Home / ಕವನ / ಕವಿತೆ / ಪ್ರತಿಬಿಂಬ

ಪ್ರತಿಬಿಂಬ

ಕನ್ನಡಿಯೊಳಗೇ ಅವಿತು
ಕುಳಿತು
ಬಿಂಬಕ್ಕೆ ಪಾದರಸದ ಪರದೆಯೆಳೆದು
ಪಾರದರ್ಶಕದ ಪ್ರತಿಬಿಂಬವಾಗಿ
ಕನ್ನಡಿಯಾಚೆಯ ಮೂರ್ತಬಿಂಬದ
ಅಮೂರ್ತ ಪಡಿಯಚ್ಚು
ಭೂಮಿ ಮೇಲೆಷ್ಟೋ
ಒಳಗೂ ಅಷ್ಟೇ!
ಕನ್ನಡಿಗೆ ಮುಖಾಮುಖಿಯಾದ
ಪ್ರತಿಯೊಂದು ಬಿಂಬಕ್ಕೆ
ತಕ್ಕ ಪ್ರತಿರೂಪ
ಪಾತ್ರೆಯಾಕಾರಕ್ಕೆ ತಕ್ಕ ಪಾತ್ರ
ಬದಲಿಸುವ ದ್ರವರೂಪ!

ತನ್ನತನವಿರದ ಕೈಗೊಂಬೆಗೆ
ಎಲ್ಲಿದೆ ಸ್ಥಿರ ಅಸ್ತಿತ್ವ?
ಎಲ್ಲಿದೆ ಚಿರ ವ್ಯಕ್ತಿತ್ವ?

ಕನ್ನಡಿಯೊಳಗೇ ಎಡಬಲಗಳು
ಅದಲು ಬದಲಾಗಿ
ತಕ್ಕ ಪರಿಮಾಣದ ಪಾತ್ರೆಯಿಲ್ಲದೆಯೂ
ತನ್ನ ಪಾತ್ರವರಿತ ದ್ರವ
ನಿಂತಲ್ಲೇ ಘನವಾಗುವಾಗ
ಎರವಲು ಪ್ರಕಾಶಪಡೆದ
ಶಶಿಯಂತೆ ಪೊಳ್ಳು ಪ್ರತಿಬಿಂಬವಾದರೆ ಸಾಕೆ?
ಸ್ವಯಂಪ್ರಕಾಶದಿಂದ ಬೆಳಗುವ
ಸೂರ್ಯನೆಂಬ
ಮೂರ್ತ ಬಿಂಬವಾಗಬೇಕೆ?

ಬಿಂಬಕ್ಕೆ ನೂರು ಆಯಾಮಗಳಿರಬಹುದು
ಆದರೆಲ್ಲವೂ ಹಳತೇ!
ಅವರಿವರು ನಡೆದು ಸವೆಸಿ
ಟೊಳ್ಳಾದ ದಾರಿಗೆ
ತಳಿರು ತೋರಣ ಕಟ್ಟಿ
ಅಲಂಕರಿಸಿದರೆ ಹೊಸತೆನಿಸೀತೆ?

ಬಿಂಬಕ್ಕೆ ಅಂತಸ್ಥ
ಭಾವಗಳೆನಿತೋ?
ಆದರೆ,
ಪ್ರತಿಬಿಂಬಕ್ಕೆ ಒಳಗುಗಳಿಲ್ಲದ
ತಟಸ್ಥ ಮುಖವೊಂದೇ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...