ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು ನನ್ನ ಕಡೆಗಣ್ಣಿನೊಳೆಂದು ಎನಬೇಡ ನ...

ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ! &#8216...

ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು ಅನ್ನ-ಆಶ್ರಯ ಕೇಳಿದ ಬಡವರ ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿ...

ಜಗತ್ತಿನಲ್ಲಿ ದಿನನಿತ್ಯವು ಅಲ್ಲಲ್ಲಿ ಗೋಲಸ್ಪೋಟಗೊಂಡು ಅಪಾರ ಆಸ್ತಿ ಜೀವರಾಶಿಗಳ ಹರಣವಾಗುತ್ತಿದೆ. ಇದೊಂದು ನ್ಶೆಸರ್ಗಿಕ ವಿರೂಪ. ಇದನ್ನು ತಪ್ಪಿಸುವುದು ಸಾಧ್ಯವಿಲ್ಲವಾದರೂ ಇದು ಸ್ಪೋಟಿಸುವ (ಜ್ವಾಲಾಮುಖಿ) ಮುನ್ಸೂಚನೆಯನ್ನಾದರೂ ಪಡೆಯಬಹುದು. ಇದ...

ಇದು ಹರಿವ ನೀರು ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್‍ನಾಮ -ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು. ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ ಜೀವರ ಬಳಿ ತೆವಳ...

ಹಾಡಲು ಕೋಗಿಲೆ ಅಭಿಮಾನದಲಿ ಕನ್ನಡ ಗೀತೆಯನು ಕುಣಿಯುತ ನವಿಲು ನಾಟ್ಯದಿ ಮರೆಸಿತು ಕನ್ನಡತನವನ್ನು ಅರಳಲು ಹೂಗಳು ಮಧುಮಾಸದಲಿ ಕನ್ನಡ ನೆಲದಲ್ಲಿ ದುಂಬಿಯ ಸಾಲು ಸಿರಿಗನ್ನಡ ಮಧು ಹೀರಿವೆ ಒಲುಮೆಯಲಿ ಕಾರ್ಮೋಡಗಳು ನೀಲಾಂಬರದಲಿ ತೇಲಿರೆ ನಲಿವಾಗಿ ಮಲೆ ...

“ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-” ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ...

ಕಂದ ಕನ್ನಡದಾ ಕಂದ ಕಂದ ಕನ್ನಡದಾ ಕಂದ ಕನ್ನಡವೆ ಆನಂದ ಕನ್ನಡವೇ ಕಸ್ತೂರಿ ತಿಳಿ ನೀ ಕಂದ|| ತಾಯ ಮಡಿಲ ಹೊನಲಂತೆ ತಾಯಿನುಡಿ ಸವಿ ಜೇನಿನಂತೆ ಮಲ್ಲಿಗೆ ತೊಟ್ಟಿಲಲ್ಲಿ ನೀ ಆಡಿ ಬೆಳೆದಂತೆ ಕನ್ನಡವೇ ಶ್ರೀಗಂಧ ತಿಳಿನೀ ಕಂದ|| ಬೆಳಗು ನೀ ಜ್ಯೋತಿಯಾಗಿ ಕ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ರೊಚ್ಚು, ಕಾಮದ ಕೆಚ್ಚು ಕಚ್ಚುತ್ತಿರಲು ನನ್ನ ವೃದ್ಧಾಪ್ಯದಲ್ಲಿ, ಎಂಥ ಭೀಕರ ಅಂತ ಚಿಂತಿಸುವಿಯೋ ಏನೊ ನೀನು ಮನದಲ್ಲಿ, ಅಂಥ ಪೀಡೆಗಳಾಗಿ ಕಾಡಿದ್ದೇನಿಲ್ಲ ಅವು ತಾರುಣ್ಯದಲ್ಲಿ ನನ್ನನ್ನು; ಅಲ್ಲದೇ ನನಗೀಗ ಹಾಡು ಬರೆಯಲ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...