Home / ಕವನ / ಕವಿತೆ / ಮಾಂತ್ರಿಕ

ಮಾಂತ್ರಿಕ

ಬಯಲಲಿ ಮಕ್ಕಳು ಹಾರಿಸಿದ
ಗಾಳಿಪಟ ಮನೆಯ ಒಳಗೆ
ಬಿದಿರು ಗೋಂದು ಬಣ್ಣದ ಹಾಳೆ ತುಂಡು.
ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ
ಗಂಗೆ ಹರಿದಳು ಎದೆಯ ಬಯಲಲಿ.

ದಿಕ್ಕು ದಿಕ್ಕಿನ ಚಲನೆ ಬದಲಿಸಿ
ಮದು ಹದಗೊಂಡ ಮನಸ್ಸು ಬಯಲು
ಆಲಯದೊಳಗಿರಿಸಿ ಎಲ್ಲಿರುವೆ ನೀನು
ಇಲ್ಲಿ ಇರಿಸಿ ಗೋಡೆಗಳು ತೂಗಿ ಹಾಕಿದ
ಭಾವಚಿತ್ರಗಳ ನೆನಪು ಕನ್ನಡಿಯಲಿ ಪ್ರತಿಬಿಂಬ.

ಪರಿಮಳ ಹೂಸೂಸಿ ಗಾಳಿಗಂಧ
ತೇಲಿದ ಸಂಜೆ ನೆರಳು ಬೆಳಕಿನಾಟಕೆ
ಕರಗಿ ನೀರಾಗಿ ಹನಿಹನಿ ಕವಿತೆಯ ಸಾಲುಗಳು
ಭಾವ ತರಂಗದಲಿ ಹಾರುತ ಬಂದ ಚಿಟ್ಟೆಗಳು
ಹೂಗಳ ಆಯ್ದು ತಂದ ಪುಟ್ಟ ಕೈಗಳು.

ಮೊದಲು ಕಣ್ಣಿಗೆ ಕಾಡಿಗೆ ತೀಡಿದ ದೇವರ
ಮನೆದೀಪ ಬೆಳಗಿದ ಬೆಳಕು ಎಲ್ಲೆಡೆ,
ಪ್ರತಿಫಲಿಸಿ ತೂಗುವ ತೊಟ್ಟಿಲಲಿ ಮೇರುಗೀತೆ,
ಮಮತೆಯಿಂದ ರಕ್ಷಿಸಿದ ತಾಯಿ ಬೇರು
ಚಿಗುರು ಚಿಮ್ಮಿ ಸೂಸಿ ಅರಳಿದ ಮಲ್ಲಿಗೆ ಘಮಘಮ.

ಭಾವರಂಗಿನ ಪದಗಳಿಗೆ ಗಾಳಿ ಬೆಳಕು
ಮಿಂಚು ಹರಸಿ ಹಾಯ್ದ ಫಲಕುಗಳು
ಎದೆ ತೆರೆದ ಹಾಡಾಗಿ ಹೂ ಚಿಟ್ಟೆ ನಕ್ಷತ್ರಗಳರಳಿ
ಕವಿತೆ ತಂದ ಮಂತ್ರದಂಡ ಇದ್ದ ಎಲ್ಲಾ
ವಿಸ್ಮಯಗಳ ಇಂದ್ಹಾಂಗ ಅನಿಸಿ ಚೈತನ್ಯ ತಂದ ಮಾಂತ್ರಿಕ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...