Home / ಕವನ / ಕವಿತೆ / ಬುದ್ಧನಾಗುವ ಬಯಕೆ

ಬುದ್ಧನಾಗುವ ಬಯಕೆ

ಬುದ್ಧನಾಗಲಿಲ್ಲ ನಾ
ಕೇರಿಂದೆದ್ದು ಬರಲಾಗಲೇ ಇಲ್ಲ!
ಬಿದ್ದಲ್ಲೆ ಬಿದ್ದು ಬಿದ್ದು…
ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು…
ಒದ್ದಾಡುತ್ತಿರುವೆ!
ಕೇರಿಂದೆ ಹೊರಗೇ ಬರಲಾಗಲೇ ಇಲ್ಲ
ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ!
*

ಜಗವೆಲ್ಲ ಮಲಗಿರಲು
ಶತಶತಮಾನಗಳಿಂದಾ ಎದ್ದಿರುವೆವು ನಾವು!
ನಿದ್ದಿಲ್ಲದೆ, ಮನೆ, ಮಠ, ಸೂರಿಲ್ಲದೇ…
ಬುದ್ಧನಾಗುವ ಸಂಕಲ್ಪ ನಮಗುಂಟೇ?!
ಹೊಟ್ಟೆ, ಬಟ್ಟೆಗೆ,
ಆಸೆ ಪಟ್ಟು
ಕಟ್ಟು ನಿಟ್ಟಿಗೆ,
ಒಳಪಟ್ಟು
ಗತಿಗೆಟ್ಟವರೆಂಬಾಪಟ್ಟ,
ಗಿರಿಜನರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಸಾವೆಂಬಾ ಅವಮಾನ!
ಕಂಗೆಟ್ಟ ಹಸಿವು,
ರೋಗರುಜಿನೆಂಬಾ ಹಾಸಿಗೆ
ಬಡತನವೆಂಬಾ ಸಂಕೋಲೆ
ಜಾತಿ, ಮತ, ಕುಲ, ಭೇದಗಳೆಂಬಾ ಕೆಂಭೂತ,
ಅನಕ್ಷರೆಂಬಾಭೂತ
ಸಂಸಾರವೆಂಬಾ ಪಿಶಾಚಿಗೆ,
ಬೇಸತ್ತರೂ ವೈರಾಗ್ಯವೆಂಬುದಿಲ್ಲ!
ಇನ್ನು ಬುದ್ಧನಾಗುವ ಬಯಕೆ…
ನಮಗೆಲ್ಲಿದೆ ಬುದ್ಧಾ?!
ದರಿದ್ರರೆಂಬಾ-ಪಟ್ಟ,
ಹರಿಜನರೆಂಬಾ-ಚಟ್ಟ,
ನಮಗಲ್ಲದೆ ಇನ್ಯಾರಿಗಿದೆ ಬುದ್ಧಾ?!
*

ನಿದ್ದಿಲ್ಲದೆ,
ಬುದ್ಧಿಲ್ಲದೆ,
ದುಡಿದ ದೇಹಕ್ಕಿಲ್ಲ ತುಂಡು ಬಟ್ಟೆ?!
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ದರಿದ್ರ ಜನರೆಂದು ಜರಿವಾಗ
ಬಾಹುಬಲಿಯೆಂಬಾಪಟ್ಟ,
ಹೊಲಗೇರಿಯವರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಬೋಧಿ ವೃಕ್ಷದಾ ಕೆಳಗೆ!
ಮರ, ಗಿಡಗಳಾ ಆಸರೆಲಿ,
ನಿದ್ದಿಲ್ಲದೆ, ರಾತ್ರೆಲ್ಲ ಎದ್ದು,
ಬೋಧಿವೃಕ್ಷಕೆ, ತೊಟ್ಟಿಲ ಕಟ್ಟಿ, ತೂಗಿದರೂ…
ಬುದ್ಧನಾಗುವಾ ಯೋಗ, ನಮೆಗೆಲ್ಲಿದೆ ಬುದ್ಧಾ…?!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...