Home / ಕವನ / ಕವಿತೆ / ಅಂತರ್ದರ್ಶನ

ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ
ನಿನ್ನ ನೋಟ ದಾಳವೆತ್ತರ ನಿಲುಕದು

ಕಸವೊಽ ರಸವೊಽ
ಸರಸ ವಿರಸವೊಽ
ನಿನ್ನ ನೋಟದಿ ಸಮರಸ

ಮುಗಿಲಿನೆದೆಗೂ ಮಣ್ಣ ವಾಸನೆ
ತೋರೋ ನಿನ್ನಯ ಗಾರುಡಿ
ಕಡಲ ತೆರೆಯ ನೊರೆಯ ತೊರೆಗೊ
ಕಣ್ಣೀರ ಛಾಯೆಯ ಮುನ್ನುಡಿ

ಬೀಸೊ ಗಾಳಿಗೂ ಭಾವ ಸಾಸಿರ
ಜೀವ ಜಲಕು ಒನಪಿನೋಗರ
ಪಂಕ್ತಿಯಲ್ಲೂ ಜಂಗಮದ ದರ್ಶನ
ಖಗ-ಮಿಗ-ಜಂತುಗಳಲೂ ನೇಹದ ಸ್ಪರ್ಶನಾಽ

ಹೆಪ್ಪುಗಟ್ಟಿ ಕರಗೊ ತುಹಿನವು
ನಿನ್ನ ಕಣ್ಣ ಕರಣಕೆ ಕಾರಣ
ವೈಶಾಖ, ವರ್ಷಿಣಿ, ಹಿಮಂತ ಸಾಲ್ಗಳು
ಪದ ಪಾದದಕ್ಕರ ತೋರಣ.

ಹುಟ್ಟು ಸಾವು ನೋವು ನಲಿವು
ನಿನಗಾತ್ಮಾನಂದದ ಸಂತಸ
ದೃಷ್ಟಿಯಂತರದೃಷ್ಟಿಯು
ನಿನ್ನ ಚಿತ್ತದೊಲ್ಮೆ ಬಲ್ಮೆಯ ನವರಸ

ಬಯಲ ಜಗದ ಬಯಲಗಣ್ಣಿಗೆ
ಬಯಲೆ ನೂಪುರದಾಲಯ
ಕವಿಯೆ ನಿನ್ನಯ ಕಾವ್ಯಗಣ್ಣಲಿ
ಬಯಲು ಬಯಲಿಗೂ ಶೃತಿಲಯ…..
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...