Home / ಲೇಖನ / ವಿಜ್ಞಾನ / ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ? ಎಂದು ಇವರ ಮಿದುಳಿನ ಅಧ್ಯಯನವನ್ನು ಸಾಂಡ್ರಾ ಬಿ ಟೆಲ್ಸನ್ ಅವರು ನಡೆಯಿಸಿ ಅವರು ಹಲವು ಅಭಿಪ್ರಾಯಗಳನ್ನು ದೃಢಪಡಿಸಿದ್ದಾರೆ ಮತ್ತು ‘ಲಾನ್ಸೆಟ್’ ಪತ್ರಿಕೆಯಲ್ಲಿ ಐನ್‌ಸ್ಪನ್ ಬುದ್ಧಿಶಕ್ತಿಗೆ ಇವರ ಮಿದುಳೇ ಕಾರಣವೆಂದು ಹೇಳಿದ್ದಾರೆ.

೧೯೫೫ ರಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ಮಿದುಳಿನ ರಕ್ತಸ್ರಾವದಿಂದ ಪ್ರಾಣಬಿಟ್ಟಿದ್ದರು. ಇವರ ಶವ, ಪರೀಕ್ಷೆ ಮಾಡಿದ ವೈದ್ಯ ಥಾಮಸ್ ಹಾರ್ವೇಗೆ ತನ್ನ ಮರಣಾಂತರ ತನ್ನ ಮಿದುಳಿನ ಪರೀಕ್ಷೆ ಮಾಡಬಹುದೆಂದು ಐನ್‌ಸ್ಟನ್ ಹೇಳಿದ್ದರ ಮೇರೆಗೆ ಅವರ ಮಿದುಳನ್ನು ಹೊರತೆಗೆದು ಅದನ್ನು ೮-೧೦ ಹೋಳುಗಳನ್ನಾಗಿ ಮಾಡಿ ಕೆಡದಂತೆ ಪಾರ್ಮಾಲ್ಡಿ ಹೈಡ್ ದ್ರವದಲ್ಲಿ ಅದ್ದಿ
ಉಪ್ಪಿನಕಾಯಿಯ ರೀತಿ ಒಂಡು ಬಾಟಲಿಯಲ್ಲಿ ರಕ್ಷಿಸಿದ್ದರು.

ಆಂಟಾರಿಯೋದ ಹ್ಯಾಮಿಲ್ಟನ್‌ನ ಮ್ಯಾಕ್ ಮಾಸ್ಪರ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿಗಳ ಜತೆಗೂಡಿ ಐನ್‌ಸ್ಟನ್ ಅವರ ಮೆದುಳಿನ ಅಧ್ಯಯನ ನಡೆಯಿಸಿದ ಸಾಂಡ್ರಾ ಅವರು ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ ೩೫-ಪುರುಷರು, ೫೬-ಮಹಿಳೆಯರ ಮಿದುಳಿನ ಜತೆಗೆ ಐನ್‌ಸ್ಟನ್ ಅವರ ಮೆದುಳನ್ನು ಹೋಲಿಸಿ ಅಧ್ಯಯನ ನಡೆಯಿಸಿದರು. ಐನ್‌ಸ್ಟನ್ ಅವರ ಮೆದುಳು ಸಾಮಾನ್ಯರ ಮೆದುಳಂತೆ ಇದೆಯಾದರೂ ಸಾಮಾನ್ಯ ಜನರಲ್ಲಿರುವಂತೆ ಪೆರಿಟರ್ ಅಸರ್‌ಕ್ಯೂಲಮ್ ಇಲ್ಲದಿರುವುದು ಮೆದುಳಿನ ಎರಡು ಕಡೆಗಿರುವ ಇನ್‌ಪೆರಿಯರ್ ಪೆರಿಟರ್ ಭಾಗ ವಿಜ್ಞಾನಿಯ ಮೆದುಳಲ್ಲಿ ವಿಸ್ತಾರವಾಗಿ ಬೆಳೆದಿದ್ದು ಇದು ಮಿದುಳಿನ ಎರಡು ದಿಕ್ಕಿಗೆ ಶೇ.೧೫ ರಷ್ಟು ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ್ದರಿಂದ ಐನ್‍ಸ್ಟನ್ ಅವರ ಅಪಾರ ಬುದ್ಧಿಮತ್ತೆಗೆ ಕಾರಣವಾಗಿರಬಹುದೆಂದು ಸಂಶೋಧಕರು ವಾದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೆದುಳಲ್ಲೂ ಮಧ್ಯದಲ್ಲೊಂದು ಗೀರು ಇರುತ್ತದೆ. ಇದ್ಗು ನೆತ್ತಿಯ ಮೂಲಕ ಮೆದುಳಿನ ಹಿಂಭಾಗಕ್ಕೆ ಕತ್ತಿನವರೆಗೂ ಇರುತ್ತದೆ. ಆದರೆ ಇವರ ಮಿದುಳಿನಲ್ಲಿ ಆಗೀರು ಹಿಂಭಾಗಕ್ಕೆ ಬಂದಿರುವುದಿಲ್ಲ. ಬೇರೆಯಾವ ಮಿದುಳಿನಲ್ಲಿಯೂ ಕಾಣದ ಅಪರೂಪದ ಲಕ್ಷಣ ಇದಾಗಿದೆ. ಇಲ್ಲಿ ನರತಂತುಗಳು ಪರಸ್ಪರ ಬೆಸುಗೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನರಸಂದೇಶಗಳ ವಿನಿಮಯ ಚುರುಕಾಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳುತ್ತ ಈ ಕಾರಣವಾಗಿ ಇವರ ಬುದ್ಧಿಶಕ್ತಿಗೆ ಇದೇ ಕಾರಣವೆಂದು ವಾದಿಸುತ್ತಾರೆ.
*

Tagged:

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...