Home / ಲೇಖನ / ವಿಜ್ಞಾನ / ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ? ಎಂದು ಇವರ ಮಿದುಳಿನ ಅಧ್ಯಯನವನ್ನು ಸಾಂಡ್ರಾ ಬಿ ಟೆಲ್ಸನ್ ಅವರು ನಡೆಯಿಸಿ ಅವರು ಹಲವು ಅಭಿಪ್ರಾಯಗಳನ್ನು ದೃಢಪಡಿಸಿದ್ದಾರೆ ಮತ್ತು ‘ಲಾನ್ಸೆಟ್’ ಪತ್ರಿಕೆಯಲ್ಲಿ ಐನ್‌ಸ್ಪನ್ ಬುದ್ಧಿಶಕ್ತಿಗೆ ಇವರ ಮಿದುಳೇ ಕಾರಣವೆಂದು ಹೇಳಿದ್ದಾರೆ.

೧೯೫೫ ರಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ಮಿದುಳಿನ ರಕ್ತಸ್ರಾವದಿಂದ ಪ್ರಾಣಬಿಟ್ಟಿದ್ದರು. ಇವರ ಶವ, ಪರೀಕ್ಷೆ ಮಾಡಿದ ವೈದ್ಯ ಥಾಮಸ್ ಹಾರ್ವೇಗೆ ತನ್ನ ಮರಣಾಂತರ ತನ್ನ ಮಿದುಳಿನ ಪರೀಕ್ಷೆ ಮಾಡಬಹುದೆಂದು ಐನ್‌ಸ್ಟನ್ ಹೇಳಿದ್ದರ ಮೇರೆಗೆ ಅವರ ಮಿದುಳನ್ನು ಹೊರತೆಗೆದು ಅದನ್ನು ೮-೧೦ ಹೋಳುಗಳನ್ನಾಗಿ ಮಾಡಿ ಕೆಡದಂತೆ ಪಾರ್ಮಾಲ್ಡಿ ಹೈಡ್ ದ್ರವದಲ್ಲಿ ಅದ್ದಿ
ಉಪ್ಪಿನಕಾಯಿಯ ರೀತಿ ಒಂಡು ಬಾಟಲಿಯಲ್ಲಿ ರಕ್ಷಿಸಿದ್ದರು.

ಆಂಟಾರಿಯೋದ ಹ್ಯಾಮಿಲ್ಟನ್‌ನ ಮ್ಯಾಕ್ ಮಾಸ್ಪರ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿಗಳ ಜತೆಗೂಡಿ ಐನ್‌ಸ್ಟನ್ ಅವರ ಮೆದುಳಿನ ಅಧ್ಯಯನ ನಡೆಯಿಸಿದ ಸಾಂಡ್ರಾ ಅವರು ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ ೩೫-ಪುರುಷರು, ೫೬-ಮಹಿಳೆಯರ ಮಿದುಳಿನ ಜತೆಗೆ ಐನ್‌ಸ್ಟನ್ ಅವರ ಮೆದುಳನ್ನು ಹೋಲಿಸಿ ಅಧ್ಯಯನ ನಡೆಯಿಸಿದರು. ಐನ್‌ಸ್ಟನ್ ಅವರ ಮೆದುಳು ಸಾಮಾನ್ಯರ ಮೆದುಳಂತೆ ಇದೆಯಾದರೂ ಸಾಮಾನ್ಯ ಜನರಲ್ಲಿರುವಂತೆ ಪೆರಿಟರ್ ಅಸರ್‌ಕ್ಯೂಲಮ್ ಇಲ್ಲದಿರುವುದು ಮೆದುಳಿನ ಎರಡು ಕಡೆಗಿರುವ ಇನ್‌ಪೆರಿಯರ್ ಪೆರಿಟರ್ ಭಾಗ ವಿಜ್ಞಾನಿಯ ಮೆದುಳಲ್ಲಿ ವಿಸ್ತಾರವಾಗಿ ಬೆಳೆದಿದ್ದು ಇದು ಮಿದುಳಿನ ಎರಡು ದಿಕ್ಕಿಗೆ ಶೇ.೧೫ ರಷ್ಟು ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ್ದರಿಂದ ಐನ್‍ಸ್ಟನ್ ಅವರ ಅಪಾರ ಬುದ್ಧಿಮತ್ತೆಗೆ ಕಾರಣವಾಗಿರಬಹುದೆಂದು ಸಂಶೋಧಕರು ವಾದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೆದುಳಲ್ಲೂ ಮಧ್ಯದಲ್ಲೊಂದು ಗೀರು ಇರುತ್ತದೆ. ಇದ್ಗು ನೆತ್ತಿಯ ಮೂಲಕ ಮೆದುಳಿನ ಹಿಂಭಾಗಕ್ಕೆ ಕತ್ತಿನವರೆಗೂ ಇರುತ್ತದೆ. ಆದರೆ ಇವರ ಮಿದುಳಿನಲ್ಲಿ ಆಗೀರು ಹಿಂಭಾಗಕ್ಕೆ ಬಂದಿರುವುದಿಲ್ಲ. ಬೇರೆಯಾವ ಮಿದುಳಿನಲ್ಲಿಯೂ ಕಾಣದ ಅಪರೂಪದ ಲಕ್ಷಣ ಇದಾಗಿದೆ. ಇಲ್ಲಿ ನರತಂತುಗಳು ಪರಸ್ಪರ ಬೆಸುಗೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನರಸಂದೇಶಗಳ ವಿನಿಮಯ ಚುರುಕಾಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳುತ್ತ ಈ ಕಾರಣವಾಗಿ ಇವರ ಬುದ್ಧಿಶಕ್ತಿಗೆ ಇದೇ ಕಾರಣವೆಂದು ವಾದಿಸುತ್ತಾರೆ.
*

Tagged:

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...