Home / ಕವನ / ಕವಿತೆ / ಮಧುಚಂದ್ರ

ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ
ಬೆಳಗಽನ್ನು ಸುಯ್ದಾ,
ಬೆಳ್ಳಿಯ ಬೆಳಗನ್ನು ಸುಯ್ದಾ,
ಬಾನಲಿ ಮೊಳೆದು ಮೆಲ್ಲಗೆ ಬೆಳೆದು
ಇಳೆಯಲ್ಲಾ ಕಾಣ್ದಾಽ
ಪೂರ್ಣಿ ಇಳೆಯಲ್ಲಾ ಕಾಣ್ದಾ

ಅಮೃತದ ರಸದಾ ಚಿಲುಮೆಯಿಂದಽ
ಭರಭರನೇ ಸುರಿದು
ತಾನೇ ಭರ ಭರನೇ ಸುರಿದು
ಧಗ ಧಗಿಸಿರುವ ಧರಿಣಿಗೆ ತಂಪ
ಸರ ಸರನೇ ತರುವಽ
ತಾನೇ ಸರ ಸರನೇ ತರುವಾಽ

ಗಿರಿಗಳ ಮೇಲೆ ಕಾನನದೊಳಗೆ
ಶೃಂಗಾರದ ಹಾಸು,
ಕಂಡಿತು ಶೃಂಗಾರದ ಹಾಸು,
ಹಾಸಿರುವವರಾರು ಬಾನೆತ್ತರದಿಂ
ದಿಲ್ಲಿಗೇ ತಂದುಽ
ಈಗ ಇಲ್ಲಿಗೇ ತಂಧೂಽ

ಕಾಮನೆ ಬಯಕೆಯ ಮನದಲಿ ತರುವ
ವಿರಹದ ಬೇಗೆಯನುಽ
ತನುವಲಿ ವಿರಹದ ಬೇಗೆಯನು
ಪ್ರಣಯಿಗಳಿಗೆ ಉನ್ಮಾದವ ತರುವ
ತಂಬೆಳಕಿನ ಮಾಲೆ
ಮಿಲನದ ತಂಬೆಳಕಿನ ಮಾಲೆ

ಕಾಡಿನ ಮಧ್ಯದ ಸೆರಗೊಳಗಿಂದ
ಖಗ ಮಿಗದಽ ನಲಿವುಽ
ಕೇಳಿತು ಖಗಮೃಗದಾ ನಲಿವು
ಜೀವ ಸಂಕುಲಗಳ ಚಂದದ ಉಲಿವು
ಮಧು ಚಂದ್ರದ ಹಾಡು
ಹಾಡಿತು ಮಧು ಚಂದ್ರದ ಹಾಡು |

ಕಲೆತವು ತನುವುಽ ಬೆರೆತವು ಮನವುಽ
ಮರೆಸೀತುಽ ಇರವುಽ
ಸುಖದಲಿಽ ಮರೆಸೀತು ಇರವು
ಚಂದನ ಪರಿಮಳ ಹರಡುತ ಬಂತು
ತಂಗಾಳಿಯುಽ ಜೊತೆಗೆ
ಹರ್ಷದ ತಂಗಾಳಿಯು ಜೊತೆಗೆ |

ನಾಚಿದ ನಾಚಿಕೆ ದೂರ ಸರಿಯಿತು
ರತಿ ಮನ್ಮಥರಽಮಿಲನ
ಶೃಂಗಾರದ ಶಿವ-ಶಿವೆಯರಽ ಮಿಲನ
ಪ್ರೇಮ ಜಲಧಿಯ ತೆರೆಯಬ್ಬರದಿ
ಗೇಹ-ದೇಹದ ಸಮ್ಮಿಲನ
ಮರು ಹುಟ್ಟಿನ ಜೋಗುಳ ತೋಂ… ತನನನ… |
(ವರಕವಿ ಬೇಂದ್ರೆಯವರ ಮೂಡಲ ಮನೆಯಾಽ…. ಕವಿತೆಗೆ ಗೌರವದಿಂದ)
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...