Home / ಕವನ / ಕವಿತೆ / ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ
ಕಾಮಶಾಸ್ತ್ರ ಯಾವಲ್ಲಿತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು
ಭೂಮಿಯೊಳಗ ಆತಿ ಕೌತುಕವಾಯಿತು
ಆ ಮಹಾದೇವರು ಬ್ಯಾಸತ್ತು
ನೇಮ ಹಿಡಿದು ಆ ಹೇಮಕೂಟದಲಿ
ತಾನು ರಹಿತ ಒಂಭತ್ತು ಹೇಮಕೂಟದಲಿ
ಉತ್ಕರಿಸುತ ನದಿ ಭೀಮನಾಂಗ ನೋಡಿ ಬಂದಿತು
ಕ್ಷೇಮದಿಂದ ಸಂಚಾರವು ತಿಳಿಯಲು
ಈ ಮಹಿಮೆ ಯಾರಿಗೆ ಗೊತ್ತು

||ಇಳವು||
ರತಿದೇವಿಯೆಂಬು ಐದು ಅಕ್ಷರಾ
ಮತಿಗೆಟ್ಟು ನಾನಾವಿಕಾರಾ
ಜತಿಗೂಡಿ ಮೆರೆವ ವಿಸ್ತಾರಾ
ಕ್ಷಿತಿಯೊಳಗೆ ಆತೋ ವಿಕಾರಾ
ಸತಿ ಪುರುಷರು ಇಬ್ಬರು ಜರಾ
ಪ್ರತಿಭೂಮಿ ಇರುವದು ಚಮತ್ಕಾರಾ

||ಏರು||
ವೀರ ಪುರುಷರು ವಿಧ್ವಂಸಕ ನೇತ್ರರು
ಸತಿ ಪುರುಷರು ಇಬ್ಬರು ಜತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು ||೧||

ನಾಗಲಿಂಗ ಆಲಿಂಗನ ಕೊಟ್ಟರೆ
ಈಗ ಆತು ಪದ್ಮಿನಿಗೆ ಸುಖಭೋಗ
ವಿಷಯದಾಗ ಮುಖವಿಲ್ಲದೆ ಈ
ಹಸ್ತಿನಿಕಾಲೊಳು ಆತೋ ಸುಖಾ
ಈಗ ಪುರುಷಜಾತಿಗಳು ಮೋಹಿಸಿ
ಮಾನಿನಿಯರು ನೋಡತಾರೋ ಮುಖಾ
ರೋಗ ಬಲಿದು ಏಕಾಗಿ ಅಂದದಿ
ತೆಕ್ಕಿಯೊಳಗೆ ಅಪ್ಪುವದು ಜೋಕಾ
ಸಾರಮನಸ್ಸು ಸಂಯೋಗನಿದ್ರಿ ಕುಚದಾ
ಗಿರಿಯಲಿ ಮಲಗೋದು ಠೀಕಾ
ಮ್ಯಾಗಬಿದ್ದು ಮಾತಾಡಲು ಮನ್ಮಥಾ
ದಾಗರಿಸುತ ನಗುತಿಹನ್ಯಾಕೆ

||ಇಳವು||
ಸಾಗಲಿಕ್ಕೆ ಪಶ್ಚಿಮದ ಭಾಗ
ಅಲ್ಲೇ ಇಡಬೇಕು ಕೈ ಅದರೂಳಗಾ
ಚಾಗನ ಉತ್ತರದ ಲಾಗಾ
ಇರಬೇಕು ದಕ್ಷಿಣದ ತ್ಯಾಗಾ
ಸೋಗಿತಿ ಪೂರ್ವದ ಯೋಗಾ
ತೂಗ್ಯಾಡು ಅನಕಾ ಸಂಯೋಗಾ

||ಏರು||
ಆಗ ಹಿಡಿದು ಅಧರಾಮೃತ ಸವಿಯಲು
ಶ್ರೀ ಗಿರಿಯಲಿ ಉದರಿತ ಮುತ್ತು
ಕಾಮ ಸುಟ್ಟು ಕಷ್ಟವಾಯಿತು ||೨||

ಚಿತ್ತಿನಿ ಜಾತಿಗೆ ಹಸ್ತವು ಮೇಲು
ಹತ್ತಿಪ್ಪತ್ತು ಹಿಡಿ ಹನ್ನೊಂದು ಗೆರಿ
ಹಸ್ತಿನಿ ಮುಖಮಂಡಲ ಕಪೋಲಕ
ಮಸ್ತಕದೊಳಗಿನ ನೀರ ಕೆರಿ
ಉತ್ತಮ ಪದ್ಮಿನಿ ಮತ್ತ ನೋಡಲು
ಎತ್ತಿ ಕಣ್ಣು ಕೈಬೀಸಿ ಕರಿ
ಚಿತ್ತಜನಕರ ಹಸ್ತಿನಿ ಶಂಕಿನಿ
ಮುತ್ತಿಹೊಡೆದರು ಮಾಯಮಾಡಿ
ಮುತ್ತಿಗಾಯಿತಲ್ಲಾ ಮೈಸೂರು ಸೀಮೆಗೆ
ರತ್ನ ಮೇಲೆ ಶಿಶುಪೇಚು ಗರಿ
ಕುಸ್ತಿ ಇಟ್ಟು ಕರಮಸ್ತಕ ಮುಚ್ಚಲು
ಅಳಿಸಿಹೋಯಿತು ಅತಿಲ್ಕವರಿ

||ಇಳವು||
ವಿಸ್ತರವು ಕಾಮಶಾಸ್ತ್ರದಲಿ
ಚಿತ್ತಿರಬೇಕು ಸೂರತದ ಲೀಲಿ
ಗೊತ್ತಿಟ್ಟು ಪ್ರೀತಿ ಧರ್ಮದಲಿ
ಮುತ್ತಿನ ಜ್ಯೋತಿ ರತ್ನದಲಿ

|| ಏರು||
ಸತ್ಯ ಶಿಶುನಾಳಧೀಶನ ಸೇವಕ
ಮತ್ತೆ ಹೇಳಿದ ಮಾತಿನ ಗೊತ್ತು
ಕಾಮಸುಟ್ಟು ಕಷ್ಟವಾಯಿತು
ರತಿದೇವಿಗೆ ಬಂದೀತು ಹೊತ್ತು ||೩||
*****

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...