Home / ಕವನ / ಕವಿತೆ / ಅಣುಶಕ್ತಿ

ಅಣುಶಕ್ತಿ

ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍
ಭಕ್ತರ್‍ ವಿರಕ್ತರ್‍ ಕೀವಂದ್ರರ್‍
ದಿವ್ಯಚಕ್ಷುನಿನಿಂ
ಅಣುವನೊಡೆದರ್‍
ಕಂಡರದ್ಭುತಮಂ,
ಪೂರ್ಣ ದರ್ಶನಮಂ:
ವ್ಯೋಮ ಭೂಮಿಗಳೊಳ್

ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ
ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನಿಸಿ
ಕಡಲಾಗಿ ಭೂಮಿಯೊಡಲಾಗಿ
ತಾನ್ ಸರ್ವ ಸೃಷ್ಟಿಯೆನಿಸಿ
ಮೆರೆವ
ಪರಮ ತೇಜಸ್ವಿಯನ್
ಅಣುವಿಗಣುವಾದನನ್
ಮಹತೋಮಹೀಯನನ್
ಸರ್ವಶಕ್ತನನ್
ಸರ್ವಕಾರಣನನ್
ಪರಮಾತ್ಮನನ್
ಲೋಕತಾರಕನನ್.

ಇಂದು – ಹಿರಿ ವಿಜ್ಞಾನಿಗಳ್ ಪರಮ ಶಕ್ತರ್‍
ಪ್ರತ್ಯಕ್ಷತಾ ತತ್ವದತಿವೀರ ಭಕ್ತರ್‍
ಯಂತ್ರ ಚಕ್ಷುವಿನಿಂ
ಅಣುವನೊಡೆದರ್‍
ಜಗದ
ಕಟ್ಟನೊಡೆದರ್‍:
ಒಡೆದು
ಕಂಡರದ್ಭುತಮಂ,
ಖಂಡ ದರ್ಶನಮಂ:
ವ್ಯೋಮ ಜನ ಭುವಿಗಳೊಳ್
ರವಿ ಶಶಿಗಳಂ ನೊಣೆವ ರಾಹು ಸಮನಾಗಿ
ತಾರೆಗಳ ಮುಕ್ಕುಳಿಪ ತಮದ ರಕ್ಕಸನೆನಿಸಿ
ಸಿಡಿಲಾಗಿ ಸಿಡಿದು ಸೀಳ್ ಮಿಂಚಾಗಿ ಇಳಿದು
ಸುರಿದಗ್ನಿವೃಷ್ಟಿಯಾಗಿ
ಕಡಲನೇ ಕುಡಿದು ನೆಲಮೆಲ್ಲಮನ್ ಒಡೆದು
ಸೃಷ್ಟಿಸರ್ವಸ್ವಮಂ ಬಿಡದೆ ತೊಡೆದು
ಅತಿ ರೌದ್ರದೆಸಕದಿಂ
ಉರಿದು ಮಾಮಸಕದಿಂ
ಪ್ರಲಯ ರುದ್ರಂ ತಾನೆ ಎನಿಸಿ
ಮೆರೆವ
ಪರಮ ಪ್ರಕಾಶಮಂ
ಸೃಷ್ಟಿಯ ವಿನಾಶಮಂ
ಅಣುವಿನೊಳಶಕ್ತಿಯಂ
ಲೋಕ ಮಾರಕಮಂ.

ಅದು ಶಾಂತಿದರ್ಶನಂ,
ಲೋಕತಾರಕ ಶಾಂತಿ;
ಇದು ಕ್ರಾಂತಿ ದರ್ಶನಂ,
ಲೋಕಮಾರಕ ಕ್ರಾಂತಿ.

ವಿಜ್ಞಾನಿಗಳ್ ಧರ್ಮಜ್ಞಾನಿಗಳ್ ತಾವಾಗಿ
ವಿಜ್ಞಾನದ ಸಿಡಿಲ್ ಬಾನವರ ಹೂವಾಗಿ
ಮಾನವರಿಗೊಸಗೆಯಾಗೆ
ಕ್ರಾಂತಿ ‘ಸಂಕ್ರಾಂತಿ’ಯಾಗೆ
ಶುಭವರಳೆ ಕ್ರಾಂತಿಯೊಳಗೆ
ನಿಶ್ಚಯಂ ಕಾಂತಿ ಇಳೆಗೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...