾಹೇಬರು ಕ್ರೋಧದಿಂದ “ಯೂ ಸ್ಟುಪಿಡ್ ಅಸ್ಸ್, ಯು ಡೆಯರ್ ಡಿನೈ ಮಿ ಯುವರ್ ಡೊಂಕಿ? ವೊಟ್ ಡು ಯು ಮೀನ್? ಹಂ ಗದ್ಧಾ, ಒಫ್ ಕೋರ್ಸ್, ಹಂ ಗದ್ಧಾ.”

ಸಾಹೇಬರ ಮನಸ್ಸು ನೆಟ್ಟಗಾದ ಸ್ಥಿತಿಯಲ್ಲಿ ಇರಲಾರದೆಂದು ಸಾಹೇಬರ ಈ ಮಾತುಗಳಿಂದ ಬಡ ಅಗಸನು ನಿಶ್ಚಯಿಸಿದನು; ತಾನು ಕತ್ತೆ ಎಂದು ಹೇಳಿಸಿಕೊಳ್ಳುವ ಹಟವನ್ನು ಸಾಹೇಬರು ಏಕೆ ಹಿಡಿದಿರುವರು ಎಂದು ಅವನಿಗೆ ತಿಳಿಯಲಿಲ್ಲ. ಅಲ್ಲಿ ನೆರದಿದ್ದ ಅತಿಥಿಗಳೆಲ್ಲರೂ ಸಾಹೇಬರ ನುಡಿಗಳಿಂದ ವಿನೋದಗೊಂಡರು. ಆದರೆ ಆಗಸನು ತನ್ನನ್ನು ಅಪಮಾನಗೊಳಿಸಿದನೆಂದು ಸಾಹೇಬರು ತಿಳಿದು, ತನ್ನ ಮುಷ್ಟಿಯಿಂದ ಎರಡು ಮೂರು ಪ್ರಹಾರಗಳನ್ನು ಕೊಟ್ಟು ಹೇಳಿದೇನೆಂದರೆ, “ಸೇ, ಯು ಇನ್‌ಫರ್‌ನಲ್ ಆಸ್ಫ಼್!-ಸೇ, ಲೆಫ್ಟನಂಟ್ ಸಾಹೆ ಗದ್ಧಾ, ಅಲ್‍ಬತ್ ಗದ್ಧಾ, ಒಲ್‍ವೆಸ್ ಗದ್ಧಾ” “ಬೊಲೋ, ಹಂ ಗದ್ಧಾ ಹೈ, ಅದರ್ ವಾಯಸ್ ಅ ವಿಲ್ ಕಿಲ್ ಯು.”

ಲೆಫ್ಟನೆಂಟ್ ಸಾಹೇಬರೂಡನೆ ಚರ್ಚಿಸುವುದು ವ್ಯರ್ಥವೆಂದು ತಿಳಿದು ಆಗಸನು “ಆವ್ರ್ ಖುದಾ ವಂದ್ ಜಬ್ತೊ ಜೈಸಿ, ಆಪ್ ಕೀ ಮರ್ಜಿ, ಆಪ್ ಬಹುತ್ ಬಡಾ ಗದ್ಧಾ” ಎಂದನು.

ಈ ಸಂಗತಿಯನ್ನು ಸಾಹೇಬರು ತನ್ನ ಹಿಂದೂಸ್ಥಾನೀ ಮುನ್ಶಿಗೆ ಹೇಳಿದರು. ಮುನ್ಶಿಯು ಇದರ ಯಥಾರ್ಥ ಸ್ಥಿತಿಯನ್ನು ತಿಳಿಸುತ್ತಲೇ ಸಾಹೇಬರಿಗೆ ಅದ ನಾಚೆಕೆಯನ್ನು ವಾಚಿಸುವುದಕ್ಕಿಂತಲೂ ನೀವು ಯೋಚಿಸುವುದೇ ಲೇಸು. ಹೇಗೂ ಅದು ಮುನ್ಶಿಯ ಸಂಬಳವನ್ನು ಹೆಚ್ಚಿಸುವಂತೆ ಪರಿಣಮಿಸಿತು. ದೇಶ ಭಾಷೆಯ ಅಭ್ಯಾಸಕ್ಕೆ ಸ್ವಲ್ಪ ಹೆಚ್ಚು ಗಮನವನ್ನು ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶ ಭಾಷೆಯನ್ನು ತಿಳಿದ ಹೊರತು ಅದರಿಂದ ಒಂದೇ ಒಂದು ಅಕ್ಷರವನ್ನು ಉಚ್ಚರಿಸಲಾರೆನೆಂದು ನಿಶ್ಚೈಸಿದರು.
*****
(ಸುವಾಸಿನಿ – ೧೯೦೨)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್