Home / ಕವನ / ಕವಿತೆ / ಅಮರಾವತಿ

ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು
ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ
ಲಂಡನ್ ಸಡಗರದ ಕನಸು ನನಸಾಗುವ
ಹತ್ತಿರ ಹತ್ತಿರದ ಸಮಯ
ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ….

ಸಖಿಯ ಉಲಿತ ಕೆಲವೇನಿಮಿಷ
ನಗರದಮೇಲೆ ಹಿಮಾಚ್ಫಾದನೆ
ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು
ಒಂದು ಎರಡು ಮೂರು ನಾಲ್ಕು ಸುತ್ತು
ತಿರುಗುಚಕ್ರದನುಭವ
ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ

ಹುಡುಕಾಟ ಹುಡುಕಾಟ ಎಲ್ಲಿದೆ ರಾಣಿಮಹಲು
ಮೋಡ ಮಿಣುಕು ತುಣುಕು ಮಿಣುಕು
ಕಣ್ಣು ಮುಚ್ಚಾಲೆಯಾಟ ಐದನೆಯ ಸುತ್ತು
ಆಕಾಶಪ್ರದಕ್ಷಣೆ ವೀಕ್ಷಣೆ
ಪೆಗ್ಗೇರಿಸಿ ಬೆಚ್ಚಗಾಗಿರುವವರ ಇನ್ನೂ ಸುಖನಿದ್ರೆ
ಕಾಫಿಹೀರಿ ಕಿಟಕಿಯಾಚೆ ನೆಟ್ಟ ದೃಷ್ಟಿ
ನಡುವೆ ಮಂಜು ಕೊರೆತ

ಮೋಡ ಭೇದಿಸಿ ಇಳಿಮುಖದ ವಿಮಾನ
ತುಂಡುತುಂಡಾಗಿ ಕೊನೆಗೊಮ್ಮೆ ಇಡಿಯಾಗಿ
ಗಕ್ಕನೆ ಕಾಣಿಸಿತೊಂದು ಅವರಾವತಿ
ಮುಸ್ಸಂಜೆ ಹೊತ್ತು ಮಿಣಿಮಿಣಿ,
ಝಗಝಗ ದೀಪ ಹರಿದಾಡುವ ಬಣ್ಣ

ರಸ್ತೆಗಳ ಉದ್ದಗಲ ಯಕ್ಷಯಕ್ಷಿಣಿಯರು
ಇನ್ನೂ ಹುಡುಕಾಟ ರಾಣಿಯ ಮಹಲು
ಮಹಲಿನೊಳಿಲ್ಲ ರಾಜನ ಸಂಗಡ ರಾಣಿ
ಇವನಬಿಟ್ಟು ಅವನಾರೋ
ಅವನಬಿಟ್ಟು ಇನ್ಯಾರೋ, ಹಾದಿಹೆಣವಾಗಿ
ಬಿದ್ದ ರಾಜಕುಮಾರಿ
ಸೂರ್ಯಮುಳುಗಿ ಕಗ್ಗತ್ತಲು
ಅರಮನೆಗೆ ಗ್ರಹಣ
ನೂರೊಂದು ಕಥೆಗಳ ನಗರ
ಗಹಗಹಿಸಿ ನಗುವ ದೀಪಗಳು
ನನ್ನೆದೆಯೊಳಕ್ಕೆ ಆಲಂಗಿಸುವ ಕುತೂಹಲ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...