Home / ಕವನ / ಕವಿತೆ / ಬುದ್ಧನಾಗುವ ಬಯಕೆ

ಬುದ್ಧನಾಗುವ ಬಯಕೆ

ಬುದ್ಧನಾಗಲಿಲ್ಲ ನಾ
ಕೇರಿಂದೆದ್ದು ಬರಲಾಗಲೇ ಇಲ್ಲ!
ಬಿದ್ದಲ್ಲೆ ಬಿದ್ದು ಬಿದ್ದು…
ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು…
ಒದ್ದಾಡುತ್ತಿರುವೆ!
ಕೇರಿಂದೆ ಹೊರಗೇ ಬರಲಾಗಲೇ ಇಲ್ಲ
ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ!
*

ಜಗವೆಲ್ಲ ಮಲಗಿರಲು
ಶತಶತಮಾನಗಳಿಂದಾ ಎದ್ದಿರುವೆವು ನಾವು!
ನಿದ್ದಿಲ್ಲದೆ, ಮನೆ, ಮಠ, ಸೂರಿಲ್ಲದೇ…
ಬುದ್ಧನಾಗುವ ಸಂಕಲ್ಪ ನಮಗುಂಟೇ?!
ಹೊಟ್ಟೆ, ಬಟ್ಟೆಗೆ,
ಆಸೆ ಪಟ್ಟು
ಕಟ್ಟು ನಿಟ್ಟಿಗೆ,
ಒಳಪಟ್ಟು
ಗತಿಗೆಟ್ಟವರೆಂಬಾಪಟ್ಟ,
ಗಿರಿಜನರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಸಾವೆಂಬಾ ಅವಮಾನ!
ಕಂಗೆಟ್ಟ ಹಸಿವು,
ರೋಗರುಜಿನೆಂಬಾ ಹಾಸಿಗೆ
ಬಡತನವೆಂಬಾ ಸಂಕೋಲೆ
ಜಾತಿ, ಮತ, ಕುಲ, ಭೇದಗಳೆಂಬಾ ಕೆಂಭೂತ,
ಅನಕ್ಷರೆಂಬಾಭೂತ
ಸಂಸಾರವೆಂಬಾ ಪಿಶಾಚಿಗೆ,
ಬೇಸತ್ತರೂ ವೈರಾಗ್ಯವೆಂಬುದಿಲ್ಲ!
ಇನ್ನು ಬುದ್ಧನಾಗುವ ಬಯಕೆ…
ನಮಗೆಲ್ಲಿದೆ ಬುದ್ಧಾ?!
ದರಿದ್ರರೆಂಬಾ-ಪಟ್ಟ,
ಹರಿಜನರೆಂಬಾ-ಚಟ್ಟ,
ನಮಗಲ್ಲದೆ ಇನ್ಯಾರಿಗಿದೆ ಬುದ್ಧಾ?!
*

ನಿದ್ದಿಲ್ಲದೆ,
ಬುದ್ಧಿಲ್ಲದೆ,
ದುಡಿದ ದೇಹಕ್ಕಿಲ್ಲ ತುಂಡು ಬಟ್ಟೆ?!
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ದರಿದ್ರ ಜನರೆಂದು ಜರಿವಾಗ
ಬಾಹುಬಲಿಯೆಂಬಾಪಟ್ಟ,
ಹೊಲಗೇರಿಯವರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಬೋಧಿ ವೃಕ್ಷದಾ ಕೆಳಗೆ!
ಮರ, ಗಿಡಗಳಾ ಆಸರೆಲಿ,
ನಿದ್ದಿಲ್ಲದೆ, ರಾತ್ರೆಲ್ಲ ಎದ್ದು,
ಬೋಧಿವೃಕ್ಷಕೆ, ತೊಟ್ಟಿಲ ಕಟ್ಟಿ, ತೂಗಿದರೂ…
ಬುದ್ಧನಾಗುವಾ ಯೋಗ, ನಮೆಗೆಲ್ಲಿದೆ ಬುದ್ಧಾ…?!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...